Category: Blog

Your blog category


ಸೆ. 25 ರಿಂದ ಜಿಲ್ಲೆಯಲ್ಲಿ
“ಜನತಾ ದರ್ಶನ” ಜಾರಿ ಕುರಿತು ಪೂರ್ವಭಾವಿ ಸಭೆ

ಕೋಲಾರ, ಸೆಪ್ಟೆಂಬರ್ 20 (ಕರ್ನಾಟಕ ವಾರ್ತೆ): ನಂ.74-478ಸಾರ್ವಜನಿಕರ ಅಹವಾಲುಗಳನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ನೇರವಾಗಿ ನೀಡುವ ಜನತಾ ದರ್ಶನದ ಮುಂದುವರೆದ ಭಾಗವಾಗಿ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕೇಂದ್ರದಲ್ಲಿ ಮಾನ್ಯ ಜಿಲ್ಲಾ…

ಪಿಎಲ್ಡಿ ಬ್ಯಾಂಕ್ ಸರ್ವಸದಸ್ಯರ ವಾರ್ಷಿಕ ಮಹಾಸಭೆ,

ವಸೂಲಾತಿಯಲ್ಲಿ ಅವಿಭಜಿತ ಜಿಲ್ಲೆಗೆ ಮೊದಲ ಸ್ಥಾನದೊಂದಿಗೆ 11 ಲಕ್ಷ ನಿವ್ವಳ ಲಾಭ ಕೋಲಾರ: ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ 2022-23 ನೆ ಸಾಲಿನಲ್ಲಿ 11 ಲಕ್ಷಗಳ ನಿವ್ವಳ ಲಾಭವನ್ನು ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಬೊಮ್ಮಸಂದ್ರ ಎಚ್ ಕೃಷ್ಣೇಗೌಡ…

ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ,ಯುನೈಟೆಡ್‌ ವೇ ಮತ್ತು ನೆಕ್ಸ್ಟ್ ಜೆನ್ ಸರಕಾರೇತರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಹೊಸಕೋಟೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಯುನೈಟೆಡ್‌ ವೇ ಮತ್ತು ನೆಕ್ಸ್ಟ್ ಜೆನ್ ಸರಕಾರೇತರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಸೂಲಿಬೆಲೆ ಹೋಬಳಿಯ ಗಿಡ್ಡಪ್ಪನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಜಿಲ್ಲಾ ಸಂಯೋಜಕರಾದ ಮುನಿರಾಜು ಅವರು ಮಾತನಾಡಿ ಉತ್ತಮ ಆರೋಗ್ಯ ಕಾಪಾಡಿಕೊಂಡು ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಹಾಗೂ ಅಂಗನವಾಡಿ ಸೌಲಭ್ಯಗಳನ್ನು ಎಲ್ಲರೂ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಕಾರ್ಯಕ್ರಮದಲ್ಲಿ ಪೋಷಣ್ ಅಭಿಯಾನ ಯೋಜನೆಯ ಸಂಯೋಜಕರಾದ ಆನಂದ ಅವರು ಮಾತನಾಡಿ ಈ ಅಭಿಯಾನದ ಗುರಿ ಉದ್ದೇಶಗಳ ಬಗ್ಗೆ, ಮೊದಲ ಸಾವಿರ ದಿನಗಳ ಆರೈಕೆ, ಗರ್ಭಿಣಿ, ಬಾಣಂತಿಯರ ಹಾಗೂ ಮಕ್ಕಳ ಆರೈಕೆ ಮಾಡುವುದರ ಬಗ್ಗೆ, ಪೌಷ್ಟಿಕ ಆಹಾರ ಸೇವನೆಯ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಮೇಲ್ವಿಚಾರಕರಾದ ಭಾರತಿ ಎಸ್ ಎನ್, ಯುನೈಟೆಡ್ ವೇ ಸಂಸ್ಥೆಯ ಜ್ಯೋತಿ ಗುಪ್ತ ಹಾಗೂ ಭಾಗ್ಯ ಕುಮಾರ್, ನೆಕ್ಸ್ಟ್ ಜೆನ್ ಸಂಸ್ಥೆಯ ಕ್ರಿಸ್ಟೋಫರ್, ಅಂಗನವಾಡಿ ಶಿಕ್ಷಕಿಯರು ಭಾಗವಹಿಸಿದ್ದರು.

ಸೆಪ್ಟೆಂಬರ್ 28ರಂದು ಜಿಲ್ಲಾ ಪಂಚಾಯಿತಿ ಎದುರು ಅನಿರ್ದಿಷ್ಟ ಅವಧಿ ಪ್ರತಿಭಟನೆ ಕೆ ಆರ್ ಎಸ್ ಜಿಲ್ಲಾಧ್ಯಕ್ಷ ಚಿಕ್ಕನಾರಾಯಣ

ಬಂಗಾರಪೇಟೆ :ಪಶುಗಳ ರಕ್ಷಣೆ ಹಾಗೂ ರೈತರ ಬದುಕಿಗೆ ದಾರಿ ದೀಪವಾಗಬೇಕಾಗಿದ್ದ ಪಶು ವೈದ್ಯ ಇಲಾಖೆಯ ಉಪನಿರ್ದೇಶಕರು ಮತ್ತು ವೈದ್ಯಾಧಿಕಾರಿಗಳು ಪಶು ಪಾಲನ ಯೋಜನೆಯ ಕೋಟ್ಯಾಂತರ ರೂಪಾಯಿ ಹಣವನ್ನು ಲೂಟಿ ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಕರ್ನಾಟಕ ರಿಪಬ್ಲಿಕನ್ ಸೇನೆಯ ಜಿಲ್ಲಾಧ್ಯಕ್ಷ…

ಬಂಗಾರಪೇಟೆ: ತಾಲ್ಲೂಕಿನ ಬಲ ಮಂದೆ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ ವತಿಯಿಂದ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿದ ಅಧ್ಯಕ್ಷ ಜಿ. ವೆಂಕಟೇಶ್ ಗೌಡ ಮಾತನಾಡಿ ಸಂಘದಲ್ಲಿ ಒಟ್ಟು 933 ಸದಸ್ಯರ ಸಂಖ್ಯೆ ಇದ್ದು, ಸಂಘವು ಬ್ಯಾಂಕಿನಲ್ಲಿ ಹೊಂದಿರುವ ಷೇರು ಮೊತ್ತ 3688847 ರೂ ಹೊಂದಿದ್ದು 2022-23ನೇ ಸಾಲಿಗೆ ಸಂಘವು ಗಳಿಸಿರುವ ಲಾಭ- 50157 ರೂ ಆಗಿದ್ದು ನಾವು ನಮ್ಮ ಸಂಘದಿಂದ 465 ಸದಸ್ಯರಿಗೆ 82031391 ರೂ ಸಾಲ ವಿತರಿಸಲಾಗಿದೆ. ಈ ಮೊತ್ತದಲ್ಲಿ ಕೆಸಿಸಿ ಅಡಿಯಲ್ಲಿ 368 ಸದಸ್ಯರಿಗೆ- 44277000 ರೂ, ಎಸ್ ಎಚ್ ಜಿ 84 ಸದಸ್ಯರಿಗೆ- 33867440 ರೂ, ರೇಷ್ಮೆ ಮನೆ 5 ಸದಸ್ಯರಿಗೆ- 1316581 ರೂ, ಮಿನಿ ಡೈರಿ 6 ಸದಸ್ಯರಿಗೆ- 1971207 ರೂ ಕೋಳಿ ಫಾರಂ 2 ಸದಸ್ಯರಿಗೆ- 599163 ರೂ ಕೊಡಲಾಗಿದೆ. ಹಾಗೂ ಮಹಿಳಾ ಸಂಘಗಳಿಂದ- 12019640 ರೂ ಸಾಲ ವಸೂಲಿ ಮತ್ತು ಸದಸ್ಯರಿಂದ ಕೆಸಿಸಿ ಸಾಲ ವಸೂಲಿ- 39024000 ರೂ, ಮಿನಿ ಡೈರಿ ಸಾಲ ವಸೂಲಿ-512793 ರೂ, ರೇಷ್ಮೆ ಮನೆ ಸಾಲವಸೂಲಿ-671956 ರೂ, ಕೋಳಿ ಫಾರಂ ಸಾಲ ವಸೂಲಿ- 95954 ರೂ ಜಮಾ ಆಗಿದೆ, ಹಾಗೂ ಜಿಲ್ಲಾ ಬ್ಯಾಂಕ್ ಮಹಿಳಾ ಸಂಘಗಳ ಖಾತೆಗೆ -12220050 ರೂ, ಜಿಲ್ಲಾ ಬ್ಯಾಂಕ್ ಕೆಸಿಸಿ ಸಾಲದ ಖಾತೆಗೆ -40286158 ರೂ, ಜಿಲ್ಲಾ ಬ್ಯಾಂಕ್ ಮಿನಿ ಡೈರಿ ಸಾಲದ ಖಾತೆಗೆ- 648569 ರೂ, ಜಿಲ್ಲಾ ಬ್ಯಾಂಕ್ ರೇಷ್ಮೆ ಮನೆ ಸಾಲದ ಖಾತೆಗೆ- 593078 ರೂ, ಜಿಲ್ಲಾ ಬ್ಯಾಂಕ್ ಕೋಳಿ ಫಾರಂ ಸಾಲದ ಖಾತೆಗೆ- 225195 ರೂ ಹಾಕಲಾಗಿದೆ. ಮತ್ತು ಸರ್ಕಾರದಿಂದ ಬಡ್ಡಿ ಮತ್ತು ಇತರೆ ಹಣ- 4565813 ರೂ, ಜಿಲ್ಲಾ ಬ್ಯಾಂಕಿಗೆ ಬಡ್ಡಿ ಮತ್ತು ಇತರೆ ಖರ್ಚುಗಳು- 4515656 ರೂ, ಮರಣ ಹೊಂದಿರುವವರ ಸಾಲ ಬರಬೇಕಾದದ್ದು -1354000 ಹಾಗೂ ಸದಸ್ಯರಿಂದ ಸಾಲ ವಸೂಲಿ -52324343 ರೂ, ಜಿಲ್ಲಾ ಬ್ಯಾಂಕಿಗೆ ಸಾಲದ ಅಸಲು -53973050 ರೂ, ಮತ್ತು ಜಿಲ್ಲಾ ಬ್ಯಾಂಕಿಗೆ -1648707 ರೂ ಹೆಚ್ಚು ಹಣ ಪಾವತಿ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ನಮ್ಮ ಸಂಘದ ವತಿಯಿಂದ ಸದಸ್ಯರಿಗೆ ಸಾಲವನ್ನು ವಿತರಣೆ ಮಾಡುತ್ತೇವೆ, ಹೊಸದಾಗಿ ಸಂಘದ ಸದಸ್ಯತ್ವ ನೋಂದಣಿ ಮಾಡಲು ರೂ.1000 ನಿಗದಿಪಡಿಸಲಾಗಿದೆ. ಇದರಲ್ಲಿ ಎಸ್ ಸಿ. ಎಸ್ ಟಿ. ಸಮುದಾಯದವರು ಸಂಘದ ಸದಸ್ಯತ್ವ ಪಡೆಯಲು ಯಾವದೇ ಶುಲ್ಕ ಇರುವುದಿಲ್ಲ ಸರ್ಕಾರ ಕೇಳಿರುವ ದಾಖಲೆ ಸಲ್ಲಿಸಿದರೆ ಸಾಕು, ಉಚಿತ ಸದಸ್ಯತ್ವ ನೀಡಲಾಗುತ್ತದೆ. ನಮ್ಮ ವ್ಯವಸಾಯ ಸೇವಾ ಸಂಘವನ್ನು ಜಿಲ್ಲೆಯಲ್ಲಿಯೇ ಉನ್ನತ ಸ್ಥಾನ ಅಲಂಕರಿಸಲು ಶ್ರಮಿಸಿವೆ ಆದ್ದರಿಂದ ನಮ್ಮ ಸಂಘದ ಸದಸ್ಯರು ಸಹಕಾರ ಸಂಘದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳ ಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಎಂ. ಶ್ರೀನಿವಾಸಪ್ಪ , ನಿರ್ದೇಶಕರಾದ ಎಂ. ನಾಗರಾಜ್. ಅಂಕಿ ರೆಡ್ಡಿ. ಎಂ. ಪೆದ್ದನ್ನ. ಆರ್. ಸಂಪಂಗಿ. ಗೋಪಾಲಪ್ಪ. ಶ್ರೀ ರಾಮಪ್ಪ. ಚೌಡಮ್ಮ. ಶ್ರೀರಾಮಪ್ಪ. ನಾರಾಯಣಮ್ಮ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ವೇಣುಗೋಪಾಲ್. ವಿನೋದ್ ಕುಮಾರ್. ಸಿಬ್ಬಂದಿ ವರ್ಗ…

ಕೆಜಿಎಫ್ ನಗರಸಭೆ ವ್ಯಾಪ್ತಿಯ ಚರಂಡಿಯಲ್ಲಿ ಗಿಡಗಂಟುಗಳು: ಕನ್ನಡ ಹೋರಾಟಗಾರರು ವಿ ಎಸ್ ಪ್ರಕಾಶ್ ಆಗ್ರಹ: ಕೆಜಿಎಫ್: ನಗರಸಭೆ ಮುಂಭಾಗದಲ್ಲಿರುವ ಪುಟ್ ಪಾತ್ ಹಾಗೂ ಚರಂಡಿಯನ್ನು ನಗರಸಭೆಯಿಂದ ಸ್ವರಾಜ್ ಮುಲ್ ವೃತ್ತದ ವರೆಗೆ ಕಳೆದ ಆರು ತಿಂಗಳ ಹಿಂದೆ ಅಷ್ಟೇ ಲಕ್ಷಾಂತರ ಅನುದಾನವನ್ನು ವೆಚ್ಚ ಮಾಡಿ ನಿರ್ಮಿಸಿದ್ದ, ಪುಟ್ ಪಾತ್ ನ್ನು
ಗಿಡಗಳು ಅಕ್ರಮಿಸಿಕೊಳ್ಳುತ್ತಿದ್ದರು. ಹೇಳುವರು ಕೇಳುವರು ಯಾರು ಇಲ್ಲದಂತೆ ಆಗಿದೆ ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಲಾಗಿರುವ ಫುಟ್ಪಾತ್ ಹಾಗೂ ಚರಂಡಿಯನ್ನು ನಿರ್ಮಿಸಲಾಗಿದ್ದು. ಮಳೆ ಬಂದರೆ ಮಳೆ ನೀರು ಚರಂಡಿಯಲ್ಲಿ ಹರಿಯುವುದೇ ಇಲ್ಲ ಚರಂಡಿಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ಪಾದ ಚಾರಿಗಳು ನಡೆದಾಡಲು ನಿರ್ಮಿಸಿರುವ ಫುಟ್ಬಾತ್ ನಲ್ಲಿ ಪಾರ್ಥೇನಿಯಂ ಗಿಡಗಳು ಬೆಳೆದು ನಿಂತಿದೆ ಆದ್ದರಿಂದ ಸಾರ್ವಜನಿಕರು ಫುಟ್ಪಾತ್ ನಲ್ಲಿ ಮೇಲೆ ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳು ಬರುತ್ತದೆ. ನಗರ ಸಭೆ ಪಕ್ಕದಲ್ಲಿ ಇಷ್ಟೊಂದು ಆವ್ಯವಸ್ಥೆ ಇದ್ದರು ಅಧಿಕಾರಿಗಳು ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿ ಬೆಳಗ್ಗೆದ್ದರೆ ನಡೆಸುವವರು ಆದರೆ ಯಾರು ಇದರ ಬಗ್ಗೆ ಕೇರ್ ಮಾಡುತ್ತಿಲ್ಲ ಇನ್ನು ಸ್ವಲ್ಪ ದಿನಗಳು ಕಳೆದರೆ ರಸ್ತೆ ಯಾವುದೋ ಪುಟ್ ಪಾತ್ ಯಾವುದು ಎಂದು ತಿಳಿಯದಂತಾಗಿದೆ ಆಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಗಡಿ ನಾಡು ಕನ್ನಡ ಪರ ಹೋರಾಟಗಾರರು ವಿ .ಎಸ್.ಪ್ರಕಾಶ್ ನಗರಸಭೆ ಪಕ್ಕದಲ್ಲಿ ಇಂತಹ ಪರಿಸ್ಥಿತಿ ಏರ್ಪಟ್ಟಿದ್ದರು ಜನಪ್ರತಿನಿಧಿಗಳು ಇತ್ತ ಗಮನ ಹರಿಸದಿರುವುದು ದುರಾದೃಷ್ಟಕರ ಸಂಗತಿ ತಕ್ಷಣ ಅಧಿಕಾರಿಗಳು ಇತ್ತ ಗಮನಹರಿಸಿ ಸಾರ್ವಜನಿಕ ಹಣ ಪೋಲಾಗದಂತೆ ಎಚ್ಚರ ವಹಿಸಬೇಕೆಂದು ಆಗ್ರಹ ಪಡಿಸಿದರು.

ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ ಮಕ್ಕಳಲ್ಲಿ ಅರಿವು: ಕೆಜಿಎಫ್: ದಿನಾಂಕ 21 .9 .2023 ರಂದು ಕೆಜಿಎಫ್ ಪೊಲೀಸ್ ಜಿಲ್ಲೆ ವತಿಯಿಂದ ರಾಬರ್ಸನ್ ಪೇಟೆ, ಅಂಡರ್ಸನ್ ಪೇಟೆ, ಉರಿಗಾಂ, ಬೆಮಲ್ ನಗರ .ಬೇತಮಂಗಲ ಕ್ಯಾಸಂಬಳ್ಳಿ ಕಾಮಸಮುದ್ರ ಬೂದಿಕೋಟೆ ಮತ್ತು ಬಂಗಾರಪೇಟೆ ಪೊಲೀಸ್ ಠಾಣೆಗಳಲ್ಲಿ ತೆರೆದ ಮನೆ (ಓಪನ್ ಹೌಸ್) ಕಾರ್ಯಕ್ರಮವನ್ನು ಹಮ್ಮಿಕೊಂಡು ಶಾಲೆಗಳ ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆಗಳಿಗೆ ಬರಮಾಡಿಕೊಂಡು ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಬಗ್ಗೆ ಮತ್ತು ಮಕ್ಕಳ ಹಕ್ಕುಗಳ ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳ ತಡೆಗೆ ಅನುಸರಿಸಬೇಕಾದ ರಕ್ಷಣಾತ್ಮಕ ಕ್ರಮಗಳ ಬಗ್ಗೆ ಅರಿವು ಮೂಡಿಸಿರುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ವಲಯದ ಶಾಲೆಯ ವಿದ್ಯಾರ್ಥಿಗಳು ಪೊಲೀಸ್ ಸಿಬ್ಬಂದಿಗಳು ಇದ್ದರು

ಮಹಾತ್ಮಾ ಗಾಂಧೀಜಿ ಹಾಗೂ
ಲಾಲ್ ಬಹದ್ಧೂರ ಶಾಸ್ತ್ರೀಜಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧಾರ

ಧಾರವಾಡ :- ಜಿಲ್ಲಾಡಳಿತದಿಂದ ಅಕ್ಟೋಬರ್ 2 ರಂದು ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‍ಬಹಾದ್ದೂರ ಶಾಸ್ತ್ರಿಜಿಯವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ಬಗ್ಗೆ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರ ಅಧ್ಯಕ್ಷತೆಯಲ್ಲಿ ಇಂದು (ಸೆ.21) ಜರುಗಿದ ಸಭೆಯಲ್ಲಿ ನಿರ್ಧರಿಸಲಾಯಿತು. ಜಿಲ್ಲಾಡಳಿತ, ವಾರ್ತಾ ಹಾಗೂ ಸಾರ್ವಜನಿಕ…