






ಹೆಸರಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಬಿ.ಕೃಷ್ಣಮೂರ್ತಿ ಅವಿರೋಧ ಆಯ್ಕೆ :
ಯಲಹಂಕ : ಕ್ಷೇತ್ರದ ‘ಹೆಸರಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ”ದ ನೂತನ ಅಧ್ಯಕ್ಷರಾಗಿ ಮಾದಪ್ಪನಹಳ್ಳಿ ಗ್ರಾಮದ ಎಂ.ಬಿ.ಕೃಷ್ಣಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೆಸರಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದಲ್ಲಿ ಒಟ್ಟು 12 ಮಂದಿ ಸದಸ್ಯರಿದ್ದು, ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನದ ಆಯ್ಕೆಗಾಗಿ ಗುರುವಾರ ನಡೆದ ಚುನಾವಣೆಯಲ್ಲಿ ಎಂ.ಬಿ.ಕೃಷ್ಣಮೂರ್ತಿ ಅಧ್ಯಕ್ಷರಾಗಿ, ಹೆಚ್.ಸಿ.ರತ್ನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಇದೇ ವೇಳೆ ನೂತನ ಅಧ್ಯಕ್ಷ ಎಂ.ಬಿ.ಕೃಷ್ಣಮೂರ್ತಿ ಮಾತನಾಡಿ ಸಂಘದ ಎಲ್ಲಾ ಸದಸ್ಯರ ಬೆಂಬಲ ದೊಂದಿಗೆ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಸಂತೋಷ ಉಂಟು ಮಾಡಿದೆ. ನನಗೆ ಈ ಸ್ಥಾನ ದೊರೆಯುವಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್, ವಾಣಿಶ್ರೀ ವಿಶ್ವನಾಥ್, ಅಲೋಕ್ ವಿಶ್ವನಾಥ್ ಅವರು ನೀಡಿರುವ ಸಹಕಾರ ಮತ್ತು ಬೆಂಬಲಕ್ಕೆ ನಾನು ಚಿರ ಋಣಿಯಾಗಿದ್ದೇನೆ. ಅಂತೆಯೇ ತಮ್ಮ ಅಮೂಲ್ಯ ಬೆಂಬಲ ನೀಡಿ ಸಹಕರಿಸಿರುವ ಎಲ್ಲಾ ಸದಸ್ಯರಿಗೂ ಈ ಸಂದರ್ಭದಲ್ಲಿ ಅನಂತ ಧನ್ಯವಾದಗಳನ್ನು ತಿಳಿಸಲಿಚ್ಛಿ ಸುತ್ತೇನೆ. ಶಾಸಕರ ಸಲಹೆ, ಮಾರ್ಗದರ್ಶನದಲ್ಲಿ ಸಂಘದ ಎಲ್ಲಾ ಸದಸ್ಯರ ವಿಶ್ವಾಸದೊಂದಿಗೆ ಸಂಘ ವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದಾಗಿ ತಿಳಿಸಿದರು.
ಸಂಘದ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಬಿಜೆಪಿ ಮುಖಂಡರು ಹಾಗೂ ಸಂಘದ ಸದಸ್ಯರು ಅಭಿನಂದಿಸಿ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್. ರಾಜಣ್ಣ, ಸತೀಶ್ ಕಡತನಮಲೆ, ಎಚ್.ಸಿ. ರಾಜೇಶ್, ಶಿವಕೋಟೆ ಗ್ರಾ.ಪಂ. ಮಾಜಿ ಅಧ್ಯಕ್ಷ ಟಿ.ರಮೇಶ್, ಸಿಂಗನಾಯಕನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಅಮರಾವತಮ್ಮ, ಸದಸ್ಯರಾದ ಚೈತ್ರ ಕೆಂಪೇಗೌಡ, ಹೆಸರಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾದ ಹೆಚ್.ಡಿ. ಕೃಷ್ಣಪ್ಪ, ಕೇಶವ ಹೆಚ್.ಎನ್., ಸಿ.ನಂಜುಂಡಪ್ಪ, ಕೆ.ಜೆ.ರಾಘವೇಂದ್ರ (ಬಾಬು), ಎಂ. ಲಕ್ಷ್ಮಣ(ಸಿಂಗ್), ಬಿ.ಹೆಚ್. ಸುರೇಶ್, ಬಿ.ಅಶ್ವಥ್, ಅನಸೂಯ ಹೆಚ್.ಎ., ಚಂದ್ರಪ್ಪ, ಜಯಮ್ಮ, ಮುಖಂಡರಾದ ಪಿ.ಕೆ.ರಾಜಣ್ಣ, ವಸಂತ್ ಅರಕೆರೆ, ಬ್ಯಾಲಕೆರೆ ಮಂಜುನಾಥ್, ವೆಂಕಟೇಶ್ ಸೇರಿದಂತೆ ಇನ್ನಿತರರಿದ್ದರು.