ಬಾಗಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣಾ ಫಲಿತಾಂಶ :

ಗೆದ್ದು ಬೀಗಿದ 11 ನೂತನ ಸದಸ್ಯರು :

ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಬಾಗಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಸದಸ್ಯರ ಆಯ್ಕೆಗಾಗಿ ಶನಿವಾರ ನಡೆದ ಚುನಾವಣೆಯಲ್ಲಿ 11 ಜನ ನೂತನ ಸದಸ್ಯರಾಗಿ ಸಹಕಾರ ಸಂಘಕ್ಕೆ ಆಯ್ಕೆಯಾದರು.

ಸಾಮಾನ್ಯ ಕ್ಷೇತ್ರದಿಂದ ಪ್ರಕಾಶ್ ಎನ್., ಎಸ್.ಯಶವಂತ್, ಸಿ.ಶಿವಣ್ಣ, ಬಿ.ಎಸ್.ಹರ್ಷ, ಬಿ.ಆರ್.ಹನುಮಂತಗೌಡ ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮಹಿಳಾ ಮೀಸಲು ಸ್ಥಾನಕ್ಕೆ ಎಚ್.ಕೆ.ನಾಗರತ್ನ ಜಗನ್ನಾಥ್, ಆನಂದಮ್ಮ ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪ.ಜಾತಿ ಮೀಸಲು ಸ್ಥಾನಕ್ಕೆ ಎ.ವೆಂಕಟರಾಜು ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ‘ಎ’ ಸ್ಥಾನಕ್ಕೆ ಮಝರ್ ಸಾಬ್, ಹಿಂದುಳಿದ ವರ್ಗ ‘ಬಿ.ಸ್ಥಾನಕ್ಕೆ ಬಿ.ಸಿ.ಶಿವಪ್ರಕಾಶ್ ನೂತನ ಸದಸ್ಯರಾಗಿ ಆಯ್ಕೆಯಾದರು. ಉಳಿದಂತೆ ಸಾಲಗಾರರಲ್ಲದ ಕ್ಷೇತ್ರದಿಂದ ನವೀನ್ ಕುಮಾರ್ ಬಿ.ಎನ್.ನೂತನ ಸದಸ್ಯರಾಗಿ ಆಯ್ಕೆಯಾದರು.

ನೂತನ ಸದಸ್ಯರನ್ನು ಗ್ರಾಮಸ್ಥರು ಹಾಗೂ ಹಲವು ಮುಖಂಡರು ಸನ್ಮಾನಿಸಿ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಎ.ಕೆಂಪೇಗೌಡ, ಗ್ರಾ.ಪಂ.ಸದಸ್ಯರಾದ ಬಿ.ಎಸ್.ಅನಿಲ್ ಕುಮಾರ್, ಸುಧೀಂದ್ರ, ಶಬ್ಬೀರ್, ನಾಗರಾಜ್, ಧನಂಜಯ, ಪ್ರಭುಸ್ವಾಮಿ, ಮುಖಂಡರಾದ ಕೊಯಿರಾ ಮೂರ್ತಿ, ಮಂಜುನಾಥ್, ಪಿಳ್ಳೇಗೌಡ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *