ಶೀಘ್ರ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ :

ಯಲಹಂಕ : ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಾನಿಗೊಳಗಾಗಿದ್ದ ಯಲಹಂಕದ ಮಾರುತಿನಗರ, ಪಾಪಣ್ಣ ಬಡಾವಣೆ, ಸುರಭಿ ಬಡಾವಣೆ, ಪುಟ್ಟೇನಹಳ್ಳಿ,  ರಮಣಶ್ರೀ ಅಪಾರ್ಟ್ಮೆಂಟ್, ಸೋಮೇಶ್ವರನಗರ , ಚಿಕ್ಕಬೊಮ್ಮಸಂದ್ರ , ಕೋಗಿಲು ವೃತ್ತ , ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಹಾಗೂ ಇನ್ನಿತರ ತಗ್ಗು  ಪ್ರದೇಶಗಳಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಬಿ.ಬಿ.ಎಂ.ಪಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲಿಸಿದರು. 

ಇದೇ ವೇಳೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಯಲಹಂಕ ವಲಯ ಜಂಟಿ ಆಯುಕ್ತ ಮಹಮ್ಮದ್ ನಯೀಮ್ ಮೊಮಿನ್ ಸಹ ಉಪಸ್ಥಿತರಿದ್ದು, ಮಳೆ ಹಾನಿಯಿಂದ ಉಂಟಾಗಿರುವ  ಸಮಸ್ಯೆಯನ್ನು ಪರಿಶೀಲಿಸಿದರು.

ಇದೇ ವೇಳೆ ಅಗತ್ಯವಿರುವ ತುರ್ತು ಪರಿಹಾರ ಕ್ರಮವನ್ನು ಸ್ಥಳದಲ್ಲೇ ಕೈಗೊಂಡರು.

ಈ ವೇಳೆ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ಎಡೆಬಿಡದೆ ಸುರಿದ ಭಾರೀ ಮಳೆಯಿಂದಾಗಿ ನಗರದ ಹಲವು ಪ್ರದೇಶಗಳಲ್ಲಿ ಹೆಚ್ಚುವರಿ ನೀರು ನುಗ್ಗಿ ಸಮಸ್ಯೆಯಾಗಿದೆ, ಅದೇ ರೀತಿ ಯಲಹಂಕ ನಗರದ ಕೆಲ ಪ್ರದೇಶಗಳಲ್ಲಿ ಸಹ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ, ಸಮಸ್ಯೆಯ ಪರಿಹಾರಕ್ಕಾಗಿ ಸಮರೋಪಾದಯಲ್ಲಿ ಶ್ರಮಿಸಲಾಗುತ್ತಿದ್ದು,

ನೀರನ್ನು ಶೀಘ್ರದಲ್ಲಿ ತೆರವುಗೊಳಿಸಿ , ಅಗತ್ಯ ಮುಂಜಾಗೃತಿ ಕ್ರಮ ಕೈಗೊಳ್ಳಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಥೇಚ್ಛವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ರೀತಿಯ ಹಾನಿ ಉಂಟಾಗಿದೆ, ಇಂತಹ ವಿಷಮ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಸಹ ಅಧಿಕಾರಿಗಳು ಮತ್ತು ನಮ್ಮೊಂದಿಗೆ ಕೈಜೋಡಿಸಿ ಒದಗಿ ಬಂದಿರುವ ಸಮಸ್ಯೆ ಮತ್ತು ಪರಿಸ್ಥಿತಿಯ ನಿಯಂತ್ರಣಕ್ಕೆ ಸಹಕರಿಸಬೇಕಿದೆ ಎಂದರು.

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

Public power

R Hanumanthu

Kogilu layout

Yelahanka

9845085793

9035282296

7349337989

Leave a Reply

Your email address will not be published. Required fields are marked *