





ಕಾಕೋಳು ರಸ್ತೆಯ ಚೊಕ್ಕನಹಳ್ಳಿ ಸಮೀಪ F16 ನೂತನ ರೆಸ್ಟೋರೆಂಟ್ ಪ್ರಾರಂಭ :
ಯಲಹಂಕ : ಯಲಹಂಕ ಕ್ಷೇತ್ರದ ರಾಜಾನುಕುಂಟೆ-ಕಾಕೋಳು ಮುಖ್ಯ ರಸ್ತೆಯ ಚೊಕ್ಕನಹಳ್ಳಿ ಗೇಟ್ ಸಮೀಪ ನೂತನವಾಗಿ ನಿರ್ಮಿಸಲಾಗಿದ್ದ F16 ರೆಸ್ಟೋರೆಂಟ್ ನ್ನು ಬಿಜೆಪಿ ಯುವ ಮುಖಂಡರಾದ ಅಲೋಕ್ ವಿಶ್ವನಾಥ್ ಸೋಮವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ‘ಸಸ್ಯಾಹಾರಿ ಮತ್ತು ಮಾಂಸಾಹಾರಿ ಶೈಲಿಯ ತಿಂಡಿ-ತಿನಿಸುಗಳ ಲಭ್ಯತೆಯ ಜೊತೆಗೆ, ವಿಶಾಲವಾದ ಪಾರ್ಕಿಂಗ್ ಸ್ಥಳ, ಪಾರ್ಟಿ ಪ್ರಿಯರಿಗೆ ಅಗತ್ಯ ಸೌಲಭ್ಯ, ತಿನಿಸುಗಳು, ಪಾನೀಯಗಳೊಂದಿಗೆ ನಿರಾತಂಕವಾಗಿ ಕಾಲ ಕಳೆಯಲು ಹೇಳಿ ಮಾಡಿಸಿದಂತಿರುವ ಈ ರೆಸ್ಟೋರೆಂಟ್ ಕಾಕೋಳು ಮುಖ್ಯ ರಸ್ತೆಯಲ್ಲಿ ಪ್ರಾರಂಭವಾಗಿರುವುದು ಭೋಜನ ಪ್ರಿಯರಿಗೆ ಸಂತಸ ಉಂಟು ಮಾಡುವ ವಿಷಯ ವಾಗಿದೆ. ದೊಡ್ಡಬಳ್ಳಾಪುರ ಮುಖ್ಯ ರಸ್ತೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಯಲಹಂಕ, ಹೆಸರಘಟ್ಟ ಹೀಗೆ ನಾಲ್ಕು ಕಡೆಗಳಿಗೂ ಮಧ್ಯದಲ್ಲಿ ಇರುವ F16 ರೆಸ್ಟೋರೆಂಟ್ ಬಾಲಕರು, ಕಾಲೇಜು ವಿದ್ಯಾರ್ಥಿಗಳು, ಮಧ್ಯ ವಯಸ್ಕರು, ಹಿರಿಯರು ಹೀಗೆ ಎಲ್ಲಾ ವಯೋಮಾನದ ಭೋಜನ ಪ್ರಿಯರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ ಎಂದರು.
ಇದೇ ಸಂದರ್ಭದಲ್ಲಿ ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ವಾಣಿಶ್ರೀ ವಿಶ್ವನಾಥ್, F16 ರೆಸ್ಟೋರೆಂಟ್ ಮಾಲಿಕ, ಶಿವಕೋಟೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಮಂಜುನಾಥ್ ಕೆ.ಪಿ., ಹಿರಿಯ ಬಿಜೆಪಿ ಮುಖಂಡರಾದ ಎಸ್.ಎನ್.ರಾಜಣ್ಣ, ದಿಬ್ಬೂರು ಜಯಣ್ಣ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜಿ.ಜೆ.ಮೂರ್ತಿ, ಯಲಹಂಕ ಗ್ರಾಮಾಂತರ ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಸಿಂಗನಾಯಕನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಟಿ.ಮುನಿರೆಡ್ಡಿ, ಮಾಜಿ ಉಪಾಧ್ಯಕ್ಷ, ಹೆಸರಘಟ್ಟ ಹೋಬಳಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಪ್ರಶಾಂತ್ ರೆಡ್ಡಿ, ಉಪಾಧ್ಯಕ್ಷರಾದ ಇಟಗಲ್ ಪುರ ಮೋಹನ್, ಪಿ.ಕೆ.ರಾಜಣ್ಣ, ಈಶ್ವರಾಚಾರ್, ಚಂದ್ರು, ಮುಖಂಡರಾದ ಹನಿಯೂರು ಕೃಷ್ಣಪ್ಪ, ಗ್ರಾ.ಪಂ.ಸದಸ್ಯರಾದ ಕೆ.ಬಾಬು, ಸಾದೇನಹಳ್ಳಿ ಚಿಕ್ಕಣ್ಣ ಸೇರಿದಂತೆ ಇನ್ನಿತರರಿದ್ದರು.