








ನಿೃತ್ಯ ನಿರ್ಮಲಮ್-2024, ಶಾಸ್ತ್ರೀಯ ಮತ್ತು ಜಾನಪದ ನೃತ್ಯ ಉತ್ಸವ
ದಿನಾಂಕ:- 10-11-2024
ಸ್ಥಳ:- ಜಕ್ಕೂರು, ಯಲಹಂಕ.
” ನಿೃತ್ಯ ನಿರ್ಮಲಮ್ -2024 ” ಶಾಸ್ತ್ರೀಯ ಮತ್ತು ಜಾನಪದ ನೃತ್ಯ ಉತ್ಸವವು ಜಕ್ಕೂರಿನ ಶ್ರೀ ಕೆ. ವಿ ಬೈರೇಗೌಡ ಕಲಾಮಂದಿರದಲ್ಲಿ ಯಶಸ್ವಿಯಾಗಿ ಮೂಡಿಬಂದಿದೆ. ಈ ಕಾರ್ಯಕ್ರಮವನ್ನು ಶ್ರೀ ಕೃಷ್ಣ ಕಲಾಲಯದ ಸಂಸ್ಥಾಪಕಿ ಹಾಗೂ ಗುರುಗಳಾದ ವಿದೂಷಿ ಶ್ರೀಮತಿ ಸುನಿತಾ ಸುಕುಮಾರನ್ ರವರು ಆಯೋಜಿಸಿದ್ದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಗಣೇಶ ನೃತ್ಯಾಲಯದ ಸಂಸ್ಥಾಪಕರು ಹಾಗೂ ಗುರುಗಳಾದ ಶ್ರೀಯುತ ಎಮ್. ಡಿ ಗಣೇಶ್ ಮತ್ತು ಶ್ರೀಮತಿ ಭಾವನ ಗಣೇಶ್ ಅಲ್ಲದೆ ಶ್ರೀ ಕೆ. ವಿ ಬೈರೇಗೌಡ ಕಲಾಮಂದಿರದ ಅಧ್ಯಕ್ಷರಾದ ಶ್ರೀಯುತ ಬಿ. ರವಿ ಗೌಡ ಮತ್ತು ಮಾಧ್ಯಮ ಮಿತ್ರರಾದ ಶ್ರೀಯುತ ಹನುಮಂತುರವರು ಆಗಮಿಸಿದ್ದರು.
ಡಾ. ಸಹನರವರ ಶಿಷ್ಯ ವೃಂದದವರು, ಶ್ರೀ ಗಣೇಶ ನೃತ್ಯಾಲಯ, ಧನ್ವಂತರಿ , ಆರಂಭ್ ಅಕಾಡೆಮಿ, ಮಧು ಶ್ರೀ ಫೈನ್ ಆರ್ಟ್ಸ್ ನ ಶಿಷ್ಯ ವೃಂದ ಹಾಗೂ
ಹಲವಾರು ಪ್ರತಿಭಾವಂತ ಕಲಾವಿದರು ನೃತ್ಯವನ್ನು ಅಮೋಘವಾಗಿ ಪ್ರದರ್ಶಿಸಿದರು. ಈ ಎಲ್ಲಾ ಕಲಾವಿದರಿಗೆ ಶ್ರೀ ಕೃಷ್ಣ ಕಲಾಲಯವು ” ನೃತ್ಯ ಪ್ರಭಾ ” ಪ್ರಶಸ್ತಿ ನೀಡಿ ಗೌರವಿಸಿದ್ದಾರ ಹಾಗೂ ಕಲಾ ಶಿಕ್ಷಕರಿಗೆ ” ನಾಟ್ಯ ಚೇತನ ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.