







ರಾಜಾನುಕುಂಟೆ ಗ್ರಾ.ಪಂ. ಉಪಾಧ್ಯಕ್ಷರಾಗಿ ವಿ.ಶಿವಕುಮಾರ್ ಆಯ್ಕೆ :
ಯಲಹಂಕ : ಯಲಹಂಕ ಕ್ಷೇತ್ರದ ರಾಜಾನುಕುಂಟೆ ಗ್ರಾ.ಪಂ.ಉಪಾಧ್ಯಕ್ಷರಾಗಿ ಅದೇ ಗ್ರಾಮದ ವಿ.ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜಾನುಕುಂಟೆ ಗ್ರಾ.ಪಂ.ಯಲ್ಲಿ ಒಟ್ಟು 27 ಜನ ಸದಸ್ಯರಿದ್ದು, ನಿಕಟ ಪೂರ್ವ ಉಪಾಧ್ಯಕ್ಷ ವೆಂಕಟೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ವಿ.ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ನೂತನ ಉಪಾಧ್ಯಕ್ಷ ವಿ.ಶಿವಕುಮಾರ್ ಅವರನ್ನು ಗ್ರಾ.ಪ.ಸದಸ್ಯರು, ಬಿಜೆಪಿ ಮುಖಂಡರು ಗೌರವ ಸನ್ಮಾನ ನೀಡಿ ಅಭಿನಂದಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಡಿ.ಜಿ.ಅಪ್ಪಯ್ಯಣ್ಣ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ರಾಜಾನುಕುಂಟೆ ಗ್ರಾ.ಪಂ.ಅಧ್ಯಕ್ಷೆ ಚನ್ನಮ್ಮ, ಮಾಜಿ ಅಧ್ಯಕ್ಷರಾದ ಎಸ್.ಜಿ.ನರಸಿಂಹಮೂರ್ತಿ (ಎಸ್.ಟಿ.ಡಿ.ಮೂರ್ತಿ), ಅಂಬಿಕಾ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಚೊಕ್ಕನಹಳ್ಳಿ ವೆಂಕಟೇಶ್, ಆವಲಹಳ್ಳಿ ಕೇಶವಮೂರ್ತಿ, ಗ್ರಾ.ಪಂ.ಸದಸ್ಯರಾದ ಸಾದೇನಹಳ್ಳಿ ಚಿಕ್ಕಣ್ಣ, ಆರ್ ಎಚ್ ಹನುಮೇಗೌಡ, ನಾಗೇಶ್, ಭವಾನಿ, ಮುತ್ತುವೇಣು, ಸುಜಾತ, ಗಂಗಮ್ಮ, ಆರ್ ಡಿ ರಾಜಣ್ಣ, ವೆಂಕಟೇಶ್, ಸೌಮ್ಯ ಗೋವಿಂದರಾಜು, ಬಾಲಾಜಿ, ಸುಜಾತ, ಬಿಜೆಪಿ ಯುವ ಮುಖಂಡ ಸಾದೇನಹಳ್ಳಿ ಪ್ರಕಾಶ್ ಗೌಡ, ಹರೀಶ್ ಸೇರಿದಂತೆ ಇನ್ನಿತರರಿದ್ದರು.