



ಕಾಂಗ್ರೆಸ್ ಬೆಂಬಲಿತ 11 ಅಭ್ಯರ್ಥಿಗಳ ತಂಡಕ್ಕೆ ಭರ್ಜರಿ ಗೆಲುವು :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಸದಸ್ಯರ ಆಯ್ಕೆಗಾಗಿ ಭಾನುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 11 ಅಭ್ಯರ್ಥಿಗಳ ತಂಡ ಭರ್ಜರಿ ಗೆಲುವು ದಾಖಲಿಸುವ ಮೂಲಕ ಹೊಸದೊಂದು ಮೈಲಿಗಲ್ಲು ಮೂಡಿಸಿದೆ.
ಸಾಲಗಾರರ ಕ್ಷೇತ್ರದ ಸಾಮಾನ್ಯ ಸ್ಥಾನದಿಂದ ಎಂ.ಆಂಜಿನಪ್ಪ, ಸಿ.ಎನ್ ತಿಮ್ಮೇಗೌಡ, ಎಂ.ರಾಮಯ್ಯ, ಎನ್.ವಿಜಯಕುಮಾರ್, ಜಿ.ಶಿವಕುಮಾರ್ ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಮಹಿಳಾ ಮೀಸಲು ಸ್ಥಾನಕ್ಕೆ ಉಷಾ ಎ. ಮತ್ತು ಮುನಿರತ್ನಮ್ಮ ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪ.ಜಾತಿ ಮೀಸಲು ಸ್ಥಾನಕ್ಕೆ ಡಿ.ನಾರಾಯಣಸ್ವಾಮಿ ಮತ್ತು ಪ.ಪಂಗಡ ಮೀಸಲು ಸ್ಥಾನಕ್ಕೆ ಎ.ಸಿ.ಗೋವಿಂದರಾಜು ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಪ್ರವರ್ಗ ‘ಎ’ ಸ್ಥಾನಕ್ಕೆ ಬಿ.ಎಲ್.ಮಂಜುನಾಥ್ ಪ್ರವರ್ಗ ‘ಬಿ’ ಸ್ಥಾನಕ್ಕೆ ರವಿಕುಮಾರ್ ನೂತನ ಸದಸ್ಯರಾಗಿ ಆಯ್ಕೆಯಾದರು.
ಉಳಿದಂತೆ ಕೋರ್ಟ್ ಮೊರೆ ಹೋಗಿರುವ ಕಾರಣದಿಂದಾಗಿ ಸಾಲಗಾರರಲ್ಲದ ಕ್ಷೇತ್ರದ ಅಭ್ಯರ್ಥಿಗಳ ಫಲಿತಾಂಶವನ್ನು ನ್ಯಾಯಾಲಯದ ಆದೇಶ ಬರುವವರೆಗೂ ತಡೆ ಹಿಡಿಯಲಾಗಿದೆ.
ನೂತನ ಸದಸ್ಯರನ್ನು ಹಲವು ಕಾಂಗ್ರೆಸ್ ಮುಖಂಡರು ಮತ್ತು ಗ್ರಾಮಸ್ಥರು ಸನ್ಮಾನಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಜಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್, ತಾ.ಪಂ.ಮಾಜಿ ಸದಸ್ಯ ಎಸ್.ಉದಯಶಂಕರ್, ದೊಡ್ಡಜಾಲ ಗ್ರಾ.ಪಂ.ಅಧ್ಯಕ್ಷ ಆರ್.ಬೈರೇಗೌಡ, ಮೀನುಕುಂಟೆ ಗ್ರಾ.ಪಂ.ಅಧ್ಯಕ್ಷ ವಸಂತ್, ಕಾಂಗ್ರೆಸ್ ಮುಖಂಡರಾದ ಜೈಕುಮಾರ್, ಚನ್ನಹಳ್ಳಿ ಚಂದ್ರಣ್ಣ, ಸಿ.ಎ.ಶಿವರಾಜ್, ಶೆಟ್ಟಿಗೆರೆ ಚೇತನ್ ಕುಮಾರ್, ಮೈಲನಹಳ್ಳಿ ರಾಜಕುಮಾರ್, ಟಿ.ಪಿ.ಸತೀಶ್, ಟಿ.ಪಿ.ಗೋವಿಂದರಾಜು ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರಿದ್ದರು.