

ಕನಕದಾಸರು ಜಾತಿ ಪದ್ದತಿ ನಿರ್ಮೂಲನೆಗಾಗಿ ಶ್ರಮಿಸಿದ ಸಂತಕವಿ :
ಬ್ಯಾಟರಾಯನಪುರ : 16ನೇ ಶತಮಾನದಲ್ಲಿಯೇ ಜಾತಿ ಪದ್ದತಿ ನಿರ್ಮೂಲನೆಗಾಗಿ ಶ್ರಮಿಸಿದ ದಾಸ ಶ್ರೇಷ್ಠ ಸಂತಕವಿ ಕನಕದಾಸರು ಎಂದು ಜಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್ ಅಭಿಪ್ರಾಯಪಟ್ಟರು.
ಬ್ಯಾಟರಾಯನಪುರ ಕ್ಷೇತ್ರದ ಚಿಕ್ಕಜಾಲದಲ್ಲಿರುವ ‘ಜಾಲಾ ಬ್ಲಾಕ್ ಕಾಂಗ್ರೆಸ್ ಸಮಿತಿ’ ಕಚೇರಿಯಲ್ಲಿ ಏರ್ಪಡಿಸಿದ್ದ ಕನಕದಾಸರ 537ನೇ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದ ನಂತರ ಮಾತನಾಡಿದ ಅವರು ಕನಕದಾಸರು 5 ಶತಮಾನಗಳ ಹಿಂದೆಯೇ ಜಾತಿ ಪದ್ಧತಿಯ ವಿರುದ್ಧ ಸೆಟೆದು ನಿಲ್ಲುವುದರ ಜೊತೆಗೆ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಕೀರ್ತನೆಗಳ ಮೂಲಕ ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ ಮಹಾನ್ ದಾರ್ಶನಿಕರು. ಅವರು ಕೀರ್ತನೆಗಳೇ ಅಲ್ಲದೆ ನಳಚರಿತ್ರೆ, ಹರಿಭಕ್ತಿಸಾರ, ರಾಮಧಾನ್ಯಚರಿತ್ರೆ ಮತ್ತು ಮೋಹನತರಂಗಿಣಿ ಎಂಬ ಪ್ರಸಿದ್ಧ ಕೃತಿಗಳನ್ನು ರಚಿಸಿದ್ದು, ಇವುಗಳ ಮೂಲಕ ಬಡವ-ಶ್ರೀಮಂತರ ಗುಣಗಳ ಅವಲೋಕನ, ಭಕ್ತಿಯ ಮಹಿಮೆ, ದೇವರ ನಿಜರೂಪ ಕುರಿತು ವಿಶ್ಲೇಷಣೆ ಮಾಡಿದ್ದಾರೆ. ಅವರ ಕೀರ್ತನೆಗಳು ಇಂದಿಗೂ ಸಹ ಸಮಾಜಕ್ಕೆ ಪ್ರಸ್ತುತವಾಗಿವೆ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಯಲಹಂಕ ತಾಲೂಕು ಭೂ ನ್ಯಾಯಮಂಡಳಿ ಸದಸ್ಯರಾದ ಶೆಟ್ಟಿಕೆರೆ ಅಪ್ಪಾಜಿ,ಕಾಂಗ್ರೆಸ್ ಮುಖಂಡರಾದ ತಿರುಮಳಪ್ಪ. ಹರೀಶ್ ಕುಮಾರ್, ಶಿವಕುಮಾರ್, ಸುಬ್ರಮಣಿ, ಅಮೀರ್ ಜಾನ್, ಬಾಬಾಜಾನ್ ಸೇರಿದಂತೆ ಇನ್ನಿತರರಿದ್ದರು.