



ಬೆಟ್ಟಹಲಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ :
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ತಂಡದಿಂದ ಮತಯಚನೆ :
ಬ್ಯಾಟರಾಯನಪುರ : ಕ್ಷೇತ್ರದ ‘ಬೆಟ್ಟಹಲಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ’ದ ಚುನಾವಣೆ ಜ.18ಕ್ಕೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ತಂಡವು ಸಂಕ್ರಾಂತಿಯ ಶುಭದಿನವಾದ ಮಂಗಳವಾರ ಅದ್ದಿಗಾನಹಳ್ಳಿ ಸಮೀಪವಿರುವ ‘ಶ್ರೀ ಪಟಾಲಮ್ಮ ದೇವಿ’ ದೇವಾಲಯಕ್ಕೆ ತೆರಳಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತಿಯಿಂದ ನಮಿಸಿ ಮತಯಾಚನೆ ಕಾರ್ಯಕ್ಕೆ ಚಾಲನೆ ನೀಡಿದರು.
12 ಸದಸ್ಯರಿರುವ ಬೆಟ್ಟಹಲಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸಾಲಗಾರರ ಕ್ಷೇತ್ರದ ಅಭ್ಯರ್ಥಿಗಳಾಗಿ ನಾರಾಯಣಗೌಡ ಬಿ.ಎಸ್.(ಸಾಮಾನ್ಯ ಕ್ರ.ಸಂ.2), ಮುನಿವೆಂಕಟೇಗೌಡ ಎಸ್.ಎಚ್(ಸಾಮಾನ್ಯ ಕ್ರ.ಸಂ.5), ಮಂಜುನಾಥ್ ಬಿ.ಎನ್.(ಸಾಮಾನ್ಯ ಕ್ರ.ಸಂ.6), ಶಿವಕುಮಾರ್ ಟಿ.ಪಿ.(ಸಾಮಾನ್ಯ ಕ್ರ.ಸಂ.8), ಶ್ರೀನಿವಾಸ್ ಬಿ.ಎನ್.(ಸಾಮಾನ್ಯ ಕ್ರ.ಸಂ.9), ರಾಮಮೂರ್ತಿ ಎಂ.(ಸಾಲಗಾರರಲ್ಲದ ಕ್ಷೇತ್ರ, ಸಾಮಾನ್ಯ ಕ್ರ.ಸಂ.1) ಸ್ಪರ್ಧಾ ಕಣದಲ್ಲಿದ್ದಾರೆ. ಮಹಿಳಾ ಮೀಸಲು ಅಭ್ಯರ್ಥಿಗಳಾಗಿ ಕಾಮಾಕ್ಷಮ್ಮ(ಕ್ರ.ಸಂ.2), ಶಶಿಕಲಾ ದೇವನಾಥಗೌಡ(ಕ್ರ.ಸಂ.4) ಸ್ಪರ್ಧಿಗಳಾಗಿ ಕಣದಲ್ಲಿ ಇದ್ದಾರೆ. ಹಿಂದುಳಿದ ವರ್ಗ(ಎ) ಅಭ್ಯರ್ಥಿಯಾಗಿ ಶೈಲೇಂದ್ರ ಬಿ.ಎನ್.(ಕ್ರ.ಸಂ.2), ಹಿಂದುಳಿದ ವರ್ಗ(ಬಿ) ಅಭ್ಯರ್ಥಿಯಾಗಿ ನಾಗೇಶ್ ಬಿ.ಎನ್.(ಕ್ರ.ಸಂ.1) ಸ್ಪರ್ಧಸಿದ್ದಾರೆ. ಉಳಿದಂತೆ ಪರಿಶಿಷ್ಟ ಜಾತಿ(ಎಸ್.ಸಿ.)ಮೀಸಲು ಅಭ್ಯರ್ಥಿಯಾಗಿ ಅಕ್ಕಯ್ಯಮ್ಮ ತಿರುಮಳಪ್ಪ(ಕ್ರ.ಸಂ.1), ಪರಿಶಿಷ್ಟ ಪಂಗಡ(ಎಸ್.ಟಿ.)ಮೀಸಲು ಅಭ್ಯರ್ಥಿಯಾಗಿ ವೆಂಕಟೇಶ ಕೆ.(ಕ್ರ.ಸಂ.2) ಸ್ಪರ್ಧಾ ಕಣದಲ್ಲಿ ಇದ್ದಾರೆ.
ಮಂಗಳವಾರ ಶ್ರೀ ಪಟಾಲಮ್ಮ ದೇವಿಗೆ ಪೂಜೆ ಸಲ್ಲಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಟಿ.ದಾಸರಹಳ್ಳಿಯಿಂದ ಮತಯಾಚನೆ ಕಾರ್ಯಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಬೆಟ್ಟಹಲಸೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್, ಹಾಲಿ ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ಮುನೇಗೌಡ, ಟಿ.ಎಸ್.ನವೀನ್, ಅಮರ್, ನಾಗೇಶ್, ಶಿವಣ್ಣ, ಬಿ.ಎನ್.ಗೋವಿಂದರಾಜು, ಬಿ.ಎನ್.ಆನಂದ್, ಶಿವಣ್ಣ, ವೇಣುಗೋಪಾಲ್, ಜಗದೀಶ್, ದೊಡ್ಡಣ್ಣ, ಪಾಟೀಲ್, ಕೆಂಪರಾಜು, ದೇವನಾಥಗೌಡ, ಗೋವರ್ಧನ್, ರಾಜಗೋಪಾಲ್, ಮೈಲಾರಪ್ಪ, ನಂಜೇಮರಿಯಣ್ಣ, ಬಾಲರಾಜ್, ರಾಜಣ್ಣ, ಆನಂದ್, ಬಿ.ಎಂ.ಮುನಿವೆಂಕಟಪ್ಪ, ಸಂಜಯ್, ಚಂದ್ರಕಾಂತ್, ಚಂದ್ರಮೂರ್ತಿ, ಅಶ್ವಥ್, ಶಶಿ, ಮನೋಜ್, ನಾಗೇಶ್, ವೆಂಕಟರಮಣ, ಪ್ರವೀಣ್, ಸುಬ್ರಮಣಿ,ಶ್ಯಾಮಣ್ಣ, ವಿಶ್ವ ಸೇರಿದಂತೆ ಗ್ರಾಮಗಳ ಮುಖಂಡರಿದ್ದರು.