










ಯಲಹಂಕಾ 4ನೇ ಹಂತ : ದಿನಾಂಕ : 4-12-2024 ವೀ ಕಮ್ಯೂನಿಟಿ ಸಹಯೋಗದೊಂದಿಗೆ ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ರಾಮಯ್ಯ ಯೂನಿವರ್ಸಿಟಿ ಅವರ ವತಿಯಿಂದ ಬಿಬಿಎಂಪಿ ಪೌರ ಕಾರ್ಮಿಕರಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ ಹಲ್ಲಿನ ತಪಾಸಣಾ ಶಿಬಿರವನ್ನು ಯಲಹಂಕ 4ನೇ ಹಂತದಲ್ಲಿರುವ ನಿಸರ್ಗ ಗ್ರೌಂಡ್ ನಲ್ಲಿ ಆಯೋಜಿಸಲಾಗಿತ್ತು, ಈ ಒಂದು ಶಿಬಿರಕ್ಕೆ ಮುಖ್ಯ ಅತಿಥಿಗಳಾಗಿ ವಿಕಮ್ಯೂನಿಟಿ ಫೌಂಡರ್ ಶೈಲಜಾ ವೆಂಕಟ್ ಹಾಗೂ ಸದಸ್ಯರು ಮತ್ತು ಶಂಕರ ಕಣ್ಣಿನ ಆಸ್ಪತ್ರೆ ವೈದ್ಯಾಧಿಕಾರಿಗಳು ಹಾಗೂ ರಾಮಾಯಣ ಯುನಿವರ್ಸಿಟಿ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು , 200 ಕ್ಕೂ ಹೆಚ್ಚು ಪೌರಕಾರ್ಮಿಕರು ಕಣ್ಣಿನ ಶಿಬಿರದಲ್ಲಿ ಹಾಗೂ ಹಲ್ಲಿನ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು, ಸಮಾಜದಲ್ಲಿ ದಿನನಿತ್ಯ ನಮ್ಮ ನಗರವನ್ನ ಸ್ವಚ್ಛವಾಗಿಡುವ ಕೆಲಸವನ್ನು ಮಾಡುವ ಪೌರವ ಕಾರ್ಮಿಕರಿಗೆ ನಮ್ಮ ವಿ ಕಮುನಿಟಿಯ ಪರವಾಗಿ ಚಿಕ್ಕ ಅಳಿಲು ಸೇವೆ ಎಂದರೆ ತಪ್ಪಾಗಲಾರದು, ಎಂದು ವೀ ಕಮ್ಯುನಿಟಿ ಫೌಂಡರ್ ಶೈಲಜಾ ವೆಂಕಟ್ ಅಭಿವ್ಯಕ್ತ ಪಡಿಸಿದರು, ಹೀಗೆ ಸದಾ ಪೌರಕಾರ್ಮಿಕರಿಗೂ ತಮಗೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಪಾತ್ರ ನಿರ್ವಹಿಸುತ್ತದೆ ಎಂದು ತಿಳಿಸಿದ್ದೇನೆ ಎಂದರು ಶಿಬಿರವು ಅತ್ಯಂತ ಯಶಸ್ವಿಯಾಗಿ ನಡೆಯಿತು.