ಕೋಲಾರ : ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂರವರ ಆದರ್ಶಗಳನ್ನು ಹಾಗೂ ಮಾರ್ಗದರ್ಶನವನ್ನು ನಾವು ಪಾಲಿಸುವ ಮೂಲಕ ಅವರಿಗೆ ಗೌರವ ಸಮರ್ಪಣೆ ಮಾಡೋಣ ಎಂದು ಎಂ.ಎಲ್.ಸಿ.ಅನಿಲ್ ಕುಮಾರ್ ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗ ಮಂದಿರದಲ್ಲಿ ಭಾನುವಾರ ಎ.ಪಿ.ಜಿ.ಅಬ್ದುಲ್ ಕಲಾಂ ಸಮಾಜ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ನಿಂದ ಆಚರಿಸಿದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ರವರ 92 ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ಬಡ ಮುಸ್ಲಿಂ ಜನಾಂಗದಲ್ಲಿ ಹುಟ್ಟಿ
ರಾಷ್ಟ್ರಪತಿಗಳಾಗಿ ಬೆಳೆದ ದೇಶ ಕಂಡ ಮಹಾನ್ ವ್ಯಕ್ತಿ ಆಗಿದ್ದು,ಜಯಂತಿಗಳು ಜಾತಿಗಳಿಗೆ ಸೀಮಿತವಾಗಿರುವಾಗ ಅಬ್ದುಲ್ ಕಲಾಂ
ಅವರ ಹುಟ್ಟು ಹಬ್ಬವನ್ನು ಎಲ್ಲಾ ಧರ್ಮ ಜಾತಿಗಳನ್ನು ಸೇರಿಸಿಕೊಂಡು ಟ್ರಸ್ಟ್ ರವರು ಮಾಡುತ್ತಿರುವುದು ಶ್ಲಾಘನೀಯವೆಂದರು.

ಅಂಜುಮಾನ್ ಇಸ್ಲಾಮಿಯಾ ಪ್ರೆಸಿಡೆಂಟ್ ಕೆ.ಎಂ.ಜಮೀರ್ ಅಹ್ಮದ್ ಮಾತನಾಡಿ ಇಡೀ ಪ್ರಪಂಚ ಕಲಾಂರವರನ್ನು ಮಿಸೈಲ್ ಆಫ್ ಇಂಡಿಯಾ ಎಂದು ಗುರುತಿಸುತ್ತಿದ್ದು, ಕಲಾಂರವರು ಕಂಡ ಕನಸು ನನಸು ಮಾಡಲು ಮಕ್ಕಳಿಗೆ ಅವರ ಬಗ್ಗೆ ಅರಿವು ಮೂಡಿಸಬೇಕೆಂದರು.

ಓವೈಸ್ ಗ್ರೂಪ್ ನ ಮ್ಯಾನೇಜಿಂಗ್ ಡೈರೆಕ್ಟರ್ ಸಯದ್ ಸಲೀಮ್ ಮಾತನಾಡಿ ಜಾತಿ ಧರ್ಮ ಮರೆತು ದೇಶಕ್ಕೆ ಹೆಸರು ತರಲು ಕಲಾಂರವರಂತೆ ಒಂದು ಗುರಿ ಇಟ್ಟು ಕೊಂಡು ದೇಶದ ಪ್ರಜೆ
ಸಾಧನೆಯನ್ನು ಮಾಡಬೇಕೆಂದು ಕಿವಿ ಮಾತು ಹೇಳಿದರು.

ಸಮಾಜ ಸೇವಕ ಹಾಗೂ ಜಿಯೋ ಗ್ರೂಪ್ ಛೇರ್ಮನ್ ಅಹ್ಮದ್ ಆಲಿ ಬೇಗ್ ಮಾತನಾಡಿ ಅಬ್ದುಲ್ ಕಲಾಂ ರವರು ವಿದ್ಯಾರ್ಥಿಗಳಿಗೆ ರೋಲ್ ಮಾಡಲ್ ಆಗಿದ್ದು,ಕಲಾಂ ಹೇಳಿದಂತೆ ನೀವು ಪ್ರಕಾಶಮಾನವಾಗಿ ಬೆಳಗ ಬೇಕಾದರೆ ಸೂರ್ಯನಂತೆ ಉರಿಯ ಬೇಕಾಗುತ್ತದೆ ಎಂದರು.

ಕಳೆದು ಹೋದ ಕ್ಷಣಗಳು ಮತ್ತೆ ಹಿಂದಕ್ಕೆ ಬರುವುದಿಲ್ಲವಾದ್ದರಿಂದ ಪ್ರತಿಕ್ಷಣ ಕಲಾಂರವರಂತೆ ಪರಿಶ್ರಮ ಅಗತ್ಯವೆಂದ ಅವರು ದೇಶಕ್ಕೆ ಕಲಾಂರಂತವರ ಅಗತ್ಯ ಇದೆಯೆಂದರು.

ಇದೇ ಸಂಧರ್ಭದಲ್ಲಿ ಹೆಚ್ಚು ಅಂಕ ಪಡೆದ 90
ವಿದ್ಯಾರ್ಥಿಗಳಿಗೆ ಹಾಗೂ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು ಹಾಗೂ ಅಬ್ದುಲ್ ಕಲಾಂ ಹಾಸ್ಟೆಲ್ ನ 250 ಮಕ್ಕಳಿಗೆ ಅಗತ್ಯ ವಸ್ತುಗಳನ್ನು ದೇಣಿಗೆಯಾಗಿ ನೀಡಲಾಯಿತು

ವೇದಿಕೆಯಲ್ಲಿ ಸಮಾಜ ಸೇವಕ ಮುಸ್ತಫಾ,ಸೀಸಂದ್ರ ಗೋಪಾಲ ಗೌಡ, ಟ್ರಸ್ಟ್ ನ ಅಧ್ಯಕ್ಷ ಸಗೀರ್ ಸೇಠ್,
ಕಾರ್ಯದರ್ಶಿ ಮಜಾಹರ್ ಪಾಷ,ಖಜಾಂಚಿ
ಎಂ.ಉಮರ್ ಅಹ್ಮದ್, ಸದ್ದಾಮ್,ಸಬ್ಬೀರ್ ಅಹ್ಮದ್, ಯಾಸೀನ್ ಪಾಷ, ಮುಜಾಯಿದ್ ಪಾಷ,ತಬ್ರೇಜ್ ಪಾಷ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *