






1 ಕೋಟಿ ರು. ವೆಚ್ಚದ ಡಾಂಬರೀಕರಣ ಕಾಮಗಾರಿಗೆ ಎಸ್.ಆರ್.ವಿಶ್ವನಾಥ್ ಚಾಲನೆ :
ಯಲಹಂಕ : ಯಲಹಂಕ ಕ್ಷೇತ್ರದ ಎಂ.ಎಸ್ ಪಾಳ್ಯ ವೃತ್ತದಿಂದ ಜಿ.ಕೆ.ವಿ.ಕೆ ಜಂಕ್ಷನ್ ವರೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನಿರ್ವಹಿಸಲಾದ 1 ಕೋಟಿ ರು. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಎಸ್. ಆರ್ ವಿಶ್ವನಾಥ್ ಭಾನುವಾರ ಭೂಮಿ ಪೂಜೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಯಲಹಂಕ ನಗರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಪವನ್ ಕುಮಾರ್, ಬಿಜೆಪಿ ಹಿರಿಯ ಮುಖಂಡ ಎ.ಸಿ.ಮುನಿಕೃಷ್ಣಪ್ಪ, ಅಟ್ಟೂರು ವಾರ್ಡ್ ಬಿಜೆಪಿ ಅಧ್ಯಕ್ಷ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಸತೀಶ್, ಶೇಷಾದ್ರಿ, ಕಾರ್ಯದರ್ಶಿ ಗಿರೀಶ್, ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಎಚ್.ಎಸ್.ಕಿರಣ್, ಅಟ್ಟೂರು ವಾರ್ಡ್ ಯುವ ಮೋರ್ಚಾ ಅಧ್ಯಕ್ಷ ವಿನೋದ್, ಎಸ್ಸಿ ಮೋರ್ಚಾ ಅಧ್ಯಕ್ಷ ಸುನಿಲ್ ಕುಮಾರ್, ಗುರುಮೂರ್ತಿ, ಹರ್ಷ, ಶ್ರೀಕಾಂತ್, ಮುರಳಿನಾಯ್ಡು, ಬೂತ್ ಅಧ್ಯಕ್ಷರಾದ ನಾಸಿರ್, ಸಾಲಾರ್, ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಕವಿತಾ, ಭವ್ಯ, ಪದ್ಮಾವತಿ, ರೇಖಾ, ಭಾಗ್ಯಲಕ್ಷ್ಮಿ ಸೇರಿದಂತೆ ಇನ್ನಿತರರಿದ್ದರು.