ದಿನಾಂಕ 15, 1 – 2025ರ ಬುಧವಾರ ಸಂಜೆ 5.30 ಗಂಟೆಗೆ ರವೀಂದ್ರ ಕಲಾಕ್ಷೇತ್ರದ ವಿಶ್ರಾಂತಿ ಗೃಹದ ವೇದಿಕೆಯಲ್ಲಿ ಡಾ. ಎಂ ಪುಟ್ಟರಾಜುರವರ ವಿಶ್ವಮಾನದ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ ವಿಶ್ವಮಾನವ ಕುವೆಂಪುಪ್ರಶಸ್ತಿ 2025 ರಂದ ಪುರಸ್ಕಾರದ ಸಂಧರ್ಭದಲ್ಲಿಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಹಾಗೂಕನ್ನಡ ಸಂಘದ ಸಂಚಾಲಕರಾದ ಶ್ರೀಗಿರೀಶ್ ಪಿ ಹೆಚ್ ಅವರು ಕನ್ನಡ ನಾಡುನುಡಿಗೆ ಸಲ್ಲಿಸಿದ ಸೇವೆಗಾಗಿ ಅವರಿಗೆ ಪ್ರತಿಷ್ಠಿತ ಕುವೆಂಪು ವಿಶ್ವಮಾನವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.. ಪ್ರಾಂಶುಪಾಲರಾದ ಡಾ. ಶೀಲಾ ದೇವಿ ಎಸ್ ಮಳಿಮಠರವರು ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಕುವೆಂಪು ವಿಶ್ವಮಾನವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಶ್ರೀನಲ್ಲೂರು ಪ್ರಸಾದ ಶ್ರೀಬೈರಮಂಗಲ ರಾಮೇಗೌಡ… ಶ್ರೀ ಶಾಂತರಾಜು.. ಡಾ. ನಂದಾ… ಡಾ. ರಾಧಾ ಎಸ್ ಆರ್ ಶ್ರೀಮತಿ ಮಧುಮಾಲಿನಿ ಉಪಸ್ಥಿತರಿದ್ದರು. ಕುವೆಂಪುರವರ ಕವನಗಳ ಭಾವಗೀತೆ ನೃತ್ಯ ರೂಪಕಗಳು ಕಣ್ಮನ ಸೆಳೆದವು ಸಮಾರಂಭದ ವಿಶೇಷತೆ ಎಂದರೆ ಎಲ್ಲಾ ಗಣ್ಯರೂ ಕನ್ನಡ ಉಪನ್ಯಾಸಕರಾಗಿದ್ದು ಕನ್ನಡ ಸಾಹಿತ್ಯ ಸಂಸ್ಕೃತಿಗೆ ಸೇವೆ ಸಲ್ಲಿಸುತ್ತಿರುವ ಕನ್ನಡಗರಾಗಿದ್ದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *