



ಬಂಡಿಕೊಡಿಗೇಹಳ್ಳಿ ಗ್ರಾ.ಪಂ.ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ :
ಬ್ಯಾಟರಾಯನಪುರ : ಕ್ಷೇತ್ರದ ಬಂಡಿಕೊಡಿಗೇಹಳ್ಳಿ ಗ್ರಾ.ಪಂ.ನೂತನ ಅಧ್ಯಕ್ಷರಾಗಿ ಬಿ.ಕೆ.ಪಾಳ್ಯ ಗ್ರಾಮದ ಎನ್.ಪವಿತ್ರ ಸುಬ್ರಮಣಿ, ಉಪಾಧ್ಯಕ್ಷರಾಗಿ ಮೈಲನಹಳ್ಳಿ ಗ್ರಾಮದ ಶ್ವೇತ ಚನ್ನಕೇಶವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಂಡಿಕೊಡಿಗೇಹಳ್ಳಿ ಗ್ರಾ.ಪಂ.ಯಲ್ಲಿ ಒಟ್ಟು 26 ಸದಸ್ಯರಿದ್ದು, ನಿಕಟ ಪೂರ್ವ ಅಧ್ಯಕ್ಷೆಚೈತ್ರ ರಾಜಶೇಖರ್, ಉಪಾಧ್ಯಕ್ಷ ಬಿ.ಕೆ.ಮಂಜು ರವರ ರಾಜಿನಾಮೆ ಯಿಂದ ತೆರವಾದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕ್ರಮವಾಗಿ ಎನ್.ಪವಿತ್ರ ಸುಬ್ರಮಣಿ ಅಧ್ಯಕ್ಷರಾಗಿ, ಶ್ವೇತ ಚನ್ನಕೇಶವ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಇದೇ ವೇಳೆ ನೂತನ ಅಧ್ಯಕ್ಷೆ ಪವಿತ್ರ ಸುಬ್ರಮಣಿ ಮಾತನಾಡಿ ‘ಗ್ರಾ.ಪಂ.ಅಧ್ಯಕ್ಷೆ ಯಾಗಿ ಆಯ್ಕೆಯಾಗಲು ಸಹಕಾರ ನೀಡಿರುವ ಗ್ರಾ.ಪಂ.ಸರ್ವ ಸದಸ್ಯರಿಗೂ ಕೃತಜ್ಞತಾ ಪೂರ್ವಕ ಧನ್ಯವಾದ ತಿಳಿಸಲಿಚ್ಛಿಸುತ್ತೇನೆ. ಸರ್ವ ಸದಸ್ಯರ ವಿಶ್ವಾಸದೊಂದಿಗೆ ಬಂಡಿಕೊಡಿಗೇಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಗ್ರಾಮಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಸಮರ್ಪಕ ಕಸ ವಿಲೇವಾರಿ ಮುಂತಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ ಬಡವರಿಗೆ ಸೂರು ಕಲ್ಪಿಸುವ ದಿಸೆಯಲ್ಲಿ ಶ್ರಮಿಸುವುದಾಗಿ ತಿಳಿಸಿದರು.
ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿ, ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಮುಖಂಡ ಎಚ್.ಸಿ.ತಮ್ಮೇಶ್ ಗೌಡ ಗೌರವ ಸನ್ಮಾನ ನೀಡಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಪಿ.ಕೆ.ರಾಜಗೋಪಾಲ್, ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಹನುಮಂತುಗೌಡ, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಜನಾರ್ದನ ಪಿ., ಎನ್.ಜಗದೀಶ್, ಬಿ.ಕೆ.ಮಂಜು, ಚೈತ್ರ ರಾಜಶೇಖರ್, ಗ್ರಾ.ಪಂ. ಸದಸ್ಯರಾದ ಅನಿತಾ ನಾರಾಯಣ, ಚೈತ್ರ ಪಿ.ತಿಮ್ಮೇಗೌಡ, ಜೆ.ಪವಿತ್ರ ಹರೀಶ್, ಭಾಗ್ಯಲಕ್ಷ್ಮಿ ಬಿ.ವಿ. ಚಂದ್ರಮುರಳಿ, ಆಶಾ ರವೀಂದ್ರ, ಆಂಜಿನಪ್ಪ ಕೆ.,ಎಂ.ಕೆ.ಭಾರತಿ ನಾರಾಯಣಸ್ವಾಮಿ, ಮುನೇಗೌಡ ಎನ್., ಗಿರೀಶ್ ಎಂ., ವಿ.ದೇವರಾಜ್, ನವೀನ್ ಎನ್., ಸುಬ್ರಮಣಿ ಎಂ., ಪುಷ್ಪ ನಾರಾಯಣಸ್ವಾಮಿ, ಮಂಜುನಾಥ್ ಕೆ., ಜಯಲಕ್ಷ್ಮಮ್ಮ ಶಿವಣ್ಣ, ರಾಮಕೃಷ್ಣರಾಜು, ಅಮರನಾರಾಯಣಸ್ವಾಮಿ, ಗಾಯತ್ರಿ ವಿ.ಬಸವರಾಜು, ಉಮಾ ಮುನಿರಾಜು, ಕೃಷ್ಣಪ್ಪ ಬಿ.ಎನ್.ಸೇರಿದಂತೆ ಇನ್ನಿತರರಿದ್ದರು.