ಬೆಟ್ಟಹಲಸೂರು ಗ್ರಾಮ ಪಂಚಾಯಿತಿಯಲ್ಲಿ 2023-24ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆ :

ಬ್ಯಾಟರಾಯನಪುರ : ಗ್ರಾಮ ಸಭೆಗಳಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳುವುದ ರಿಂದ ಗ್ರಾಮಸ್ಥರ ಮತ್ತು ಗ್ರಾಮಗಳ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ಸಹಕಾರಿಯಾಗುತ್ತದೆ ಎಂದು ಬೆಟ್ಟಹಲಸೂರು ಗ್ರಾ.ಪಂ. ಅಧ್ಯಕ್ಷೆ ಹೇಮಾವತಿ ನಾಗರಾಜ್ ಬಾಬು ಅಭಿಪ್ರಾಯಪಟ್ಟರು.

ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಬೆಟ್ಟಹಲಸೂರು ಗ್ರಾ.ಪಂ.ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 2023-24ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಜಾಲ ಹೋಬಳಿಯ ಮೂರು ಕಡೆಗಳಲ್ಲಿ ಇಂದು ಗ್ರಾಮಸಭೆ ಆಯೋಜಿಸಿರುವ ಕಾರಣದಿಂದಾಗಿ ನಮ್ಮ ಗ್ರಾಮಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಸಕರು ಪಾಲ್ಗೊಂಡಿಲ್ಲ. ಗ್ರಾ.ಪಂ.ಅಧ್ಯಕ್ಷೆಯಾಗಿ ಪದಗ್ರಹಣ ಮಾಡಿದ ನಂತರ ಇದೇ ಮೊದಲ ಗ್ರಾಮಸಭೆಯಲ್ಲಿ ನಾನು ಪಾಲ್ಗೊಂಡಿದ್ದು, ಹಲವು ನಿರೀಕ್ಷೆ ಗಳು, ಭರವಸೆಗಳನ್ನು ಇಟ್ಟು ಕೊಂಡು ಜನತೆ ಗ್ರಾಮ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇಂತಹ ವೇಳೆ ಯಲ್ಲಿ ಅಧಿಕಾರಿಗಳು, ಕ್ಷೇತ್ರದ ಶಾಸಕರು ಗ್ರಾಮಸಭೆಯಲ್ಲಿ ಪಾಲ್ಗೊಂಡಿದ್ದಿದ್ದರೆ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಬಹುದಿತ್ತು. ಆದರೆ ಮುಂದಿ‌ನ ದಿನಗಳಲ್ಲಿ ಅಧಿಕಾರಿಗಳು ಮತ್ತು ಶಾಸಕರನ್ನು ಆಹ್ವಾನಿಸಿ ಅವರ ಸಕ್ಷಮದಲ್ಲೇ ಗ್ರಾಮಸಭೆ ನಡೆಸುವ ಮೂಲಕ ಗ್ರಾಮಗಳ ಮತ್ತು ಗ್ರಾಮಸ್ಥರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವ ಭರವಸೆ ನೀಡಿದರು.

ಗ್ರಾಮಸಭೆಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇ.70% ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಅಂಗವಿಕಲರಿಗೆ ಸಹಾಯಧನ, ಕ್ರೀಡಾಪಟುಗಳಿಗೆ ಕ್ರೀಡಾ ಉಪಕರಣಗಳು ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

ಗ್ರಾಮಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಬಿ.ಆರ್. ಪ್ರವೀಣ್, ಮಾಜಿ ಅಧ್ಯಕ್ಷರಾದ ಬಿ.ಎಂ. ನಾಗೇಶ್, ಬಿ.ಎಸ್.ಅನಿಲ್  ಕುಮಾರ್, ಮಾಜಿ ಉಪಾಧ್ಯಕ್ಷೆ  ವಿಮಲಎಸ್.ಕೆ.ಗಣೇಶ್, ತಾ.ಪಂ.ಮಾಜಿ ಸದಸ್ಯ ಬಿ.ನಾಗರಾಜ್ ಬಾಬು, ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಟಿ.ಪಿ.ಪ್ರಕಾಶ್, ಗ್ರಾ.ಪಂ. ಸದಸ್ಯರಾದ  ಬಿ.ಆರ್. ರಾಮಾಂಜಿನಿ, ಸಾವಿತ್ರಮ್ಮ  ಮುನಿರಾಜು, ಕೆ.ಮಮತಾ ಪ್ರಶಾಂತ್, ಬಿ ವೈ. ಮಂಜುನಾಥ್, ಟಿ.ಎಸ್.ನವೀನ್ ಕುಮಾರ್, ಎಸ್.ಬಾಲರಾಜು,  ನಾಗರತ್ನ ಸುಬ್ರಮಣಿ, ಬಿ.ಎಸ್.ಮೋಹನ್ ಸಿದ್ದರಾಜು, ಬಿ.ಎಂ.ಸವಿತಾ ಕೃಷ್ಣಮೂರ್ತಿ,  ಪ್ರೇಮ ಎಂ. ಮಂಜುನಾಥ್, . ಟಿ.ಬಿ.ಅಮರ ನಾಥ್, ಸುಮಿತ್ರಮ್ಮ ರಾಜಣ್ಣ, ಬಿ.ಕೆ.ರತ್ನಮ್ಮ ಆಂಜಿನಪ್ಪ,  ಸುವರ್ಣ ಕೆ.ಜಯಣ್ಣ, ಮುನಿಕೃಷ್ಣಪ್ಪ, ಪಿ.ಎಸ್.ರಮ್ಯಾ ವೇಣುಗೋಪಾಲ್, ತುಳಸಮ್ಮ  ವೆಂಕಟರಮಣಪ್ಪ, ಆನಂದ್, ರಾಜಣ್ಣ, ರಾಮಮೂರ್ತಿ, ಪ್ರೇಮ ಚಂದ್ರಮೂರ್ತಿ, ಪಿಡಿಓ ಲೋಕನಾಥ್ ಪಿ.ಎಸ್., ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ಸೇರಿದಂತೆ  ಗ್ರಾ.ಪಂ. ಸಿಬ್ಬಂದಿ ಗಳು, ವಿವಿಧ ಇಲಾಖೆಗಳ  ಅಧಿಕಾರಿಗಳು, ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳ ನಾಗರೀಕರಿದ್ದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

ಆರ್ ಹನುಮಂತು

9845085793

7349337989

Leave a Reply

Your email address will not be published. Required fields are marked *