



ಅರಕೆರೆ ಗ್ರಾ.ಪಂ.ಉಪಾಧ್ಯಕ್ಷರಾಗಿ ಎಸ್.ಮಂಜುನಾಥ್ ಅವಿರೋಧ ಆಯ್ಕೆ :
ಯಲಹಂಕ : ಕ್ಷೇತ್ರದ ಅರಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಸುರಧೇನುಪುರ ಗ್ರಾಮದ ಎಸ್.ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾ.ಪಂ.ಉಪಾಧ್ಯಕ್ಷರಾಗಿದ್ದ ಕೆ.ಎಂ.ಅರಸೇಗೌಡ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕಾಗಿ ನಡೆದ ಚುನಾವಣೆ ಯಲ್ಲಿ ಎಸ್.ಮಂಜುನಾಥ್ ಸರ್ವಸದಸ್ಯರ ಬೆಂಬಲದೊಂದಿಗೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ನೂತನ ಉಪಾಧ್ಯಕ್ಷ ಎಸ್.ಮಂಜುನಾಥ್ ಅವರನ್ನು ಶಾಸಕ ಎಸ್ ಆರ್ ವಿಶ್ವನಾಥ್ ಅವರು ಸನ್ಮಾನಿಸಿ ಆಭಿನಂದಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಡಿ.ಜಿ.ಅಪ್ಪಯ್ಯಣ್ಣ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಹೆಸರಘಟ್ಟ ಹೋಬಳಿ ಬಿಜೆಪಿ ಅಧ್ಯಕ್ಷ ವಸಂತ್ ಅರಕೆರೆ, ಆರ್ ಎಸ್ ಎಸ್ ಎನ್ ಬ್ಯಾಂಕ್ ನಿರ್ದೇಶಕ ಈಶ್ವರಾಚಾರ್, ಗ್ರಾ.ಪಂ.ಅಧ್ಯಕ್ಷೆ ಆಂಜಿನಮ್ಮ ಚೌಡಯ್ಯ, ಮಾಜಿ ಅಧ್ಯಕ್ಷರಾದ ಕೆ.ಆರ್.ತಿಮ್ಮೇಗೌಡ, ಶಶಿಕುಮಾರ್ ಬಿ.ಸಿ., ಲಕ್ಷ್ಮಿನಾರಾಯಣಗೌಡ, ಮುನಿಲಕ್ಷ್ಮಮ್ಮ ಪರಶುರಾಮ್, ಮಾಜಿ ಉಪಾಧ್ಯಕ್ಷ ಕೆ.ಎಂ.ಅರಸೇಗೌಡ, ನೇತ್ರಾವತಿ ಅಂಬರೀಶ್ ಬಾಬು, ಶಿಲ್ಪಾರಾಜಣ್ಣ, ಪದ್ಮ ಮುನಿಕೃಷ್ಣಪ್ಪ, ಗ್ರಾ.ಪಂ.ಸದಸ್ಯರಾದ ಇ.ಪವನ್ ಕುಮಾರ್, ಭಾಗ್ಯಮ್ಮ ಈಶ್ವರಾಚಾರ್, ಮುನಿಲಕ್ಷ್ಮಮ್ಮ, ಮಂಜುಳಾ ಅರಸೇಗೌಡ, ಮಂಜುಳಾ ಜಿ.ಸುರೇಶ್, ರಾಮಯಲ್ಲಪ್ಪ, ಚನ್ನಪ್ಪ, ಶಾಂತಮ್ಮ ಭರತ್, ಗಾಯತ್ರಿ, ಚಿಕ್ಕ.ಮುನಿಯಪ್ಪ, ಮುನಿಲಕ್ಷ್ಮಮ್ಮ, ಪ್ರಕಾಶ್, ಲಕ್ಷ್ಮಣ್, ಸೇರಿದಂತೆ ಇನ್ನಿತರರಿದ್ದು, ನೂತನ ಉಪಾಧ್ಯಕ್ಷರಿಗೆ ಅಭಿನಂದಿಸಿ ಶುಭ ಹಾರೈಸಿದರು.