ನಾಗವಾರ : ದಿನಾಂಕ: 08/12/24 ರಂದು ವೀ ಕಮ್ಯುನಿಟಿಗೆ ಸಹಯೋಗದೊಂದಿಗೆ ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ರಾಮಯ್ಯ ಯೂನಿವರ್ಸಿಟಿ ಇವರ ವತಿಯಿಂದ ಬೆಂಗಳೂರು ದಕ್ಷಿಣ ಜಿಲ್ಲೆ ನಾಗವಾರ ಘಟಕದ ಡಾ. ಬಿ. ಆರ್. ಅಂಬೇಡ್ಕರ್ ಆಟದ ಮೈದಾನದಲ್ಲಿ ಗೃಹರಕ್ಷಕರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಹಲ್ಲಿನ ತಪಾಸನೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ದಕ್ಷಿಣ ಜಿಲ್ಲೆಯ ಗೌರವಾನ್ವಿತ ಸಮಾದೇಷ್ಟರಾದ, ಶ್ರೀಮಾನ್ ಶ್ರೀ ಕ್ಯಾಪ್ಟನ್ ರಾಜೇಶ್ ಜೈ ಸಿಂಹ ರವರಿಂದ ಶಿಬಿರದ ಉದ್ಘಾಟನೆ ನಡೆಯಿತು, ಈ ಕಾರ್ಯಕ್ರಮದಲ್ಲಿ ಘಟಕ ಅಧಿಕಾರಿಗಳಾದ ಶ್ರೀಮತಿ ವಿ ಗೌರಮ್ಮ, ವಿ ಕಮ್ಯುನಿಟಿ ಫೌಂಡರ್ ಶೈಲಜಾ ವೆಂಕಟ್ ಮತ್ತು ಕಮ್ಯುನಿಟಿಯ ಸದಸ್ಯರು ಹಾಗೂ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯ ಅಧಿಕಾರಿಗಳು, ರಾಮಯ್ಯ ಯುನಿವರ್ಸಿಟಿಯ ಡೆಂಟಲ್y ಅಧಿಕಾರಿಗಳು ಮತ್ತು ಗೃಹರಕ್ಷಕ ರಕ್ಷತಿಯರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು, ಶಿಬಿರದ ಬಗ್ಗೆ ಮಾತನಾಡಿದ ಶ್ರೀಮಾನ್ ಶ್ರೀ ಕ್ಯಾಪ್ಟನ್ ರಾಜೇಶ್ ಜಯಸಿಂಹ ರವರು ವೀ ಕಮುನಿಟಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು, ಸದಾ ಸೇವೆಗೆ ಸಿದ್ದವಿರುವ ಶಿಸ್ತಿನ ಸಿಪಾಯಿಗಳಿಗೆ ಈ ರೀತಿಯಾದಂತಹ ಆರೋಗ್ಯ ತಪಾಸಣೆಯನ್ನು ಹಾಗೂ ಕಣ್ಣಿನ ತಪಾಸಣೆಯನ್ನು ನಡೆಸುತ್ತಿರುವುದು ಬಹಳ ಖುಷಿಯ ವಿಚಾರ, ಹೀಗೆ ನಮ್ಮ ವಲಯದ ಎಲ್ಲಾ ಘಟಕಗಳಿಗೂ ಆರೋಗ್ಯ ತಪಾಸಣೆ ಮಾಡುವಂತೆ ಸೂಚಿಸಿದ್ರು, ಒಟ್ಟಾರೆಯಾಗಿ ಶಿಬಿರದ ಬಗ್ಗೆ ವೀ ಕಮ್ಯುನಟಿಯ ಫೌಂಡರ್ ಶೈಲಜಾ ಅವರಿಗೆ ಅಭಿನಂದನೆಯನ್ನು ತಿಳಿಸಿದ್ರು, ಜೊತೆಗೆ ನಾಗವಾರ ಘಟಕದ ಘಟಕ ಅಧಿಕಾರಿಯದ ಶ್ರೀಮತಿ ಗೌರಮ್ಮ ಅವರು ಮಾತನಾಡಿ, ಇನ್ನು ಮುಂದೆ ಇದೇ ರೀತಿ ಗೃರಕ್ಷಕರಿಗೆ ಉಚಿತವಾದ ಸೌಲಭ್ಯಗಳನ್ನು ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದ್ದರು, ಸ್ವಯಂಸೇವಕ ಸೇವಕರಿಗೆ ಈ ರೀತಿಯಾದಂತಹ ಶಿಬಿರ ಬಹಳ ಮುಖ್ಯ ಎಂದು ತಿಳಿಸಿದರು , 150ಕ್ಕೂ ಹೆಚ್ಚು ಮಂದಿ ಉಚಿತ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಲಾಯಿತು, ಮತ್ತು ನಾಗವಾರ ಆಟದ ಮೈದಾನದ ಉಸ್ತುವಾರಿಗಳಾದ ಅಧ್ಯಕ್ಷರು ವೆಂಕಟಸ್ವಾಮಿ ಅವರು ಸಹ ಶಿಬಿರದ ಬಗ್ಗೆ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದರು. ಕೊನೆದಾಗಿ ಮಾತಾಡಿದ ವಿ ಕಮುನಿಟಿ ಫೌಂಡರ್ ಶೈಲಜ ವೆಂಕಟ್ ನಮ್ಮ ಕಮ್ಯೂನಿಟಿ ಭಾರತೀಯ ಸಂಸ್ಕೃತಿ ಹಾಗೂ ಜಿರೋ ವೇಸ್ಟ್ ಮ್ಯಾನೇಜ್ಮೆಂಟ್ ಕಾರ್ಯನಿರ್ವಹಿಸುತ್ತದೆ ಜೊತೆಗೆ ಇಂತಹ ಅನೇಕ ಶಿಬಿರಗಳನ್ನ ಆಯೋಜಿಸುತ್ತಾರೆ ಸದಾ ಸಾರ್ವಜನಿಕರ ಸೇವೆಗೆ ಸಿದ್ಧವಾಗಿರುತ್ತದೆ ಎಂದು ವ್ಯಕ್ತಪಡಿಸಿದ್ದರು, ಈ ಶಿಬಿರ ನಮಗೆ ಬಹಳ ವಿಶೇಷ ಸಮಾಜದಲ್ಲಿ ಸೇವೆ ಸಲ್ಲಿಸುವ ಗೃಹರಕ್ಷಕ ರಕ್ಷಕೀಯರಿಗೆ ನಾವು ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯಾಗುತ್ತದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು..

Leave a Reply

Your email address will not be published. Required fields are marked *