ಯಶಸ್ವಿಯಾಗಿ ಸಂಪನ್ನಗೊಂಡ ಸರಳ ಯೋಗ ಶಿಬಿರ : 

ಯಲಹಂಕ : ಶ್ರೀ ಕಣ್ವಮಠ ಆಡಳಿತ ಮಂಡಳಿ ಟ್ರಸ್ಟ್, ಯಲಹಂಕ ವತಿಯಿಂದ ಆಯೋಜಿಸಿದ್ದ 45 ದಿನಗಳ ಸರಳ ಯೋಗ ಶಿಬಿರ ಭಾನುವಾರ ಯಶಸ್ವಿಯಾಗಿ ಸಂಪನ್ನಗೊಂಡಿತು.

ಸರಳ ಯೋಗ ಶಿಬಿರದ ಸಮಾರೋಪ ಸಮಾರಂಭವನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಕೆ.ಎಸ್. ರವೀಂದ್ರನಾಥ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ‘ಯೋಗಾಭ್ಯಾಸ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು  ಅತ್ಯಂತ ಪರಿಣಾಮಕಾರಿ ವ್ಯಾಯಾಮ ಪ್ರಾಕಾರ ವಾಗಿದ್ದು, ಜೊತೆಗೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡರೆ ಉತ್ತಮ ಆರೋಗ್ಯವನ್ನು ನಮ್ಮದಾಗಿಸಿ ಕೊಳ್ಳಬಹುದಾಗಿದೆ ಎಂದರು.

ಈ ಸರಳ ಯೋಗಾಭ್ಯಾಸ ಶಿಬಿರದ ಮುಖ್ಯ ಸಂಚಾಲಕರಾಗಿರುವ ಡಾ.ವೈ.ವಿ.ನಾಗರಾಜ್ ಅವರು ವೃತ್ತಿಯಿಂದ ವೈದ್ಯರಾಗಿರುವುದರಿಂದ ಅವರು ಕಲಿಸುವ ಯೋಗಾಭ್ಯಾಸದ ಆಸನಗಳು ಉತ್ತಮ ಆರೋಗ್ಯ ಸಂರಕ್ಷಣೆಗೆ ಅತ್ಯಂತ ಪರಿಣಾಮಕಾರಿ ಯಾಗಿರುತ್ತವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಣ್ವ ಮಠ ಆಡಳಿತ ಮಂಡಳಿ ಟ್ರಸ್ಟ್ ನ ಕಾರ್ಯದರ್ಶಿ, ಶಿಬಿರದ ರುವಾರಿ ಡಾ.ವೈ.ವಿ.ನಾಗರಾಜ್ ಮಾತನಾಡಿ ‘ಯೋಗಾಭ್ಯಾಸ ಆರಂಭದಿಂದ ಇಂದಿನ ವರೆಗೂ ಸಾಗಿ ಬಂದಿರುವ ಹಾದಿ, ಯೋಗವನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡುವಲ್ಲಿ ಶ್ರಮಿಸಿರುವ ಮಹನೀಯರ ಕೊಡುಗೆಯನ್ನು ಸ್ಮರಿಸಿದರು.

ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಕಣ್ವ ಮಠದ ಪೀಠಾಧ್ಯಿಪತಿಗಳಾದ ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥ ಸ್ವಾಮೀಜಿ ವಹಿಸಿದ್ದು, ಕಾರ್ಯಕ್ರಮದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿಕಟ ಪೂರ್ವ ಪ್ರಾಧ್ಯಾಪಕರಾದ ಡಾ.ಶಿವಸ್ವಾಮಿ ಸೋಸಲೆ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರಮೂರ್ತಿ, ಅಡ್ವಕೇಟ್ ಜನರಲ್ ಮಲ್ಜಾರ್  ರಾವ್,  ಸಿರಿ ಗನ್ನಡ ಉಮೇಶ್, ಅಕೌಂಟೆಂಟ್ ಜನರಲ್ ಕಚೇರಿಯ ನಿವೃತ್ತ ಅಧಿಕಾರಿ ಮರಿಲಿಂಗಯ್ಯ, ಜಯದೇವ ಹೃದ್ರೋಗ ಸಂಸ್ಥೆಯ ಸಹಪ್ರಾಧ್ಯಾಪಕ ಡಾ.ಸಾತ್ವಿಕ್ ರಾಜ್, ಶ್ರೀ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಪ್ರಾಶುಪಾಲರಾದ ಎ.ಡಿ.ಪವನ್ ಕುಮಾರ್, ರಾಜ್ಯ ಉಚ್ಛ ನ್ಯಾಯಾಲಯದ ವಕೀಲರು, ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಕಾನೂನು ಸಲಹೆಗಾರರಾದ ಅಂಜನ್ ಕುಮಾರ್, ಕಣ್ವ ಟ್ರಸ್ಟ್ ನ ಅಧ್ಯಕ್ಷ ವೈ.ಎನ್.ಗುರುರಾಜ ರಾವ್,  ತಾಲ್ಲೂಕು ಬ್ರಾಹ್ಮಣ ಸಂಘದ ಕಾರ್ಯದರ್ಶಿ ಭೀಮಸೇನಾಚಾರ್ ಹಾಗೂ ಶಿಬಿರಾರ್ಥಿಗಳಿದ್ದರು.

Leave a Reply

Your email address will not be published. Required fields are marked *