ಹಬ್ಬಗಳ ಹಿಂದಿನ ವೈಜ್ಞಾನಿಕತೆ ತಿಳಿಯುವುದು ಅತ್ಯಗತ್ಯ: ಶ್ರೀಮತಿ ಪ್ರಮೀಳಾ ರಾಜೇಶ್
ಸಾಂಪ್ರದಾಯಿಕ ಹಬ್ಬಗಳ ಹಿಂದಿನ ವೈಜ್ಞಾನಿಕ ಕಾರಣಗಳನ್ನು ಮಕ್ಕಳಿಗೆ ಪರಿಚಯ ಮಾಡಿಕೊಡುವುದು ಅತ್ಯಗತ್ಯ ಎಂದು ಯಲಹಂಕದ ಆಕ್ಸ್ಫರ್ಡ್ ಆಂಗ್ಲಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ರಾಜೇಶ್ ಅವರು ಹೇಳಿದರು .ಅವರು ಸೋಮವಾರ
ಶಾಲೆಯಲ್ಲಿ ಆಚರಿಸಲಾದ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಮುಂದುವರೆದು ಪ್ರತಿಯೊಂದು ಹಬ್ಬದ ಹಿಂದೆ ಒಂದು ವೈಜ್ಞಾನಿಕ ಕಾರಣವಿರುತ್ತದೆ.
ಕಾಲಕ್ಕೆ ತಕ್ಕಂತೆ ಹಬ್ಬಗಳು,
ಹಬ್ಬಗಳಿಗೆ ಸಂಬಂಧಿಸಿದಂತೆ ವಿವಿಧ ಊಟ ಉಪಚಾರಗಳು, ಉಡುಗೆ ತೊಡುಗೆಗಳು ಆಟೋಟಗಳು , ತಿಂಡಿ ತಿನಿಸುಗಳು ಬದಲಾಗುತ್ತಾ ಹೋಗುತ್ತವೆ. ಇವುಗಳನ್ನು ಮಕ್ಕಳಿಗೆ ತಿಳಿಸಬೇಕು ಎಂದರು.
ಸಂಕ್ರಾಂತಿಯಂದು ಎಳ್ಳು ಬೆಲ್ಲ ಸವಿಯುವುದರ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಇದೆ. ಚಳಿಗಾಲದಲ್ಲಿ ದೇಹದ ಚರ್ಮದಲ್ಲಿ ತೇವಾಂಶದ ಕೊರೆತೆಯಿಂದ ಒಣಗಿರುತ್ತದೆ. ಹೀಗಾಗಿ ಎಳ್ಳು ನಮ್ಮ ಚರ್ಮಕ್ಕೆ ಉತ್ತಮವಾಗಿದೆ. ಇದೇ ಕಾರಣಕ್ಕೆ ಎಳ್ಳು ಸವಿಯುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಕ್ಕಳು ಸಾಂಪ್ರದಾಯಿಕ ತೊಡುಗೆಗಳನ್ನು ತೊಟ್ಟಿದ್ದು ಒಂದು ವಿಶೇಷವಾಗಿತ್ತು .ಈ ಸಂದರ್ಭದಲ್ಲಿ ಸಂಕ್ರಾಂತಿಯ ವಿಶೇಷ ತಿನಿಸುಗಳಾದ ಎಳ್ಳು ಬೆಲ್ಲ, ಅವರೆಕಾಯಿ, ಗೆಣಸು, ಏಲಚಿ, ಹಣ್ಣು ಕಬ್ಬು ಮುಂತಾದವನ್ನು ಎಲ್ಲ ಮಕ್ಕಳಿಗೂ ಹಂಚಲಾಯಿತು.
ಈ ಸಂದರ್ಭದಲ್ಲಿ ಮಕ್ಕಳು ಗಾಳಿಪಟಗಳನ್ನು ಹಾರಿಸಿದ್ದು ಒಂದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *