Category: Blog

Your blog category

ಚಿತ್ರಸುದ್ದಿ : ಸ್ವಚ್ಛತಾ ಹಿ ಸೇವಾ ಅಭಿಯಾನದ ಪ್ರಯುಕ್ತ ನಗರದ ಬಾಗಲೂರು ಕ್ರಾಸ್ ಸಮೀಪ ಇರುವ ಬಿಎಸ್‌ಎಫ್ ಸಹಾಯಕಪ್ರಶಿಕ್ಷಣ ಕೇಂದ್ರದ ನೂರಾರು ಯೋಧರು. ಯಲಹಂಕ ಹಳೇನಗರದ ಸಮೀಪ ಸ್ವಚ್ಛತಾ ಕಾರ್ಯ ಕೈಗೊಂಡರು. ಇದೇ ಸಂದರ್ಭದಲ್ಲಿ ಬೆಂಗಳೂರು ಬಿಎಸ್‌ಎಫ್ ಸಹಾಯಕ ಪ್ರಶಿಕ್ಷಣ ಕೇಂದ್ರದ ಐಜಿ ಗಳಾದ ಜಾರ್ಜ್ ಮಂಜೂರನ್,ಕಮಾಂಡೆಂಟ್ ವಿಪಿನ್ ವಿಲಾಸ್ ನಾಯ್ಕ್, ಇನ್ಸ್‌ಪೆಕ್ಟರ್ ಸಹದೇವ್ ಸೇಥಿ ಸೇರಿದಂತೆ ಇನ್ನಿತರ ಗಣ್ಯರಿದ್ದರು.

ಗಾಂಧಿ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಸ್ವಚ್ಛತಾ ಹಿ ಸೇವಾ ಅಭಿಯಾನದ ಹಿನ್ನೆಲೆಯಲ್ಲಿ ಯಲಹಂಕ ಶಾಸಕ, ಟಿ.ಟಿ.ಡಿ ಆಡಳಿತ ಮಂಡಳಿ ನಿರ್ದೇಶಕ ಎಸ್.ಆರ್ ವಿಶ್ವನಾಥ್ ಸಿ.ಆರ್.ಪಿ.ಎಫ್ ಯೋಧರು ಮತ್ತು ಶಾಲೆಯ ಮಕ್ಕಳೊಂದಿಗೆ ಪಾಲ್ಗೊಂಡರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

ಖಾಸಗಿ ಕಂಪನಿಗಳ ಹಾವಳಿ ತಪ್ಪಿಸಲು ರೈತರ ಉತ್ಪಾದಕರ ಸಂಘ ಸಹಕಾರಿ:- ವಿಜಯ್ ಬಾವರೆಡ್ಡಿ.

ಬಯಲು ಸಿಂಹ ಸುದ್ದಿ ಶಿಡ್ಲಘಟ್ಟ ವರದಿ -ಸದಾನಂದ ಶಿಡ್ಲಘಟ್ಟ,ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಎಲ್ಲಾ ಹಳ್ಳಿಗಳ ರೈತರಿಗೆ ಅನುಕೂಲವಾಗುವಂತೆ ಗಂಗಾಭವಾನಿ ತೋಟಗಾರಿಕೆ ಉತ್ಪಾದಕರ ಸಹಕಾರ ಸಂಘವು ಒಂದು ವರ್ಷದ ಹಿಂದೆ ಆರಂಭವಾಗಿದ್ದು, ಇದರ ವಾರ್ಷಿಕೋತ್ಸವ ಸಮಾರಂಭವನ್ನು ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮಕ್ಷಮದಲ್ಲಿ ನೆರವೇರಿಸಲಾಯಿತು.…

ಸ್ವಚ್ಚತೆಯೇ ಸೇವೆ ಸೇವೆಯೇ ಸ್ವಚ್ಚತೆ – ಇವು ವ್ಯಕ್ತಿಯೊಬ್ಬನ ದೃಢ ಹಕ್ಕು – ವಿದ್ಯಾರ್ಥಿಗಳಿಗೆ ಸ್ವಚ್ಚತಾ ಪ್ರತಿಜ್ಞಾ ವಿಧಿ ಬೋಧಿಸಿದ ಅಧ್ಯಕ್ಷರು ಶ್ರೀ. ಎಸ್.ಎಸ್ ದೊಡ್ಡಣ್ಣನವರ್

ದಿನಾಂಕ 30 – 9 – 2023ರ ಶನಿವಾರದಂದು ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆಯು ಗಾಂಧಿ ಜಯಂತಿಯ ಪ್ರಯುಕ್ತ 3 ದಿವಸಗಳ ಸ್ವಚ್ಛತಾ ಕಾರ್ಯ ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರ ಚಟುವಟಿಕೆಯನ್ನು ಹಮ್ಮಿಕೊಂಡಿದ್ದು…

ಸೇವೆಯ ಮೂಲಕವೂ ದೇಶವನ್ನು ಸಂರಕ್ಷಿಸಲು ಸಾಧ್ಯ. ಮಾಜಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ – ರಾಜ್ಯ ಪ್ರಶಸ್ತಿ ಪುರಸ್ಕೃತರು
(ಡಾ. ಶೀಲಾದೇವಿ ಎಸ್ ಮಳಿಮಠ)

ದಿನಾಂಕ 25 -9 – 2023ರ ಸೋಮವಾರ NSS ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕುಮಾರಿ ವರ್ಷಾ ಕೆ.ಸಿ 2023ರ ಪಥಸಂಚಲನದಲ್ಲಿ ರಾಜ್ಯದ ಪುರಸ್ಕಾರ ಪಡೆದ ಹಾಗೂ ಗಣರಾಜ್ಯೋತ್ಸವದಲ್ಲಿ NSS ನ Team leader ಆಗಿದ್ದ ಇವರು ಆಗಮಿಸಿ “ರಾಷ್ಟ್ರೀಯ ಭಾವೈಕೃತೆಯ…

ವಿದ್ಯಾಗುರುಗಳಾದ ಹಿರಿಯ ವಿದ್ವಾಂಸರು ಪ್ರೊ ಜಿ. ಅಶ್ವತ್ಧ ನಾರಾಯಣರವರ ಮಾರ್ಗದರ್ಶನವೇ ನನ್ನ ಶ್ರೀರಕ್ಷೆ – ಪ್ರಾಂಶುಪಾಲರು. ಡಾ. ಶೀಲಾದೇವಿ ಎಸ್.ಮಳಿಮಠ ರವರ ಅಭಿಮತ

ದಿನಾಂಕ 5-9-2023ರಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಕಳೆದ 40 ವರ್ಷಗಳಿಂದಲೂ ವಿದ್ಯ ಗುರುಗಳಾದ ಹಿರಿಯ ವಿದ್ಯಾಂಸರೂ, ವಿಮರ್ಶಕರೂ ಆದ ಪ್ರೊ ಜಿ ಅಶ್ವತ್ಥ ನಾರಾಯಣರವರ ಗೃಹಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡು ಅವರು ಹಾಕಿಕೊಟ್ಟ ಮಾರ್ಗದಶ೯ನ ದಲ್ಲಿಯೇ ಇಂದಿಗೂ ನಡೆಯುತ್ತಿರುವ ಅಪರೂಪದ…

ಬಯಲು ಸಿಂಹ ಸುದ್ದಿ
ದಿನಾಂಕ 23-9-2023ರ ಶನಿವಾರದಂದು ಎಸ್ ಜೆ ಆರ್ ಕಾಲೇಜಿನಲ್ಲಿ ಆಯೋಜಿಸಿದ ವಿಶೇಷ ಉಪನ್ಯಾಸ ಹಾಗೂ ಗೌರವ ಸಮರ್ಪಣೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರ ಒಕ್ಕೂಟದಿಂದ ನಡೆದ ನಿವೃತ್ತ ಪ್ರಾಧ್ಯಾಪಕರ ಗೌರವ ಸಮರ್ಪಣೆಯ ಕಾರ್ಯಕ್ರಮದಲ್ಲಿ ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ – ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳಿಮಠರವರು ಗೌರವ ಸ್ವೀಕರಿಸಿ ತಮ್ಮ 34 ವರ್ಷದ ಬಿಎಂಎಸ್ ಮಹಿಳಾ ಮಹಾವಿದ್ಯಾಲಯದಲ್ಲಿನ ಶೈಕ್ಷಣಿಕ ಸೇವೆಯನ್ನು ಸ್ಮರಿಸುತ್ತ ಶಿಕ್ಷಕವೃತ್ತಿ ಅತ್ಯಂತ ಮಹತ್ವಪೂರ್ಣ ಪ್ರಚಾಪ್ರಭುತ್ವದ ಧ್ವನಿಯಂತಿರುವುದು – ಇಂತಹ ವೃತ್ತಿ ಗೆದ್ದಾಗ ಬಾಗುವುದನ್ನು ಸೋತಾಗ ಪ್ರಯತ್ನಶೀಲರಾಗುವುದನ್ನು ಕಲಿಸಿಕೊಟ್ಟಿತು ಎಂದು ತಿಳಿಸುತ್ತ ಕನ್ನಡ ಅಧ್ಯಾಪಕರ ಒಕ್ಕೂಟದ ಕಾರ್ಯಕರ್ತರನ್ನು ಶ್ಲಾಘಿಸಿದರು.ಶೀರ್ಷಿಕೆ – ಗೆದ್ದಾಗ ಬಾಗುವ – ಸೋತಾಗ ಪ್ರಯತ್ನಶೀಲರಾಗುವ ಸಂಕೇತವೇ ಶಿಕ್ಷಕವೃತ್ತಿ ಪ್ರಾಂಶುಪಾಲರು. ಡಾ. ಶೀಲಾದೇವಿ ಎಸ್. ಮಳಿಮಠ

ಮಕ್ಕಳು, ಮಹಿಳೆಯರಲ್ಲಿ ಅಪೌಷ್ಟಿಕತೆ ನಿವಾರಣೆಗೆ ವಿಶ್ವ ಪೋಷಣ್ ದಿನಾಚರಣೆ: ಶ್ರೀನಿವಾಸ್: ಕೆಜಿಎಫ್: ವಿದ್ಯಾರ್ಥಿನಿಯರು, ಮಕ್ಕಳು ಮಹಿಳೆಯರಲ್ಲಿ ವೈಯಕ್ತಿಕ ಸ್ವಚ್ಛತೆ. ಸಮತೋಲಿನ ಆಹಾರ, ಆರೋಗ್ಯ ರಕ್ಷಣೆ ಮತ್ತು ಪೌಷ್ಠಿಕತೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದಲೇ ಪ್ರಧಾನ ಮಂತ್ರಿಗಳ ಪೋಷಣೆ ಮಾಸಾಚರಣೆ ಆಚರಿಸಲಾಗುತ್ತದೆ ಎಂದು. ಶಾಲೆಯ ಮುಖ್ಯ ಶಿಕ್ಷಕ ಎಂ ಶ್ರೀನಿವಾಸ್ ತಿಳಿಸಿದರು .ಕೆಜಿಎಫ್ ತಾಲೂಕಿನ ಮಸ್ಕಾಂ ಶಾಲೆಯಲ್ಲಿ ಪೋಷಣ್ ದಿನಾಚರಣೆ ಮಾಸ ಆಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು. ಮಕ್ಕಳ ಉತ್ತಮ ಆರೋಗ್ಯಕರ ಪೋಷಣೆಯೊಂದಿಗೆ ಉತ್ತಮ ಕಲಿಕೆಯನ್ನು ವೃದ್ಧಿಸುವದೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಮಹಿಳೆಯರಲ್ಲಿ ಅದರಲ್ಲೂ ಗರ್ಭಿಣಿಯದಲ್ಲಿ ಅಪೌಷ್ಟಿಕತೆ ಕಾಡಿದ್ದಲ್ಲಿ ಅದು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ ಆದ್ದರಿಂದಲೇ ಸರ್ಕಾರ ಪೋಷಣ್ ಮಾಸಾಚರಣೆ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಎಂ ಶ್ರೀನಿವಾಸ್ ಶಾಲೆಯ ಸಿಬ್ಬಂದಿ ವರ್ಗ ಮಕ್ಕಳು ಇದ್ದರು