ಮೌಢ್ಯಮುಕ್ತ ಸಮಾಜ ನಮ್ಮೆಲ್ಲರ ಗುರಿಯಾಗಬೇಕು : ನಟಿ ಉಮಾಶ್ರೀ

ರಾಜ್ಯ ಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನಕ್ಕೆ ಚಾಲನೆ :

ಬ್ಯಾಟರಾಯನಪುರ : ಮೌಢ್ಯಮುಕ್ತ ಸಮಾಜ ನಮ್ಮೆಲ್ಲರ ಗುರಿಯಾಗಬೇಕು ಎಂದು ರಂಗಭೂಮಿ ಕಲಾವಿದೆ, ಚಿತ್ರನಟಿ ಉಮಾಶ್ರೀ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ದೊಡ್ಡಬಳ್ಳಾಪುರ, ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆ, ಕರ್ನಾಟಕ ರಾಜ್ಯ ಖಾಸಗಿ ಶಾಲಾ ಕಾಲೇಜು ಗಳ ಒಕ್ಕೂಟ, ಕರ್ನಾಟಕ ರಾಜ್ಯ ಮಾನವ ಬಂಧುತ್ವ ವೇದಿಕೆ ಹಾಗೂ ಕರ್ನಾಟಕ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗಳ ಸಹಯೋಗದೊಂದಿಗೆ ಬಾಗಲೂರಿನ ವಿ.ಜೆ.ಇಂಟರ್ ನ್ಯಾಷನಲ್ ಶಾಲೆಯ ಆವರಣದಲ್ಲಿ ಏರ್ಪಡಿಸಿರುವ ಎರಡು ದಿನಗಳ  ರಾಜ್ಯ ಮಟ್ಟದ ‘4ನೇ ವೈಜ್ಞಾನಿಕ ಸಮ್ಮೇಳನ’ ವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ನಾವಿಂದು ಮಾನವಿಯ ಮೌಲ್ಯಗಳನ್ನು ದೂರ ಮಾಡಿಕೊಳ್ಳುತ್ತಿದ್ದೇವೆ. ಆದರ್ಶ ಗಳಿಂದ ಹೊರ ಬಂದಿದ್ದೇವೆ. ಗೌರವವಿಲ್ಲದೆ ಬದುಕಿನ ಹಾದಿಯಲ್ಲಿ ಸಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಅದರಲ್ಲೂ ಪ್ರತಿಯೊಬ್ಬರಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸುವ ಕೆಲಸ ಆಗಬೇಕು. ಹಿರಿಯರು, ಶಿಕ್ಷಕರು ಮಕ್ಕಳ ಬದುಕಿಗೆ ಆದರ್ಶವನ್ನು ತಿಳಿಸುವ ಮೂಲಕ ಕಂದಚಾರದ ಕಂದಕಕ್ಕೆ ಬೀಳದಂತೆ ನೋಡಿಕೊಳ್ಳ ಬೇಕಾಗಿದೆ. ಕುವೆಂಪು ಹೇಳಿದಂತೆ ಧರ್ಮ, ಜಾತಿಯಿಂದ ಹೊರಬಂದು ವಿಶ್ವಮಾನವತೆ ಯನ್ನು ಸಾರಬೇಕಾಗಿದೆ. ಇಂದಿಗೂ ಗ್ರಾಮೀಣ ಭಾಗದಲ್ಲಿ ಮೌಢ್ಯ ಕಂದಚಾರಗಳು ಬೇರೂರಿವೆ. ಅನೇಕ ಅನಿಷ್ಠ ಪದ್ದತಿಗಳನ್ನು ನಿರ್ಮೂಲನೆ ಮಾಡುವ ಕೆಲಸ ಆಗಬೇಕಾಗಿದೆ. ಬುದ್ದ, ಬಸವ, ಅಂಬೇಡ್ಕರರ ಆದರ್ಶಗಳನ್ನು ಪ್ರತಿಯೊಬ್ಬರು ಅನುಸರಿಸುವಂತಾ ಗಬೇಕು. ದುರ್ಬಲ ಮನಸ್ಸು ಗಳನ್ನು ವೈಜ್ಞಾನಿಕ ತಳಹದಿಯಲ್ಲಿ ಗಟ್ಟಿಗೊಳಿಸುವಂತಹ ಕಾರ್ಯ ಕ್ರಮಗಳನ್ನು ವೈಜ್ಞಾನಿಕ ಪರಿಷತ್ತಿ ನಿಂದ ನಡೆಸುತ್ತಿರುವುದು ಶ್ಲಾಘನಿಯ ಸಂಗತಿ ಎಂದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಮಾತನಾಡಿ ‘ಪರಿಷತ್ತಿನ ದ್ಯೇಯೋದ್ದೇಶಗಳನ್ನು ಜನ ಸಾಮಾನ್ಯರಲ್ಲಿ ತಿಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಈ ದಿಸೆಯಲ್ಲಿ ರಾಜ್ಯದ ಉದ್ದಗಲ ದಲ್ಲೂ ನಮ್ಮ ಸಂಸ್ಥೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಜನರಲ್ಲಿ ಮೂಢ ನಂಬಿಕೆಗಳ ಬದಲು ಮೂಲ ನಂಬಿಕೆಗಳು ಇರಬೇಕಾಗಿದೆ. ನಾವು ಎಂದಿಗೂ ಧರ್ಮದ ವಿರೋಧಿಗಳಲ್ಲ. ಆದರೆ ಧರ್ಮದ ಹೆಸರಿನಲ್ಲಿ ನಡೆಯುವ ಮೂಢನಂಬಿಕೆಗಳನ್ನು ಬಿಂಬಿಸುವ ವರ ವಿರೋಧಿಯಾಗಿದ್ದೇವೆ. ಪರಿಷತ್ತು ನಡೆಸುವ ಕಾರ್ಯಕ್ರಮ ಗಳು ವಿಶೇಷವಾಗಿ ಮಕ್ಕಳ ಕೇಂದ್ರಿತವಾಗಿದ್ದು, ಮುಂದಿನ ಜನಾಂಗ ದಾರಿ ತಪ್ಪದಂತೆ ನೋಡಿ ಕೊಳ್ಳುವ ಮಹತ್ತರವಾದ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ ಎಂದರು.

ಆಳಂದ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ ‘ಹುಲಿಕಲ್ ನಟರಾಜ್ ಅವರ ನೇತೃತ್ವದಲ್ಲಿ ವೈಜ್ಞಾನಿಕ ಪರಿಷತ್ತು ನಡೆಸುತ್ತಿರುವ ಇಂತಹ ಸಮ್ಮೇಳನಗಳು ಪ್ರಸ್ತುತ ಸಮಾಜಕ್ಕೆ ಅತ್ಯವಶ್ಯಕವಾಗಿದ್ದು, ರಾಜ್ಯದ ಉದ್ದಗಲಕ್ಕೂ ನಡೆಸುವಂತಾಗಬೇಕು. ಮನೆ ಮನಗಳಲ್ಲೂ ವಿಜ್ಞಾನದ ಅರಿವು ಮೂಡಿಸಬೇಕು. ಮೌಢ್ಯದ ಹೆಸರಿ ನಲ್ಲಿ ಕೆಲವರು ಮಕ್ಕಳು ಹಾಗೂ ಮಹಿಳೆಯರ ಮನಸ್ಸುಗಳನ್ನು ಹಾಳು ಮಾಡುತ್ತಿದ್ದಾರೆ, ಇಂತಹ ವಿಷಮ ಮನಸ್ಸುಗಳನ್ನು ತಡೆಯಲು ಇಂತಹ ಕಾರ್ಯಕ್ರಮ ಗಳ ಅಗತ್ಯವಿದೆ. ಪರಿಷತ್ತು ನಡೆಸುವ ಕಾರ್ಯಕ್ರಮಗಳಿಗೆ ಸರ್ಕಾರದ ವತಿಯಿಂದ ಎಲ್ಲಾ ರೀತಿಯಲ್ಲಿ ಸಹಕಾರ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಸರ್ಕಾರಕ್ಕೆ ಮಾಹಿತಿ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವೈಚಾರಿಕತೆ, ಶಿಕ್ಷಣ, ಸಾಹಿತ್ಯ, ಕೃಷಿ, ಸಮಾಜ ಸೇವೆ, ಸಂಘಟನೆ, ನೃತ್ಯ ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿರುವ ಹಲವರಿಗೆ ರಾಜ್ಯಮಟ್ಟದ ಜೀವಮಾನ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ವೈಜ್ಞಾನಿಕ ಚಿಂತನೆಗಳನ್ನು ಒಳಗೊಂಡ ‘ಜ್ಞಾನಸಿರಿ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ವೈಜ್ಞಾನಿಕ ಸಮ್ಮೇಳನದ ನಿಮಿತ್ತ ರಾಜ್ಯದ ವಿವಿಧ ಶಾಲೆಗಳು, ಡಿ.ಆರ್.ಡಿ.ಓ., ಇಸ್ರೋ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳಿಂದ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ವಿಶೇಷ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಬೆಂ.ನಗರ ಜಿಲ್ಲಾಧಿಕಾರಿ ಜಿ.ಜಗದೀಶ್, ಬಾಗಲೂರು ಗ್ರಾ.ಪಂ.ಅಧ್ಯಕ್ಷ ಎ.ಕೆಂಪೇಗೌಡ, ಉಪಾಧ್ಯಕ್ಷೆ ರಫಿಯಾ ಸುಲ್ತಾನ್, ಉಪ ನಿರ್ದೇಶಕರಾದ ಡಿ.ಹನುಮಂತ ರಾಯಪ್ಪ, ಬಿಇಓ ಡಿ.ಆರ್. ರಾಮಮೂರ್ತಿ, ಡಾ.ಉಷಾದೇವಿ, ಕೆ.ಜಿ.ರಾವ್, ಶಿವರಂಜನ್ ಸತ್ಯಂಪೇಟೆ, ಮುನಿವೆಂಕಟೇಗೌಡ, ಡಾ.ಶ್ರೀರಾಮಚಂದ್ರ, ಡಾ.ಚಿಕ್ಕಹನುಮಂತೇಗೌಡ, ರವಿ ಬಿಳಿಶಿವಾಲೆ, ಡಾ.ವಿ.ಸುರೇಶ್, ಡಾ.ಬೀರೇಗೌಡ, ವಿ.ಟಿ.ಸ್ವಾಮಿ, ತಾ.ಪಂ.ಮಾಜಿ ಅಧ್ಯಕ್ಷ ನಾಗರಾಜ್, ಮಾರೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ಪಿ.ರಾಹುಲ್‌, ಬಾಗಲೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಜಗನ್ನಾಥ್, ಗ್ರಾ.ಪಂ. ಸದಸ್ಯರಾದ ಪ್ರಭುಸ್ವಾಮಿ, ಸೈಯದ್ ಶಬ್ಬೀರ್, ಪಿಳ್ಳೇಗೌಡ, ಧನಂಜಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಇನ್ನಿತರರಿದ್ದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

Public power

R Hanumanthu

Kogilu layout Yelahanka

9845085793

Leave a Reply

Your email address will not be published. Required fields are marked *