



ಕ್ರಿಕೆಟ್ ದೇಶಭಾಷೆ ಗಡಿಗಳ ಮೀರಿ ಕ್ರೀಡಾಸ್ಪೂರ್ತಿ ಮೆರೆಯುವ ಕ್ರೀಡೆಯಾಗಿದೆ: ಸಂದೀಪ್.ಬಿ ರೆಡ್ಡಿ ಹೇಳಿಕೆ
ಚಿಕ್ಕಬಳ್ಳಾಪುರ: ಅಂತರರಾಷ್ಟ್ರೀಯ ಕ್ರೀಡೆಯಾದ ಕ್ರಿಕೆಟ್ ಆಟವು ದೇಶ ಭಾಷೆ ಗಡಿಗಳ ಮೀರಿ ಕ್ರೀಡಾಸ್ಪೂರ್ತಿ ಯೆಂಬ ಐಕ್ಯತೆಯನ್ನು ಸಾರುವ ಕ್ರೀಡೆಯಾಗಿದೆ ಎಂದು ಭಗತ್ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್.ಬಿ ರೆಡ್ಡಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆರ್.ಹೆಚ್.ಎಲ್ ಗ್ರೂಫ್ ಆಯೋಜಿದ್ದ ಕ್ರಿಕೆಟ್ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಕೇಂದ್ರದಲ್ಲಿ ಇದೇ ಮೊದಲಬಾರಿಗೆ ರಾಜ್ಯಮಟ್ಟದ ಆರ್ಎಚ್ಎಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸು ತ್ತಿರುವುದು ಸಂತೋಷದ ವಿಚಾರವಾಗಿದೆ.ನನ್ನ ಕಿರಿಯ ಸಹೋದರ ರಘು ಶ್ರಮವಹಿಸಿ ಈ ಟೂರ್ನಮೆಂಟ್ ಆಯೋಜಿಸಿದ್ದಾರೆ. ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಈ ಟೂರ್ನಿಯಲ್ಲಿ ಭಾಗಿಯಾಗಲು ತಂಡಗಳು ಆಗಮಿಸಿದ್ದು ಒಟ್ಟು ೨೪ ತಂಡಗಳು ಉತ್ತಮವಾಗಿ ಸೆಣಸಲಿವೆ.ಯಾರೇ ಆಟವಾಡಿದರೂ ಕ್ರೀಡಾಸ್ಪೂರ್ತಿಯಿಂದ ಮಾತ್ರ ಆಡಬೇಕೇ ವಿನಃ ಹಣದ ಕಾರಣಕ್ಕೆ ಆಡಬಾರದು ಎಂದರು.
ಕ್ರೀಡಾಪಟುಗಳು ಮಾತ್ರವಲ್ಲದೆ ಸರ್ವರೂ ಕೂಡ ಆಟೋಟಗಳಲ್ಲಿ ಭಾಗವಹಿಸಿದರೆ ಆರೋಗ್ಯ ವೃದ್ಧಿಯಾಗಲಿದೆ ಎಂಬ ಸತ್ಯವನ್ನು ಅರಿಯಬೇಕಿದೆ. ರಾಷ್ಟ್ರೀಯ ಕ್ರೀಡೆಗಳ ಜೊತೆಗೆ ದೇಸಿ ಕ್ರೀಡೆಗಳಾದ ಕಬಡ್ಡಿ,ಕೊಕ್ಕೋ,ಚಿನ್ನಿ ದಾಂಡು,ಲಗೋರಿ,ಕುಂಟೆಬಿಲ್ಲೆ, ಹಗ್ಗಜಗ್ಗಾಟ ಮೊದಲಾದ ಕ್ರೀಡೆಗಳಿಗೂ ಪ್ರೋತ್ಸಾಹ ದೊರೆತರೆ ಗ್ರಾಮೀಣ ಪ್ರತಿಭೆಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆಯನ್ನು ಪ್ರದರ್ಶನ ಮಾಡಲು ಅವಕಾಶ ವಾಗಲಿದೆ. ಈ ನಿಟ್ಟಿನಲ್ಲಿ ಭಗತ್ಸಿಂಗ್ ಚಾರಿಟೇಬಲ್ ಟ್ರಸ್ಟ್ ಕ್ರಿಕೆಟ್ ಕಬಡ್ಡಿ ಸೇರಿ ದೇಸೀ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಿದೆ ಎಂದರು.
ಆರ್.ಎಚ್.ಎಲ್ ಫೌಂಡೇಶನ್ ಅಧ್ಯಕ್ಷ ರಘು ಮಾತನಾಡಿ ಆರ್. ಎಚ್.ಎಲ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾಗವಹಿಸುವ ತಂಡಗಳಲ್ಲಿ ಪ್ರಥಮ ಸ್ಥಾನ ಗಳಿಸುವ ತಂಡಕ್ಕೆ 2ಲಕ್ಷ 222 ರೂಪಾಯಿ ದ್ವಿತೀಯ ಸ್ಥಾನ ಗಳಿಸುವ ತಂಡಕ್ಕೆ 1ಲಕ್ಷದ,111 ರೂಪಾಯಿ ಹಣವನ್ನು ಇಡಲಾಗಿದೆ. ಮ್ಯಾನ್ ಆಫ್ದ ಸೀರೀಸ್ಗೆ ಬೈಕ್ ಇಡಲಾಗಿದೆ. ಇದರ ಉದ್ದೇಶ ಹಣಕ್ಕಾಗಿ ಆಟವನ್ನು ಆಡಿಸುವುದಾಗಿರದೆ ನಿಜವಾದ ಪ್ರತಿಭೆಗಳನ್ನು ಕ್ರಿಕೆಟ್ ಲೋಕಕ್ಕೆ ಪರಿಚಯಿಸು ವುದೇ ಆಗಿದೆ ಎಂದರು.
ಚಿಕ್ಕಬಳ್ಳಾಪುರ ನಗರದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದ್ದು ಈ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಫೌಂಡೇಶನ್ ವತಿಯಿಂದ ಒದಗಿಸಲಾಗಿದೆ.
ತೀರ್ಪುಗಾರರಾಗಿ ಮತ್ತು ವೀಕ್ಷಣೆವಿರಣೆಕಾರರನ್ನು ಕುಂದಾಪುರ ಉಡುಪಿ, ಕುಣಿಗಲ್ ಮೊದಲಾದ ಪ್ರದೇಶಗಳಿಂದ ಕರೆಯಲಾಗಿದೆ. ಅತ್ಯಂತ ವ್ಯವಸ್ಥಿತವಾಗಿ ಈ ಟೂರ್ನಮೆಂಟ್ ಆಯೋಜಿಸಿದ್ದು ಎರಡುದಿನಗಳ ಕಾಲ ನಡೆಯ ಲಿದ್ದು ಜನತೆ ಇದರ ಸೊಬಗನ್ನು ಸವಿಯಬೇಕು ಎಂದು ಮನವಿ ಮಾಡಿದರು.