ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ :

ಯಲಹಂಕ : ಸಹಕಾರ ಸಂಘಗಳು ಶೀಘ್ರ ರೀತಿಯಲ್ಲಿ ಸ್ಪಂದಿಸಿ, ನೆರವು ನೀಡುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನತೆಯ ಪಾಲಿಗೆ ಭರವಸೆಯ ಬೆಳಕಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.

ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿಯ ಪುನೀತ್ ರಾಜ್‍ಕುಮಾರ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘ(ನಿ.)ದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಇತರೆ ಬ್ಯಾಂಕ್ ಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನತೆ ಸಾಲ ಪಡೆಯಲು ಹಲವು ಕಠಿಣ ನಿಯಮಾವಳಿಗಳು ಇರುತ್ತವೆ, ಅವುಗಳನ್ನು ಪೂರ್ಣಗೊಳಿಸಿ ಸಾಲ ಪಡೆಯುವ ವೇಳೆಗೆ ಹೈರಾಣಾಗಿ ಬಿಡುವ ವಾತಾವರಣ ವಿರುತ್ತದೆ. ಹಾಗೆಂದ ಮಾತ್ರಕ್ಕೆ ಸಹಕಾರ ಸಂಘಗಳಲ್ಲಿ ನಿಯಮಾ ವಳಿಗಳಿಲ್ಲ ಎಂದರ್ಥವಲ್ಲ, ಆದರೆ ನಿಯಮಗಳಲ್ಲಿ ಸರಳತೆ, ಸಡಿಲತೆ ಇರುವ ಕಾರಣದಿಂದ ಸಾಲ ಸುಲಭ ವಾಗಿ ಮತ್ತು ಸಕಾಲಕ್ಕೆ ಸರಿಯಾಗಿ ದೊರೆಯುತ್ತದೆ. ಅಲ್ಲದೆ ಸಹಕಾರ ಸಂಘಗಳು ನಮ್ಮ ನಡುವೆಯೇ ಜನತೆಯ ವಿಶ್ವಾಸದೊಂದಿಗೆ ಕಾರ್ಯನಿರ್ವಹಿಸುವ ಮೂಲಕ ನಮ್ಮ ಸಹಕಾರ ಸಂಘ ಎಂಬ ಭಾವನೆ ಮೂಡುವಂತೆ ಕಾರ್ಯ ನಿರ್ವಹಿಸುತ್ತವೆ ಎಂದರು.

ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷೆ ವಾಣಿಶ್ರೀ ವಿಶ್ವನಾಥ್ ಮಾತನಾಡಿ ‘ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದಲ್ಲಿ 7120 ಜನ ಸದಸ್ಯರಿದ್ದು, ಈ ಭಾಗದ ರೈತರು, ಕಾರ್ಮಿಕರು ಮತ್ತು ಮಹಿಳೆಯರ ಜೀವನಾಡಿಯಾಗಿ ಕೆಲಸ ಮಾಡುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಜನತೆಗೆ ತ್ವರಿತ ಸಾಲದ ನೆರವು ನೀಡುವ ಮೂಲಕ ಅವರ ಬದುಕು ರೂಪಿಸುವ ಕಾರ್ಯವನ್ನು ಶ್ರದ್ಧೆಯಿಂದ ಮಾಡುತ್ತಿದೆ. ಪ್ರಸಕ್ತ ವರ್ಷದಲ್ಲಿ 190 ಕೋಟಿ ಠೇವಣಿ ಸಂಗ್ರಹವಾಗಿದ್ದು, 6 ಕೋಟಿ 12 ಲಕ್ಷ ರು.ಗಳಿಗೂ ಹೆಚ್ಚು ಲಾಭಾಂಶ ಬಂದಿದೆ. ಲಾಭಾಂಶದಲ್ಲಿ ಶೇ.16% ಡಿವಿಡೆಂಟ್ ಹಂಚಿಕೆ ಮಾಡಲಾಗಿದೆ. ನಮ್ಮ ಸಹಕಾರ ಸಂಘದಲ್ಲಿ ರೈತರಿಗೆ 5 ಲಕ್ಷದ ವರೆಗೆ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ವಿತರಣೆ, ಶೇ.3% ಬಡ್ಡಿದರದಲ್ಲಿ ಟ್ರ್ಯಾಕ್ಟರ್, ಪಂಪ್ ಸೆಟ್ ಖರೀದಿಗೆ ಸಾಲ, 15 ಲಕ್ಷದವರೆಗೆ ಮನೆಸಾಲ, ವ್ಯಾಪಾರ ಸಾಲ, ಆಭರಣ ಸಾಲ, ಅಡಮಾನ. ಸಾಲ ಮುಂತಾದ ದೀರ್ಘಾವಧಿ ಸಾಲಗಳನ್ನು ನೀಡಲಾಗುವುದು.

ಇಂದಿನ ವಾರ್ಷಿಕ ಮಹಾಸಭೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್. ಎಸ್.ಎಲ್.ಸಿ. ಮತ್ತು ಪಿಯುಸಿ ಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ 70ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದ್ದು, ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಗುಡಿ ಕೈಗಾರಿಕೆ, ಕರಕುಶಲ ಉದ್ಯಮ ನಡೆಸಲು ನೆರವು ನೀಡುವ ಕಾರ್ಯ ವನ್ನು ನಮ್ಮ ಸಂಘವು ಕಳೆದ ಹಲವು ವರ್ಷಗಳಿಂದ ಅವ್ಯಾಹತ ವಾಗಿ ಮುಂದುವರೆಸಿಕೊಂಡು ಬಂದಿದೆ. ಬಡ ಮತ್ತು ಮಧ್ಯಮ ವರ್ಗದ ಜನತೆಯ ಬದುಕು ರೂಪಿಸುವ ಕಾರ್ಯವನ್ನು ಪ್ರಮುಖ ಧ್ಯೇಯವಾಗಿಸಿಕೊಂಡು ನಮ್ಮ ಸಹಕಾರ ಸಂಘ ಕಾರ್ಯ ನಿರ್ವಹಿಸುತ್ತಿದೆ ಎಂದರು.

ವಾರ್ಷಿಕ ಮಹಾಸಭೆಯಲ್ಲಿ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ನಿರ್ದೇಶಕರಾದ ಎಸ್.ಕೆ.ನಾಗರಾಜರೆಡ್ಡಿ, ಎಂ.ಮಂಜುನಾಥ್, ಮುನಿಯಪ್ಪ(ಕೂರ್ಲಪ್ಪ), ನಾಗೇನಹಳ್ಳಿ ಶಿವಕುಮಾರ್, ಎಂ.ಪಿ.ಈಶ್ವರಾಚಾರ್, ವೈ.ಕೆ.ಮುರಾರಿರಾಮು, ಎಂ.ಪಿ.ಈಶ್ವರಾಚಾರ್, ಎನ್.ಎ.ಚಂದ್ರು, ಕೆ.ಆರ್.ಪುಟ್ಟರಾಜು (ಕೋಗಿಲು, )ಜಿ.ಎಸ್.ಪುಷ್ಪಲತಾ, ಅಮರಾವತಿ, ಎ.ತಿಮ್ಮರಾಯಗೌಡ, ಎಸ್.ಎನ್.ರಾಮಚಂದ್ರರೆಡ್ಡಿ ಸೇರಿದಂತೆ ಇನ್ನಿತರರಿದ್ದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

ಆರ್ ಹನುಮಂತು

9845085793

7349337989

Leave a Reply

Your email address will not be published. Required fields are marked *