ಕರುನಾಡ ಜನಪಡೆ ನೂತನ‌ ಕಚೇರಿ ಉದ್ಘಾಟನೆ ಮಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.

ಬೆಂಗಳೂರು,ಯಲಹಂಕದ ಕೋಗಿಲು ಬಡಾವಣೆಯಲ್ಲಿ ಇಂದು ಕರುನಾಡ ಜನಪಡೆಯ ನೂತನ ಕಚೇರಿಯನ್ನು
ಕೇಂದ್ರ ಸಣ್ಣ ಮತ್ತು ಮಧ್ಯಮ‌ ಕೈಗಾರಿಕೆ ಸಚಿವೆ ಶೋಭಾಕರಂದ್ಲಾಜೆ ಉದ್ಘಾಟಿಸಿದರು.

ಕರುನಾಡ ಜನಪಡೆಯ‌ ನೂತನ ಕಚೇರಿ ಉದ್ಘಾಟಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಕನ್ನಡ ನಾಡು, ನುಡಿ, ನೆಲ,ಜಲ, ಸಂಸ್ಕೃತಿಯ ರಕ್ಷಣೆಗೆ ಎಲ್ಲರೂ ಪಣತೊಡಬೇಕು ಎಂದು‌ ಕರೆ ನೀಡಿದರು.

‘ಕರುನಾಡ ಜನಪಡೆ’ಯ ರಾಜ್ಯಾಧ್ಯಕ್ಷ ರಾಬಿನ್ ಮಾತನಾಡಿ ಸೇವಾ ಪರಮಧರ್ಮಃ ಎಂಬ ನುಡಿಯಂತೆ ಕನ್ನಡ ನಾಡು, ನುಡಿ, ಗಡಿಯ ರಕ್ಷಣೆಯ ಜತೆಗೆ ಬಡವರ ಸೇವೆಯ ಮಹತ್ವಾಕಾಂಕ್ಷೆ ಇಟ್ಟುಕೊಂಡು ಕರುನಾಡ ಜನಪಡೆ ಸ್ಥಾಪಿಸಿದ್ದು, ಸಂಘಟನೆಯ ಮೂಲಕ ಒಂದಷ್ಟು ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಬಳ್ಳಾರಿ, ಹೊಸಕೋಟೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲೂ ಸಹ ಇಂದು ಕರುನಾಡ ಜನಪಡೆಯ ಕಚೇರಿ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು, ಜತೆಗೆ ಬಡವರಿಗಾಗಿ ಸೇವೆ ಮಾಡುವುದು ನಮ್ಮ ಆಶಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಂಘಟನೆಯ ಇತರೆ ಪದಾಧಿಕಾರಿಗಳಾದ ಜೀವನ್ ಸ್ಟೀಫನ್, ಮಂಜುನಾಥಸ್ವಾಮಿ ಗೌಡ, ನರಸಿಂಹಮೂರ್ತಿ, ಜೋಸೆಫ್ ರಾಜಾಸಿಂಗ್, ಸುರೇಶ್ ಎ ಆರ್. ಭಾಸ್ಕರ್ ಹಾಗೂ ಇತರ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *