ಮಹಾ ಶಿವರಾತ್ರಿ ಪ್ರಯುಕ್ತ ಶಿವ ಜ್ಯೋತಿರ್ಲಿಂಗ ದರ್ಶನ :

ಮಾರುತಿನಗರ ಬ್ರಹ್ಮಕುಮಾರಿ ಸೇವಾಶ್ರಮದ ವತಿಯಿಂದ ಆಯೋಜನೆ :

ಯಲಹಂಕ : ಮಹಾ ಶಿವರಾತ್ರಿ ಪ್ರಯುಕ್ತ ಯಲಹಂಕದ ಮಾರುತಿನಗರ ಬ್ರಹ್ಮಕುಮಾರಿ ಸೇವಾಶ್ರಮದ ವತಿಯಿಂದ ಆಯೋಜಿಸಿದ್ದ ಶಿವಜ್ಯೋತಿರ್ಲಿಂಗ ದರ್ಶನ ದೈವ ಕಾರ್ಯದಲ್ಲಿ ಯಲಹಂಕ ಮತ್ತು ಸುತ್ತಮುತ್ತಲಿನ ಸಹಸ್ರಾರು ಭಕ್ತರು ಪಾಲ್ಗೊಂಡು ಶಿವನ ಕೃಪೆಗೆ ಪಾತ್ರರಾದರು.

ಶಿವಜ್ಯೋತಿರ್ಲಿಂಗ ದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಯಲಹಂಕ ಉಪನಗರದ ಬ್ರಹ್ಮಕುಮಾರಿ ಸಮೂಹ ಸೇವಾ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ವಿಜಯಲಕ್ಷ್ಮಿ ಸಹೋದರಿ, ಮಾರುತಿನಗರ ಬ್ರಹ್ಮಕುಮಾರಿ ಸೇವಾ ಕೇಂದ್ರದ ಸಂಚಾಲಕರಾದ ಬಿ.ಕೆ.ಕಲಾವತಿ ಸಹೋದರಿ, ಇಂಧನ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ರಘುನಂದನ್, ಆ್ಯಕ್ಸಿಸ್ ಬ್ಯಾಂಕ್ ನ ನಿವೃತ್ತ ಸಿಇಓ ಕೃಷ್ಣ, ನಿವೃತ್ತ ಕಂದಾಯ ಅಧಿಕಾರಿ ಹನುಮಂತರಾವ್, ಶ್ರೀ ಕಣ್ವ ಮಠ ಟ್ರಸ್ಟ್ ನ ಕಾರ್ಯದರ್ಶಿ ಡಾ.ವೈ.ವಿ.ನಾಗರಾಜ್, ನಿವೃತ್ತ ಅಧಿಕಾರಿ ಎಲ್.ಎನ್.ಚೌದರಿ, ಉದ್ಯಮಿ ಪುರುಷೋತ್ತಮ್ ಸೇರಿದಂತೆ ಇನ್ನಿತರ ಗಣ್ಯರಿದ್ದರು.

ಶಿವಜ್ಯೋತಿರ್ಲಿಂಗ ದರ್ಶನದ ಈ ದೈವ ಕಾರ್ಯಕ್ರಮದಲ್ಲಿ ಮಹಾ ಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯ ಕುರಿತ ಸಾಕ್ಷ್ಯಚಿತ್ರ ಪ್ರಸಾರ, ಪ್ರಸಾದ ವಿನಿಯೋಗ, ಶಿವರಾತ್ರಿಯ ನಂತರದ ದಿನದಿಂದ ಆಯೋಜಿಸಲಾಗಿರುವ 3 ದಿನಗಳ ಉಚಿತ ರಾಜಯೋಗ ಧ್ಯಾನ ಶಿಬಿರ ಕುರಿತು ಮಾಹಿತಿ ನೀಡಲಾಯಿತು.

Leave a Reply

Your email address will not be published. Required fields are marked *