ದೇವನಹಳ್ಳಿ: ಪಟ್ಟಣದ ಹಳೆ ತಾಲ್ಲೂಕು ಕಛೇರಿ ರಸ್ತೆಯಲ್ಲಿ ಸರ್ವಶಕ್ತಾತ್ಮಕ ಚೌಡೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರಿ ಅಂಗವಾಗಿ ಚೌಡೇಶ್ವರಿ ದೇವಿಗೆ 10 ದಿನಗಳ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು, ಶ್ರೀ ಚೌಡೇಶ್ವರಿ ದೇವಾಲಯದ ಅಭಿವೃದ್ಧಿ ಸಮಿತಿಯು ಶ್ರೀ ಚೌಡೇಶ್ವರಿ ದೇಗುಲದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ
ಅಕ್ಟೋಬರ್ 10 ರ ಭಾನುವಾರದಿಂದ ಅಕ್ಟೋಬರ್ 24 ಮಂಗಳವಾರದ ವರೆಗೆ ಕಾರ್ಯಗಳನ್ನು ಹಮ್ಮಿಕೊಂಡಿದ್ದು ಪ್ರತಿದಿನ ಭಕ್ತಾದಿಗಳಿಂದ ವಿಶೇಷ ಪೂಜೆ ಮತ್ತು ಅಲಂಕಾರಗಳು ನಡೆಯಲಿದ್ದು ಅಕ್ಟೋಬರ್ 15 ರಂದು ಅರಸಿನ ಕುಂಕುಮ ಅಲಂಕಾರ, 16 ರಂದು ಶಾಂಕಾಂಬರಿ ಅಲಂಕಾರ, 17 ರಂದು ವಿಶೇಷ ಸೇಲಂ ಹೂವಿನ ಅಲಂಕಾರ, 18 ರಂದು ಸಂತಾನಲಕ್ಷ್ಮೀ ಅಲಂಕಾರ, 19 ರಂದು ಹಣ್ಣುಗಳ ಅಲಂಕಾರ, 20 ರಂದು ದುರ್ಗಾದೀಪ ಅಲಂಕಾರ, 21 ರಂದು ಸರಸ್ವತಿ ಅಲಂಕಾರ, 22 ರಂದು ರಾಜೇಶ್ವರಿ ಅಲಂಕಾರ, 23 ರಂದು ದುರ್ಗಾಮಾತೆ ಅಲಂಕಾರ ಮತ್ತು ಅಕ್ಟೋಬರ್ 24ರಂದು ವಿಜಯದಶಮಿ ಅಂಗವಾಗಿ ಚಾಮುಂಡೇಶ್ವರಿ ಅಲಂಕಾರ ಹಾಗೂ ಪ್ರತಿದಿನ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ಭಕ್ತಾಧಿಗಳು ಭಾಗವಹಿಸುವಂತೆ ಶ್ರೀ ಚೌಡೇಶ್ವರಿ ದೇವಾಲಯದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಸ್ ಎಲ್ ಎನ್ ಅಶ್ವಥ್ ನಾರಾಯಣ ಅವರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಚೌಡೇಶ್ವರಿ ದೇವಾಲಯದ ಅಭಿವೃದ್ಧಿ ಸಮಿತಿಯ ಗಂಗಾಧರ್, ಎಸ್ ಆರ್ ಮುನಿರಾಜು ಜಯರಾಮ್ ದೇವಾಲಯದ ಪ್ರಧಾನ ಅರ್ಚಕರದ ವೀರಯ್ಯ ಸ್ವಾಮಿ, ಮುಂತಾದವರು ಇದ್ದರು