





ಯಲಹಂಕ : ಭಾರತೀಯ ಸಂಸ್ಕೃತಿಯ ಕಾಟನ್ ಧೋತಿ ಮತ್ತು ಶರ್ಟ್ ಉತ್ಪಾದನೆ ಮತ್ತು ಮಾರಾಟದಲ್ಲಿ ಪ್ರಖ್ಯಾತಿ ಪಡೆದಿರುವ ರಾಮ್ ರಾಜ್ ಕಾಟನ್ ಸಂಸ್ಥೆಯ ಸಿಂಗನಾಯಕನಹಳ್ಳಿ ನೂತನ ಮಾರಾಟ ಮಳಿಗೆಯನ್ನು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಶುಕ್ರವಾರ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ರಾಮ್ ರಾಜ್ ಕಾಟನ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಆರ್.ನಾಗರಾಜನ್, ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್. ರಾಜಣ್ಣ, ಸಿಂಗನಾಯಕನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಅಮರಾವತಮ್ಮ, ಉಪಾಧ್ಯಕ್ಷ ಹೇಮಂತ್ ಕುಮಾರ್, ಮಾಜಿ ಅಧ್ಯಕ್ಷರಾದ ಮುನಿರೆಡ್ಡಿ, ಚಂದ್ರಶೇಖರ್, ಮಾಜಿ ಉಪಾಧ್ಯಕ್ಷ ಎಸ್.ಜಿ.ಪ್ರಶಾಂತರೆಡ್ಡಿ, ಆರ್ ಎಸ್ ಎಸ್ ಎನ್ ಬ್ಯಾಂಕ್ ನಿರ್ದೇಶಕ ಮಂಜುನಾಥರೆಡ್ಡಿ, ರಾಜಾನುಕುಂಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಎಸ್.ಜಿ.ನರಸಿಂಹಮೂರ್ತಿ (ಎಸ್.ಟಿ.ಡಿ.ಮೂರ್ತಿ), ವಡೇರಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ನಾಗೇಶ್, ಸಿಂಗನಾಯಕನ ಹಳ್ಳಿ ಗ್ರಾ.ಪಂ. ಸದಸ್ಯರಾದ ಪದ್ಮಶ್ರೀ ನಾಗರಾಜರೆಡ್ಡಿ, ಜೀವಿತಾ ಮುನಿಕೃಷ್ಣ, ಮಲ್ಲೇಶ್, ನಂಜೇಗೌಡ, ಕೆಂಪೇಗೌಡ, ಬಿಜೆಪಿ ಮುಖಂಡರಾದ ಮುನಿಕೃಷ್ಣ, ರಾಮ್ ರಾಜ್ ಸಂಸ್ಥೆಯ ಸಿಂಗನಾಯಕನಹಳ್ಳಿ ಶಾಖೆಯ ವ್ಯವಸ್ಥಾಪಕ ಪ್ರಸನ್ನ ಸೇರಿದಂತೆ ಇನ್ನಿತರರಿದ್ದರು.
ರಾಮ್ ರಾಜ್ ಸಂಸ್ಥೆಯ ಸಿಂಗನಾಯಕನಹಳ್ಳಿಯ ಈ ನೂತನ ಶಾಖೆಯು ಕರ್ನಾಟಕ ರಾಜ್ಯದ 67ನೆಯ ಶಾಖೆಯಾಗಿದ್ದು, ಬೆಂಗಳೂರು ನಗರದ 26ನೆಯ ಶಾಖೆಯಾಗಿ ಶುಕ್ರವಾರ ಆರಂಭಗೊಂಡಿದೆ.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಧೋತಿ ಉಟ್ಟ ಕಾರಣಕ್ಕಾಗಿ ನಗರದ ಮಾಲ್ ಒಂದರಲ್ಲಿ ಪ್ರವೇಶ ನಿಷೇಧಕ್ಕೆ ಒಳಗಾಗಿದ್ದ ಹಾವೇರಿಯ ರೈತ ಫಕೀರಪ್ಪ ಮೆಣಸಿನಹಾಳ ಅವರನ್ನು ರಾಮ್ ರಾಜ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಆರ್.ನಾಗರಾಜನ್ ಸಾಂಪ್ರದಾಯಿಕ ಧೋತಿ, ಶರ್ಟ್ ನೊಂದಿಗೆ ಗೌರವಿಸಿ ಸನ್ಮಾನಿಸಿದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
9845085793
7349337989