ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ಚುನಾವಣೆ :

ಡಾ. ವಾಣಿಶ್ರೀ ವಿಶ್ವನಾಥ್ ನೇತೃತ್ವದ 12 ಅಭ್ಯರ್ಥಿಗಳ ತಂಡ ಅವಿರೋಧವಾಗಿ ಆಯ್ಕೆ :

ಯಲಹಂಕ : ಕ್ಷೇತ್ರದ ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ 2025-30ರ ಅವಧಿಗೆ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಸಹಕಾರ ಸಂಘದ ಹಾಲಿ ಅಧ್ಯಕ್ಷರಾದ ಡಾ.ವಾಣಿಶ್ರೀ ವಿಶ್ವನಾಥ್ ಅವರ ನೇತೃತ್ವದ 12 ಜನ ಅಭ್ಯರ್ಥಿಗಳ ಹಾಲಿ ನಿರ್ದೇಶಕರ ತಂಡ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸತತ ಐದನೆಯ ಬಾರಿಗೆ ಸಹಕಾರ ಸಂಘವು ಬಿಜೆಪಿ ತೆಕ್ಕೆಗೆ ಜಾರಿದೆ.

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ರವರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಸಹಕಾರ ಸಂಘದ ಚುನಾವಣೆಗೆ ಹಾಲಿ ನಿರ್ದೇಶಕರಾಗಿದ್ದ 12 ಜನ ಅಭ್ಯರ್ಥಿಗಳು ಡಾ.ವಾಣಿಶ್ರೀ ವಿಶ್ವನಾಥ್ ಅವರ ನೇತೃತ್ವದಲ್ಲಿ ಚುನಾವಣಾ ಕಣದಲ್ಲಿದ್ದರು. ಆದರೆ ಇವರಿಗೆ ಪ್ರತಿಸ್ಪರ್ಧಿಯಾಗಿ ಯಾರೂ ಸಹ ಸ್ಪರ್ಧಿಸದ ಕಾರಣದಿಂದಾಗಿ ಡಾ.ವಾಣಿಶ್ರೀ ವಿಶ್ವನಾಥ್ ಅವರ ನೇತೃತ್ವದ ಎಲ್ಲಾ 12 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸಹಕಾರ ಸಂಘದ ಚುನಾವಣಾ ಇತಿಹಾಸದಲ್ಲಿ ಹೊಸದೊಂದು ಮೈಲುಗಲ್ಲು ಸಾಧಿಸಿದ್ದಾರೆ.

ನೂತನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದವರ ವಿವರ :

ಆವಲಹಳ್ಳಿಯ ಎ.ತಿಮ್ಮರಾಯಿಗೌಡ(ಸಾಮಾನ್ಯ), ಕೋಗಿಲು ಗ್ರಾಮದ ಕೆ.ಆರ್.ಪುಟ್ಟರಾಜು(ಸಾಮಾನ್ಯ), ಅದ್ದೆವಿಶ್ವನಾಥಪುರದ ಎಂ.ಮಂಜುನಾಥ್(ಸಾಮಾನ್ಯ), ನಾಗೇನಹಳ್ಳಿಯ ಎನ್.ಶಿವಕುಮಾರ್(ಸಾಮಾನ್ಯ), ಮಾರಸಂದ್ರ ಗ್ರಾಮದ ಎಂ.ಪಿ.ಈಶ್ವರಾಚಾರ್(ಸಾಮಾನ್ಯ), ಸಿಂಗನಾಯಕನಹಳ್ಳಿ ಗ್ರಾಮದ ಎಸ್ ಎನ್ ರಾಮಚಂದ್ರರೆಡ್ಡಿ (ಸಾಮಾನ್ಯ). ಸಹಕಾರ ಸಂಘದ ಹಾಲಿ ಅಧ್ಯಕ್ಷರಾದ ಡಾ.ವಾಣಿಶ್ರೀ ವಿಶ್ವನಾಥ್(ಮಹಿಳಾ ಮೀಸಲು),, ದೊಡ್ಡಬೆಟ್ಟಹಳ್ಳಿಯ ಪುಷ್ಪಲತ ಚಂದ್ರಶೇಖರ್(ಮಹಿಳಾ ಮೀಸಲು), ಯಲಹಂಕದ ಎನ್.ಮುನಿಯಪ್ಪ ಕೂರ್ಲಪ್ಪ (ಹಿಂದುಳಿದ ವರ್ಗ ‘ಎ’), ಯಲಹಂಕದ ವೈ.ಕೆ.ಮುರಾರಿ ರಾಮು(ಹಿಂದುಳಿದ ವರ್ಗ ‘ಬಿ’), ನಾಗದಾಸನಹಳ್ಳಿಯ ಎನ್.ಎ.ಚಂದ್ರು(ಪ.ಜಾ.ಮೀಸಲು), ಯಲಹಂಕದ ಅಮರಾವತಿ (ಪ.ಪಂ.ಮೀಸಲು) ಹಾಲಿ ನಿರ್ದೇಶಕರಾಗಿದ್ದ ಈ 12 ಜನ ಅಭ್ಯರ್ಥಿಗಳ ತಂಡ ಸಹಕಾರ ಸಂಘದ ನೂತನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *