









ಮಹಾತ್ಮರ ತತ್ವಾದರ್ಶಗಳು ದಾರಿದೀಪವಿದ್ದಂತೆ : ಎಸ್ ಆರ್ ವಿಶ್ವನಾಥ್
ವೇಮನ ಜಯಂತಿ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ :
ಯಲಹಂಕ : ಮಹಾತ್ಮರು, ಯೋಗಿಗಳು, ಪುಣ್ಯಪುರುಷರು ಸಾರಿರುವ ತತ್ವಾದರ್ಶಗಳು ದಾರಿದೀಪವಿದ್ದಂತೆ, ಅವುಗಳ ಅನುಸರಣೆಯಿಂದ ನಮ್ಮ ಬದುಕು ಬಂಗಾರವಾಗುತ್ತದೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಅಭಿಪ್ರಾಯಪಟ್ಟರು.
ಶ್ರೀ ಮಹಾಯೋಗಿ ವೇಮನರ 613ನೇ ಜಯಂತ್ಯೋತ್ಸವದ ಪ್ರಯುಕ್ತ ‘ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿ ಸಂಘ’, ರೆಡ್ಡಿ ಜನಸಂಘ’ ಬೆಂಗಳೂರು ಉತ್ತರ ವಲಯ ಮತ್ತು ರೆಡ್ ಕ್ರಾಸ್ ಸಂಸ್ಥೆ, ಬೆಂಗಳೂರು ಇವರ ಸಹಯೋಗ ದೊಂದಿಗೆ ಯಲಹಂಕ ಉಪನಗರದಲ್ಲಿ ಏರ್ಪಡಿಸಿದ್ದ ‘ಬೃಹತ್ ರಕ್ತದಾನ ಶಿಬಿರ’ ಉದ್ಘಾಟಿಸಿ ಮಾತನಾಡಿದ ಅವರು ಮಹಾಯೋಗಿ ವೇಮನರು ದೇಶಕಂಡ ಅಪ್ರತಿಮ ಪುಣ್ಯಪುರುಷರಲ್ಲಿ ಒಬ್ಬರಾಗಿದ್ದು, ಅವರು ಸಾರಿರುವ ತತ್ವಾದರ್ಶಗಳು, ಸತ್ ಸಂದೇಶಗಳು ಜಾತಿ ಮತ್ತು ಧರ್ಮಾತೀತವಾಗಿ ಎಲ್ಲರೂ ಅನುಸರಣೆ ಮಾಡುವಂತಹ ಅದರ್ಶ ಬದುಕಿನ ಮಾರ್ಗಗಳಾಗಿವೆ. ಇಂತಹ ಮಹಾಯೋಗಿಯ ಜಂಯತಿಯನ್ನು ರಕ್ತದಾನ ಶಿಬಿರದಂತಹ ಇನ್ನೊಬ್ಬರ ಬದುಕಿಗೆ ಬೆಳಕಾ ಗುವ ಸೇವಾ ಕಾರ್ಯದ ಮೂಲಕ ಅರ್ಥಪೂರ್ಣ ವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ವೇಮನ ಜಯಂತಿಯ ಈ ಮಹತ್ವದ ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆಯಿಂದ ಸಂಜೆಯವರೆಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ, ಗಣ್ಯರಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಂಜೆಯವರೆಗೂ ನಡೆದ ರಕ್ತದಾನ ಶಿಬಿರದಲ್ಲಿ ಸಂಗ್ರಹವಾದ 480 ಯುನಿಟ್ ಗಳಷ್ಟು ರಕ್ತವನ್ನು ರೆಡ್ ಕ್ರಾಸ್ ಸಂಸ್ಥೆಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಚಿತ್ರನಟ ಶೋಭರಾಜ್, ಬಿಜೆಪಿ ಹಿರಿಯ ಮುಖಂಡರಾದ ದಿಬ್ಬೂರು ಜಯಣ್ಣ, ಆವಲಹಳ್ಳಿ ಕೇಶವಮೂರ್ತಿ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಹೆಸರಘಟ್ಟ ಹೋಬಳಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಪ್ರಶಾಂತ್ ರೆಡ್ಡಿ, ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಂ.ಮುನಿರೆಡ್ಡಿ, ಉಪಾಧ್ಯಕ್ಷ ಎಸ್ ಎನ್ ಸಂಪತ್ ಕುಮಾರ್, ನಿರ್ದೇಶಕರಾದ ಇಟಗಲ್ ಪುರ ಎಂ.ಮೋಹನ್ ಕುಮಾರ್,ಎಸ್.ಜಿ.ನರಸಿಂಹಮೂರ್ತಿ (ಎಸ್.ಟಿ.ಡಿ. ಮೂರ್ತಿ), ಸಿ.ಆರ್.ಜಯಪ್ಪರೆಡ್ಡಿ, ಸಿ.ಶ್ರೀನಿವಾಸ್, ಎಚ್.ರಾಜಣ್ಣ, ಅರುಣ ಪ್ರಕಾಶ್, ಕೆ.ಜಿ.ರಾಮಕೃಷ್ಣಯ್ಯ, ಜಿ.ನರಸಿಂಹಮೂರ್ತಿ,ಟಿ.ಎನ್.ಶ್ರೀನಿವಾಸ್, ಮುಖಂಡರಾದ ಪುರುಷೋತ್ತಮರೆಡ್ಡಿ, ಬಿಜೆಪಿ ಯುವ ಮುಖಂಡರಾದ ಎಚ್.ಎಸ್.ಕಿರಣ್, ಸಾದೇನಹಳ್ಳಿ ಪ್ರಕಾಶ್ ಗೌಡ,ಸಿಇಓ ನಾಗೇಶ್ ಟಿ.ಆರ್ ಸೇರಿದಂತೆ ಸಹಕಾರಿ ಸಂಘದ ಕಚೇರಿ ಸಿಬ್ಬಂದಿಗಳಿದ್ದರು.