Category: Blog

Your blog category


ಬಳ್ಳಾರಿ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿಗಳ ಅವರ ಮನೆಗೆ ರಾತ್ರಿ ಹೋಗಿ ಸಮಸ್ಯೆಗಳ ಬಗ್ಗೆ ಹಾಸ್ಟ ಲ್ ನ ವಿದ್ಯಾರ್ಥಿಗಳು ಅಳಿಲನ್ನು ಹೇಳುತ್ತಿದ್ದಾಗಲೇ ಬೈದು ಕಳಿಸಿದ್ದಲ್ಲದೆ ವಿದ್ಯಾರ್ಥಿಗಳನ್ನು ಹಾಸ್ಟೆಲಿನಿಂದ ಹೊರಗೆ ಹಾಕಿಸಿದಂತ ಹಿಂದಿನ ಜಿಲ್ಲಾಧಿಕಾರಿಗಳ ಮೇಲೆ ಕ್ರಮ ಜರುಗಿಸಲಾರದೆ ಇಲ್ಲದ್ದರಿಂದ ಮತ್ತೆ ಹಾಸ್ಟೆಲಿನ ವಾರ್ಡನ್ ದಲಿತ ವಿದ್ಯಾರ್ಥಿಯ ಮೇಲೆ ಮರಣಾಂತಿಕವಾಗಿ ಹಲ್ಲೆ ಮಾಡಿದ್ದರಿಂದ ಕೂಡಲೇ ಜಿಲ್ಲಾ ಸಮಾಜ ಕಲ್ಯಾಣ ಸಮಾಜ ಅಧಿಕಾರಿಗಳನ್ನು ಅಮಾನತ್ ಗೊಳಿಸಿ ಹಾಗೂ ವಾರ್ಡನ್ ಖಾಯಂ ಸಸ್ಪೆಂಡ್ ಮಾಡಿಸಿ ಪ್ರಕರಣ ದಾಖಲಾದರು ಬಂಧಿಸಲಾರದೆ ಇದರಿಂದ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವ ಕುರಿತು ಸಂಬಂಧಿಸಿದಂತೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ (ರಿ) ಜಿಲ್ಲಾ ಸಮಿತಿ ಬಳ್ಳಾರಿ ಈಗ ತಮ್ಮ ಗಮನಕ್ಕೆ ತಂದು ಮನವಿ ಮಾಡಿಕೊಳ್ಳುವುದೇನೆಂದರೆ ಬಳ್ಳಾರಿ ನಗರದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಸ್ಟಲಿನ ದಲಿತ ವಿದ್ಯಾರ್ಥಿಗಳು ಓದುತ್ತಿದ್ದಾಗ ಈ ಹಿಂದೆ ಹಾಸ್ಟೆಲ್ ನ ಸಮಸ್ಯೆಗಳ ಬಗ್ಗೆ ಹಿಂದಿನ ಜಿಲ್ಲಾಧಿಕಾರಿಗಳ ಅವರ ಮನೆಗೆ ರಾತ್ರಿಯ ವೇಳೆ ಹೋಗಿ ಸಮಸ್ಯೆಗಳನ್ನು ಹೇಳುತ್ತಿದ್ದಾಗಲೇ ವಿದ್ಯಾರ್ಥಿಗಳಿಗೆ ದೌರ್ಜನ್ಯದಿಂದ ಗದರಿಸಿ ಬೈದಿದ್ದಲ್ಲದೆ ಸುಮಾರು ವಿದ್ಯಾರ್ಥಿ ಹಾಸ್ಟೆಲಿನಿಂದ ಕೂಡಲೇ ಹೊರಗೆ ಹಾಕಬೇಕೆಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಮೌಖಿಕವಾಗಿ ಆದೇಶ ಮಾಡಿ ಹೊರ ಹಾಕಿದ್ದರಿಂದ ಹಿಂದಿನ ಜಿಲ್ಲಾಧಿಕಾರಿಗಳು ಅಧಿಕಾರ ದರ್ಪ ದಿಂದ ವರ್ತನೆ ಮಾಡಿದ್ದಂತ ಹಿಂದಿನ ಜಿಲ್ಲಾಧಿಕಾರಿಗಳ ಮೇಲೆ ಕೂಡಲೆ ಕ್ರಮ ಜರಿಸ ಜರುಗಿಸಬೇಕೆಂದು ದಲಿತ ಪರ ಸಂಘಟನೆಗಳು ಹಿಂದಿನ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರುಗಳಿಗೆ ದೂರು ನೀಡಿದರು ಸಹ ಕ್ರಮ ಜರಗಿಸಲಾರದೆ ಇದ್ದರಿಂದ ಅಂದಿನಿಂದ ಸಮಾಜ ಕಲ್ಯಾಣ ಅಧಿಕಾರಿಗಳು ಹಾಗೂ ವಾರ್ಡನ್ ಗಳಿಗೆ ಗರ್ವ ಮತ್ತು ದರ್ಪ ಮಿತಿಮೀರಿ ಹೋಗಿದ್ದರಿಂದ ವಿದ್ಯಾರ್ಥಿಗಳಿಗೆ ಏನು ಮಾಡಿದರು ನಡೆದುಕೊಂಡು ಹೋಗುತ್ತದೆ ಮನಬಂದಂತೆ ಬೇಯುವುದು ಒಡೆಯುವುದು ನಿರಂತರವಾಗಿ ಹಾಸ್ಟೆಲ್ ನ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಿ ಹಲ್ಲೆಗಳು ನಡೆಸುತ್ತಿದ್ದು ಸರ್ವಸಾಮಾನ್ಯವಾಗಿ ಬಿಟ್ಟಿದೆ ಎಂದು ಸುಮಾರು ಹಾಸ್ಟೆಲಿನ ವಿದ್ಯಾರ್ಥಿಗಳ ನೊಂದ ಮಾತುಗಳಾಗಿದ್ದವು ಮೊನ್ನೆ ವಾರ್ಡನ್ ಮನೋಹರ್ ಪಾಟೀಲ್ ಇವರ ಹತ್ತಿರ ಗಣಪತಿ ಹಬ್ಬಕ್ಕೆ ಹೋಗಿ ಬರುತ್ತೇನೆ ಎರಡು ದಿನ ರಜೆ ಕೇಳಿದ್ದಕ್ಕಾಗಿ ದಲಿತ ವಿದ್ಯಾರ್ಥಿ ದಿವಾಕರ್ ಮೇಲೆ ದನಕ್ಕೆ ಹೊಡೆದಂಗೆ ಒಡೆಯುತ್ತಿದ್ದಾಗ ಹೊಡೆತಕ್ಕೆ ತಾಳಲಾರದೆ ಓಡಿ ಹೋದರು ಸಹ ಬಿಡಲಾರದೆ ಬೆನ್ನತ್ತಿ ಹಾಸ್ಟೆಲ್ ತುಂಬೆಲ್ಲ ಓಡಾಡಿಸಿ ತನ್ನ ಮನಬಂದಂತೆ ಹೊಡೆದು ಮರಣಾಂತಿಕವಾಗಿ ದೌರ್ಜನ್ಯದಿಂದ ಹಲ್ಲೆ ಮಾಡಿದಂತ ವಾರ್ಡನನ್ನ ಮೇಲೆ ಎಸ್ಸಿ ಎಸ್ಟಿ ಕಾಯ್ದೆ ಪ್ರಕರಣ ದಾಖಲಾದರೂ ಸಹ ಬಂದಿಸಲಾರದೆ ಇದ್ದು ಇದಕ್ಕೆಲ್ಲ ಸಮಾಜ ಕಲ್ಯಾಣ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆ ಕುಮ್ಮಕ್ಕು ಇದರಿಂದ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಅಮಾನತ್ ಗೊಳಿಸಿ ಹಾಗೂ ಹಾಸ್ಟಲಿ ನ ವಾರ್ಡನನ್ನು ಖಾಯಂವಾಗಿ ಸಸ್ಪೆಂಡ್ ಗೊಳಿಸಿ ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಈ ಮೂಲಕ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಲಾಗುತ್ತದೆ
ಒಂದು ವೇಳೆ ಇದರ ಬಗ್ಗೆ ಕ್ರಮ ಜರಗಿಸುವಲ್ಲಿ ನಿರ್ಲಕ್ಷ ವಹಿಸಿದ ಪಕ್ಷದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ವತಿಯಿಂದ ಮುಂದೆ ಉಗ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿ ಮತ್ತೊಮ್ಮೆ ತಮ್ಮಲ್ಲಿ ಮನವಿ ನೀಡಿದರು,
ಈ ವೇಳೆ
ಕೆ ಶಂಕರ್ ನಂದಿಹಾಳ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಸಿ ಹನುಮೇಶ ಕಟ್ಟಿಮನಿ ಜಿಲ್ಲಾ ಕಾರ್ಯಧ್ಯಕ್ಷರು
ಧರ್ಮಣ್ಣ ಜಿಲ್ಲಾಧ್ಯಕ್ಷರು
ಲಕ್ಷ್ಮಿಕಾಂತ್ ಸುಗ್ಗೇನಹಳ್ಳಿ ದಲಿತ ಮುಖಂಡರು
ಅಂಜಿನಿ ವಡ್ದು ತಾಲೂಕ ಅಧ್ಯಕ್ಷರು ಸಂಡೂರ್ ಕದರವೇ
ಜಯಣ್ಣ ಚರ ಕುಂಟೆ ಯುವ ಮುಖಂಡರು
ಪಿ ಸಣ್ಣ ವಲಿ ಚರಕುಂಟೆ ಅಲ್ಪಸಂಖ್ಯಾತರ ಮುಖಂಡರು ಉಮೇಶ ಮೇಸ್ತ್ರಿ ಛಲವಾದಿ ಕಾಲೋನಿ ಪ್ರೇಮ್ ಚಲವಾದಿ ಕಾಲೋನಿ ಮೊದಲಾದವರು ಇದ್ದರು,

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಅಲಿಯನ್ಸ್ ಮೇಲುಗೈ,ಇಂಡಿಯಾ ಹೆಸರು ಬದಲಾವಣೆಯಿಂದ ದೇಶಾಭಿವೃದ್ದಿಯಾಗೊಲ್ಲ ರಕ್ಷಾ ರಾಮಯ್ಯ 

ಚಿಕ್ಕಬಳ್ಳಾಪುರ: 2024 ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಅಲಿಯೆನ್ಸ್ ಅಧಿಕಾರಕ್ಕೆ ಬರುತ್ತೆ,ಎನ್ ಡಿ ಎ ಮತ್ತು ಮೋದಿ ತಂಡಕ್ಕೆ ಸೋಲು ಖಚಿತ,ಇಂಡಿಯಾ ಅಥವಾ ಭಾರತ ಹೆಸರು ಬದಲಾವಣೆ ಅವಶ್ಯಕತೆ ಇಲ್ಲಾ ಸಂವಿಧಾನದಲ್ಲಿಯೇ ಇಂಡಿಯಾ ಅಥವಾ ಭಾರತ ಎಂದೆ ನಮೂದಾಗಿದೆ ಹೆಸರು ಬದಲಾವಣೆಯಿಂದ ದೇಶ…

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಅಲಿಯನ್ಸ್ ಮೇಲುಗೈ,ಇಂಡಿಯಾ ಹೆಸರು ಬದಲಾವಣೆಯಿಂದ ದೇಶಾಭಿವೃದ್ದಿಯಾಗೊಲ್ಲ ರಕ್ಷಾ ರಾಮಯ್ಯ 

ಚಿಕ್ಕಬಳ್ಳಾಪುರ: 2024 ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಅಲಿಯೆನ್ಸ್ ಅಧಿಕಾರಕ್ಕೆ ಬರುತ್ತೆ,ಎನ್ ಡಿ ಎ ಮತ್ತು ಮೋದಿ ತಂಡಕ್ಕೆ ಸೋಲು ಖಚಿತ,ಇಂಡಿಯಾ ಅಥವಾ ಭಾರತ ಹೆಸರು ಬದಲಾವಣೆ ಅವಶ್ಯಕತೆ ಇಲ್ಲಾ ಸಂವಿಧಾನದಲ್ಲಿಯೇ ಇಂಡಿಯಾ ಅಥವಾ ಭಾರತ ಎಂದೆ ನಮೂದಾಗಿದೆ ಹೆಸರು ಬದಲಾವಣೆಯಿಂದ ದೇಶ…

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮುರುಘಮಲ್ಲ ಗ್ರಾಮದ ಹಜ್ರತ್ ಅಮ್ಮಾ ಜಾನ್ ಬಾವಾಜಾನ್ ದರ್ಗಾ ವಕ್ಪ್ ಆಸ್ತಿಯಲ್ಲಿ ತಲೆಯೆತ್ತಿರುವ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಲು ಜಿಲ್ಲಾ ಮಾಜಿ ವಕ್ಪ್ ಅಧ್ಯಕ್ಷ ಬಿ.ಎಸ್.ರಫಿ ಉಲ್ಲಾ ರವರು ಜಿಲ್ಲಾಧಿಕಾರಿ ರವರಿಗೆ ಮನವಿ ಸಲ್ಲಿಸಿದರು.
ಅಂದಿನ ಚಿಕ್ಕಬಳ್ಳಾಪುರ ಜಿಲ್ಲಾ ವಕ್ಫ್ ಅಧ್ಯಕ್ಷರಾಗಿದ್ದ ಬಿ.ಎಸ್.ರಫೀ ಉಲ್ಲಾ ರವರ ಅವಧಿಯಲ್ಲಿ ದಕ್ಷಿಣ ಭಾರತದಲ್ಲೇ ಸುಪ್ರಸಿದ್ದ ಹಾಗೂ ಐತಿಹಾಸಿಕ ಧಾರ್ಮಿಕ ಯಾತ್ರಾಸ್ಥಳವಾದ ಹಜ್ರತ್ ಅಮ್ಮಾ ಜಾನ್ ಬಾವಾ ಜಾನ್ ದರ್ಗಾ ವಕ್ಫ್ ಸ್ವತ್ತಿನಲ್ಲಿ ಸುಮಾರು 75ವರ್ಷಗಳಿಂದ ವಕ್ಫ್ ಆಸ್ತಿಯನ್ನು ಕಬಳಿಸಿಕೊಂಡು ಅನಧಿಕೃತ ಕಟ್ಟಡ ಮಳಿಗೆಗಳನ್ನು ನಿರ್ಮಾಣ ಮಾಡಿಕೊಂಡು ವ್ಯಾಪಾರ ಹಾಗೂ ಇನ್ನಿತರೆ ಚಟುವಟಿಕೆಗಳನ್ನು ನಡೆಸುತ್ತಿದ್ದವರ ವಿರುದ್ದ ಕ್ರಮಕ್ಕೆ ಮುಂದಾದ ಬಿ.ಎಸ್.ರಫೀ ಉಲ್ಲಾ ರವರು ಅಂದಿನ ಜಿಲ್ಲಾಧಿಕಾರಗಳ ನೇತೃತ್ವದಲ್ಲಿ ಹಾಗೂ ಜಿಲ್ಲಾ ಪೋಲೀಸ್ ಇಲಾಖೆಯ ಸಹಯೋಗದೊಂದಿಗೆ 2016ರಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾದ ಕಾರ್ಯಚರಣೆಯು ರಾಜ್ಯದಲ್ಲೇ ಅಂದು ಐತಿಹಾಸಿಕ ಕಾರ್ಯವಾಗಿತ್ತು ಮುಂದುವರೆದು ಸದರಿ ವಕ್ಫ್ ಆಸ್ತಿಯನ್ನು ಸಂರಕ್ಷಣೆ ಹಾಗೂ ಅಭಿವೃದ್ಧಿ ಪಡೆಸುವ ನಿಟ್ಟಿನಲ್ಲಿ ರಾಜ್ಯ ವಕ್ಫ್ ಮಂಡಳಿ ವತಿಯಿಂದ ಅನುದಾನವನ್ನು ಮಂಜೂರು ಮಾಡಿಸಿ ದರ್ಗಾದ ಸುತ್ತಮುತ್ತಲು ಕಾಂಪೌಂಡ್ ಗೋಡೆ ನಿರ್ಮಾಣ ಮಾಡಿಸಲಾಗಿತ್ತು.
ಆದರೆ ಪ್ರಸ್ತುತ ದರ್ಗಾ ಸಂರಕ್ಷಣೆಗಾಗಿ ನಿರ್ಮಾಣ ಮಾಡಲಾಗಿರುವ ಕಾಂಪೌಂಡ್ ಗೋಡೆ ಹೊರಭಾಗದಲ್ಲಿ ಹಾಗೂ ದರ್ಗಾಗೆ ಆಗಮಿಸುವ ಮುಖ್ಯ ರಸ್ತೆ ಹಾಗೂ ಮುಖ್ಯದ್ವಾರದ ಹತ್ತಿರ ಅನಧಿಕೃತವಾಗಿ ಮರು ಅಂಗಡಿ ಮುಂಗಟ್ಟುಗಳನ್ನು ನಿರ್ಮಾಣ ಮಾಡಿಕೊಂಡಿರುತ್ತಾರೆ ಇದರಿಂದ ದೇಶದ ನಾನಾ ಭಾಗಗಳಿಂದ ದರ್ಗಾಗೆ ದಿನನಿತ್ಯ ಆಗಮಿಸುವ ಸಾವಿರಾರು ಭಕ್ತಾದಿಗಳಿಗೆ ಹಾಗೂ ತಿಂಗಳಿಗೊಮ್ಮೆ ಅಮಾವಸ್ಯೆ ದಿನದಂದು ಆಗಮಿಸುವ ಸುಮಾರು 25ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು ಹಾಗೂ ಇದೇ ತಿಂಗಳ ದಿನಾಂಕ 29&30 ರಂದು ದರ್ಗಾದ ಗಂಧ & ಉರುಸ್ ಕಾರ್ಯಕ್ರಮ ನಡೆಯಲಿದ್ದು ಸದರಿ ಗಂಧ ಮತ್ತು ಉರುಸ್ ಕಾರ್ಯಕ್ರಮಕ್ಕೆ ಸುಮಾರು 70 ರಿಂದ 80 ಸಾವಿರ ಭಕ್ತಾದಿಗಳು ಆಗಮಿಸುವರು ಆದ ಕಾರಣ ದರ್ಗಾಗೆ ಆಗಮಿಸುವ ಭಕ್ತಾದಿಗಳ ಹಿತದೃಷ್ಟಿಯಿಂದ ಸದರಿ ಅನಧಿಕೃತ ಕಟ್ಟಡಗಳು ಹಾಗೂ ಮಳಿಗೆಗಳನ್ನು ತೆರವುಗೊಳಿಸಲು ಚಿಕ್ಕಬಳ್ಳಾಪುರ ಜಿಲ್ಲಾ ಮಾಜಿ ವಕ್ಫ್ ಅಧ್ಯಕ್ಷರಾದ ಬಿ.ಎಸ್.ರಫೀ ಉಲ್ಲಾ ರವರು ಜಿಲ್ಲಾಧಿಕಾರಿಗಳಿಗೆ ಮಾನವಿಯನ್ನು ಸಲ್ಲಿಸಿದ್ದಾರೆ.

8ನೇ ಏಷ್ಯಾ ಪಿಜಿಪಿಆರ್ ಸಮ್ಮೇಳನಕ್ಕೆ ಚಾಲನೆ :

ಕೃಷಿ ಕ್ಷೇತ್ರದಲ್ಲಿ ಸಸ್ಯ ಸಂವೃದ್ಧಿ ಉತ್ತೇಜಕಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಕರೆ : ಯಲಹಂಕ : ಕೃಷಿ ಕ್ಷೇತ್ರದಲ್ಲಿ ರಾಸಾಯನಿಕಗಳ ಬಳಕೆಯನ್ನು ತಗ್ಗಿಸಿ, ಪರಿಸರ ಸಂರಕ್ಷಣೆಯ ಜತೆಗೆ ಹೆಚ್ಚುತ್ತಿರುವ ಆಹಾರದ ಭದ್ರತೆಯನ್ನು ಪೂರೈಸುವ ನಿಟ್ಟಿನಲ್ಲಿ ಏಷಿಯನ್ ಪಿಜಿಪಿಆರ್ ಸಂಘಟನೆ ಮತ್ತು…

ಬಿಬಿಎಂಪಿ ವತಿಯಿಂದ ಏಕಾಗವಾಕ್ಷಿ ಕೇಂದ್ರ ಸಂಚಾರಿ ವಾಹನ ಮೊಬೈಲ್ ಸ್ಟ್ಯಾಂಡ್ ಕಲ್ಯಾಣಿಗಳ ಸ್ಥಾಪನೆ

ಬಿಬಿಎಂಪಿ ವತಿಯಿಂದ ಏಕಗವಾಕ್ಷಿ ಕೇಂದ್ರ, ಸಂಚಾರಿ ವಾಹನ(ಮೊಬೈಲ್ ಟ್ಯಾಂಕ್)/ಕಲ್ಯಾಣಿ ಗಳ ಸ್ಥಾಪನೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಸ್ಥಾಪಿಸಲಾಗಿರುವ 63 ಏಕಗವಾಕ್ಷಿ ಕೇಂದ್ರಗಳು,…

ನೂರೆಂಟು ವಿಘ್ನಗಳ ನಾಶಕ ವಿಘ್ನೇಶ್ವರ

ನೂರೆಂಟು ವಿಘ್ನಗಳ ನಾಶಕ ವಿಘ್ನೇಶ್ವರ…ಅಜ್ಞಾನವನ್ನು ತ್ಯಜಿಸುವ ಸಂಕಷ್ಟಹರ….ಭಕ್ತಿಯಿಂದ ಗರಿಕೆಯನ್ನು ಅರ್ಪಿಸುವೆ ಗೌರಿ ತನಯ…ಎಲ್ಲರ ಬದುಕನ್ನು ಹಸಿರಾಗಿಸೆಂದು ಬೇಡುವೆ ನಿನ್ನಯ …ಪಂಚ ಕಜ್ಜಾಯವನ್ನು ನೈವೇದ್ಯಕ್ಕೆ ಸಮರ್ಪಿಸುವೆ…ದುಃಖವನ್ನು ನಶಿಸಿ ಸಂತಸವನ್ನು ಹೊತ್ತು ಬಾ ಎಂದು ಬೇಡುವೆ …ಎಲ್ಲರಿಗೂ ಸುಖ ಶಾಂತಿಯನ್ನು ಕರುಣಿಸು ಲಂಬೋದರನೆ….ಲೋಕ ಸಮಸ್ತ…