ಹಿಂದು ಜನಜಾಗೃತಿ ಸಮಿತಿಯ ಪತ್ರಿಕಾ ಪ್ರಕಟಣೆ

ದಿನಾಂಕ : 04.04.2025

ಛತ್ತೀಸ್‌ಗಢದಲ್ಲಿ ಲವ್ ಜಿಹಾದ್ ಮತ್ತು ಮತಾಂತರ ತಡೆಗಟ್ಟುವ ಕಠಿಣ ಕಾನೂನು ತರಲಾಗುವುದು ! – ಮುಖ್ಯಮಂತ್ರಿ ವಿಷ್ಣುದೇವ ಸಾಯ್ ಅವರ ಭರವಸೆ

ಛತ್ತೀಸ್‌ಗಢ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದುತ್ವನಿಷ್ಠರ ಸಭೆ

ಛತ್ತೀಸ್‌ಗಢ ರಾಜ್ಯ ಸರಕಾರ ಹಿಂದೂ ಸಮುದಾಯದ ಸುರಕ್ಷತೆಗಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯದಲ್ಲಿ ಲವ್ ಜಿಹಾದ್ ಮತ್ತು ಬಲವಂತದ ಮತಾಂತರವನ್ನು ಸಂಪೂರ್ಣವಾಗಿ ತಡೆಗಟ್ಟಲು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಕಠಿಣ ಕಾನೂನು ತರಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ. ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದುತ್ವನಿಷ್ಠ ಪ್ರತಿನಿಧಿಗಳೊಂದಿಗೆ ನಡೆದ ವಿಶೇಷ ಸಭೆಯಲ್ಲಿ ಮುಖ್ಯಮಂತ್ರಿಗಳು “ಛತ್ತೀಸ್‌ಗಢದಲ್ಲಿ ಲವ್ ಜಿಹಾದ್ ಮತ್ತು ಮತಾಂತರ ತಡೆಗಟ್ಟಲು ಭಾರತದಲ್ಲಿಯೇ ಅತ್ಯಂತ ಪರಿಣಾಮಕಾರಿ ಕಾನೂನು ತರಲಿದ್ದೇವೆ. ಮುಂದಿನ ಅಧಿವೇಶನದಲ್ಲಿ ಈ ಕಾನೂನನ್ನು ಅಂಗೀಕರಿಸಲು ನಾವು ಸಂಪೂರ್ಣ ಸಜ್ಜಾಗಿದ್ದೇವೆ.” ಎಂದರು.

ಹಲಾಲ್ ಪ್ರಮಾಣಪತ್ರದ ಷಡ್ಯಂತ್ರದ ವಿರುದ್ಧ ಸರಕಾರದ ಭೂಮಿಕೆ

ರಾಜ್ಯದಲ್ಲಿ ಹಲಾಲ್ ಪ್ರಮಾಣಪತ್ರ ಒಂದು ಆರ್ಥಿಕ ಷಡ್ಯಂತ್ರವಾಗಿದ್ದು, ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರಕಾರ ಮುಂದಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಆಕ್ರಮಣದ ವಿರುದ್ಧ ಕಠಿಣ ಕ್ರಮ
ರಾಜ್ಯದಲ್ಲಿ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಪ್ರವೇಶದ ಸಮಸ್ಯೆಗೂ ಸರಕಾರ ತೀವ್ರ ಗಮನ ಹರಿಸಿದೆ. “ಇತ್ತೀಚೆಗೆ 800 ಜನರ ಪರಿಶೀಲನೆ ಮಾಡಲಾಗಿದೆ ಮತ್ತು ಕೆಲವರ ಮೇಲೆ ಕ್ರಮವೂ ತೆಗೆದುಕೊಳ್ಳಲಾಗಿದೆ. ಭವಿಷ್ಯದಲ್ಲಿಯೂ ಇಂತಹ ಕ್ರಮಗಳು ಮುಂದುವರಿಯುತ್ತವೆ,” ಎಂದು ಮುಖ್ಯಮಂತ್ರಿ ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಹಿಂದೂತ್ವನಿಷ್ಠ ಪ್ರತಿನಿಧಿಗಳು
ಈ ಮಹತ್ವದ ಚರ್ಚೆಗಾಗಿ ಹಿಂದು ಜನಜಾಗೃತಿ ಸಮಿತಿಯ ಸಾಧಕರು ಹಾಗೂ ಇತರ ಧರ್ಮಪ್ರೇಮಿಗಳು ಉಪಸ್ಥಿತರಿದ್ದರು. ಸಮಿತಿಯ ಪರವಾಗಿ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಯೋಜಕ ಶ್ರೀ. ಸುನಿಲ್ ಘನವಟ, ಶ್ರೀ. ಹೇಮಂತ್ ಕಾನಸ್ಕರ್, ಶ್ರೀ. ಮಂಗೇಶ್ ಖಂಗನ್ ಮತ್ತು ಶ್ರೀ ನೀರಜ್ ಕ್ಷೀರಸಾಗರ್ ಸಹಾಭಾಗಿಯಾಗಿದ್ದರು. ಇವರೊಂದಿಗೆ ಗೌರಕ್ಷಾ ಸೇವಾ ದಳದ ಕಾರ್ಯಕರ್ತರಾದ ಶ್ರೀ. ಅಂಕಿತ್ ದಿವೇದಿ, ಹಿಂದುತ್ವನಿಷ್ಠರಾದ ಶ್ರೀ. ಪ್ರವೇಶ ತಿವಾರಿ, ಲಕ್ಷ್ ಸನಾತನ್ ಸಂಘಟನೆಯ ಸಂಸ್ಥಾಪಕರಾದ ಶ್ರೀ. ವಿಶಾಲ್ ತಾಮ್ರಕಾರ, ಶಿವಸೇನೆಯ ರಾಯಪುರ ಜಿಲ್ಲಾ ಅಧ್ಯಕ್ಷ ಶ್ರೀ. ಆಶಿಷ್ ಪರೇಡಾ ಮತ್ತು ಶ್ರೀ. ಪ್ರತೀಕ್ ರಿಜ್ವಾನಿ ಸಹ ಉಪಸ್ಥಿತರಿದ್ದರು.

ಹಿಂದು ಸಮುದಾಯದ ರಕ್ಷಣೆಗಾಗಿ ಸರಕಾರದ ಭರವಸೆ
ಈ ಸಭೆಯಲ್ಲಿ ಲವ್ ಜಿಹಾದ್ ತಡೆಗಟ್ಟುವ ಕಾನೂನು, ಮತಾಂತರ ವಿರೋಧಿ ಕಾನೂನು, ಬಾಂಗ್ಲಾದೇಶಿ ನುಸುಳುಕೋರರ ವಿರುದ್ಧ ಕಠಿಣ ಕ್ರಮ ಮತ್ತು ಹಲಾಲ್ ಪ್ರಮಾಣಪತ್ರದ ನಿಷೇಧಕ್ಕೆ ಸಂಬಂಧಿಸಿದ ಮನವಿಯನ್ನು ಸಮಿತಿಯ ಪರವಾಗಿ ಛತ್ತೀಸ್‌ಗಢ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ನೀಡಲಾಯಿತು. ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಹಿಂದೂ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ರಕ್ಷಣೆಗಾಗಿ ಸರಕಾರ ದೃಢ ನಿರ್ಧಾರಗಳನ್ನು ಕೈಗೊಳ್ಳುತ್ತದೆ, ಮೇಲಿನ ಎಲ್ಲಾ ವಿಷಯಗಳ ಮೇಲೂ ಕಠಿಣ ಕಾನೂನು ರೂಪಿಸುವ ಭರವಸೆ ನೀಡಿದರು.

ನಿಮ್ಮ ವಿಶ್ವಾಸಿ,
ಶ್ರೀ. ಸುನಿಲ್ ಘನವಟ್
ರಾಜ್ಯ ಸಂಯೋಜಕರು, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ,
ಹಿಂದು ಜನಜಾಗೃತಿ ಸಮಿತಿ (ಸಂಪರ್ಕ: 7020383264)

Leave a Reply

Your email address will not be published. Required fields are marked *