ಪಾವಗಡ: ತಾಲೂಕಿನ ಜನತೆಯಲ್ಲಿ ಅರಿವು ಮೂಡಿಸುತ್ತಾ ಬೀದಿ ನಾಟಕಗಳ ಮೂಲಕ ಗುರುತಿಸಿಕೊಂಡ ಮತ್ತು ಪತ್ರಿಕಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಸತ್ಯ ಲೋಕೇಶ್ ಅವರನ್ನು ರೋಟರಿ ಕ್ಲಬ್ ಸಂಸ್ಥೆಯ ಅಧ್ಯಕ್ಷರನ್ನಾಗಿ ಹಾಗೂ ವಿ.ರಾಮಾಂಜಿಯನ್ನು ಕಾರ್ಯದರ್ಶಿಯಾಗಿ ಜಿಲ್ಲಾ ಪಿಡಿಜಿ ರೋ|| ರಜೀಂದರ್ ರೈ ರವರು ಆಯ್ಕೆ ಮಾಡಿದರು.
ಪಟ್ಟಣದ ರೋಟರಿ ಸಂಸ್ಥೆಯ ಕಛೇರಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಅಧ್ಯಕ್ಷರ ಮತ್ತು ಕಾರ್ಯದರ್ಶಿ ಹಾಗೂ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಜ್ಯೋತಿ ಬೆಳಗಿಸಿ ಬಳಿಕ ಮಾತನಾಡಿದ ಅವರು, ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿಯು ಸಹ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ರೋಟರಿ ಸಂಸ್ಥೆ ಗಮನ ಸೆಳೆದಿದೆ ಎಂದರು.
ನೂತನ ಅಧ್ಯಕ್ಷ ಸತ್ಯಲೋಕೇಶ್ ಮಾತನಾಡಿ, ಇಂದು ದೇಶ ವಿದೇಶಗಳಲ್ಲಿ ಗುರ್ತಿಸಿಕೊಂಡಿರು
ರೋಟರಿ ಸಂಸ್ಥೆಗೂ ಮತ್ತು ನನಗೆ ಸುಮಾರು ವರ್ಷಗಳಿಂದ ಅವಿನಾಭಾವ ಸಂಬಂಧಿವಿದೇ ಯಾಕೆಂದರೆ ಚಿಕ್ಕಂದಿನಿಂದಲೂ ನಾನು ಇಲ್ಲೇ ಇರುವ ಸರ್ಕಾರಿ ಶಾಲೆಯಲ್ಲಿ ಓದಲು ಬರುತ್ತಿರುವ ಆ ಸಮಯದಲ್ಲಿ ರೋಟರಿ ಕ್ಲಬ್ ಯಾವುದೇ ಕಾರ್ಯಕ್ರಮಗಳನ್ನು ಮಾಡಿದರು ಅಂದು ನಾನು ಮುಂದೆ ಕುಳಿತು ನೋಡುತ್ತಿದ್ದೆ. ಆದರೆ
ಇಂದು ಅದೇ ಸಂಸ್ಥೆಗೆ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ನನಗೆ ಅತೀವ ಸಂತಸವಾಗಿದೆ. ನಮ್ಮ ಸಂಸ್ಥೆಯು ಹೆಚ್ಚು ಶಿಕ್ಷಣಕ್ಕೆ ಒತ್ತು ಕೊಟ್ಟು ಮಕ್ಕಳಿಗೆ ಉಚಿತ ಮನೆಪಾಠ, ಹೆಣ್ಣು ಮಕ್ಕಳಿಗೆ ಟೈಲರಿಂಗ್ ಇನ್ನಿತರೆ ಸ್ವಾವಲಂಬಿತ ಬದುಕು ರೂಪಿಸಿಕೊಳ್ಳಲು ನಾನು ಮತ್ತು ನಮ್ಮ ಪದಾಧಿಕಾರಿಗಳು ನಿರಂತರ ಶ್ರಮ ವಹಿಸುವುದಾಗಿ ಹೇಳಿದರು.
ಈ ವೇಳೆ ಶಾಲಾ ಮಕ್ಕಳಿಗೆ ನೂತನ ಅಧ್ಯಕ್ಷರು ಭೋದನ ಪರಿಕರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಕೆ ಸಂಘದ ಸಿಇಒ ಡಾ.ವೈ.ಎಸ್.ಹನುಮಂತರಾಯ, ಡಾ.ಕೆ.ಎಂ.ಪ್ರಭಾಕರ್, ನೂತನ ರೋಟರಿ ಸದಸ್ಯರಾದ ಫಾಸ್ಟಿನ್ ಮೈಕಲ್ ಪ್ರದೀಶ್, ಕಟ್ಟಾ ನರಸಿಂಹಮೂರ್ತಿ, ಗೊರ್ತಿ ನಾಗರಾಜು, ಮೊಹಮ್ಮದ್ ಇಮ್ರಾನ್, ಕಮಲ್ ಬಾಬು, ನಾಗಭೂಷಣ, ಅಶ್ವತ್ಥ, ಈಶ್ವರಪ್ಪ, ಗೋಪಾಲ್, ದಾನ್ ಫೌಂಡೇಶನ್ ವೀರಭದ್ರಪ್ಪ, ಶ್ರೀರಾಮ್, ಗಂಗಾಧರ್ ಮತ್ತಿತರರು ಇದ್ದರು.

ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಸತ್ಯ ಲೋಕೋಶ್ ಪದಗ್ರಹಣ

ಪಾವಗಡ: ತಾಲೂಕಿನ ಜನತೆಯಲ್ಲಿ ಅರಿವು ಮೂಡಿಸುತ್ತಾ ಬೀದಿ ನಾಟಕಗಳ ಮೂಲಕ ಗುರುತಿಸಿಕೊಂಡ ಮತ್ತು ಪತ್ರಿಕಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಸತ್ಯ ಲೋಕೇಶ್ ಅವರನ್ನು ರೋಟರಿ ಕ್ಲಬ್ ಸಂಸ್ಥೆಯ ಅಧ್ಯಕ್ಷರನ್ನಾಗಿ ಹಾಗೂ ವಿ.ರಾಮಾಂಜಿಯನ್ನು ಕಾರ್ಯದರ್ಶಿಯಾಗಿ ಜಿಲ್ಲಾ ಪಿಡಿಜಿ ರೋ|| ರಜೀಂದರ್ ರೈ ರವರು ಆಯ್ಕೆ ಮಾಡಿದರು.
ಪಟ್ಟಣದ ರೋಟರಿ ಸಂಸ್ಥೆಯ ಕಛೇರಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಅಧ್ಯಕ್ಷರ ಮತ್ತು ಕಾರ್ಯದರ್ಶಿ ಹಾಗೂ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಜ್ಯೋತಿ ಬೆಳಗಿಸಿ ಬಳಿಕ ಮಾತನಾಡಿದ ಅವರು, ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿಯು ಸಹ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ರೋಟರಿ ಸಂಸ್ಥೆ ಗಮನ ಸೆಳೆದಿದೆ ಎಂದರು.
ನೂತನ ಅಧ್ಯಕ್ಷ ಸತ್ಯಲೋಕೇಶ್ ಮಾತನಾಡಿ, ಇಂದು ದೇಶ ವಿದೇಶಗಳಲ್ಲಿ ಗುರ್ತಿಸಿಕೊಂಡಿರು
ರೋಟರಿ ಸಂಸ್ಥೆಗೂ ಮತ್ತು ನನಗೆ ಸುಮಾರು ವರ್ಷಗಳಿಂದ ಅವಿನಾಭಾವ ಸಂಬಂಧಿವಿದೇ ಯಾಕೆಂದರೆ ಚಿಕ್ಕಂದಿನಿಂದಲೂ ನಾನು ಇಲ್ಲೇ ಇರುವ ಸರ್ಕಾರಿ ಶಾಲೆಯಲ್ಲಿ ಓದಲು ಬರುತ್ತಿರುವ ಆ ಸಮಯದಲ್ಲಿ ರೋಟರಿ ಕ್ಲಬ್ ಯಾವುದೇ ಕಾರ್ಯಕ್ರಮಗಳನ್ನು ಮಾಡಿದರು ಅಂದು ನಾನು ಮುಂದೆ ಕುಳಿತು ನೋಡುತ್ತಿದ್ದೆ. ಆದರೆ
ಇಂದು ಅದೇ ಸಂಸ್ಥೆಗೆ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ನನಗೆ ಅತೀವ ಸಂತಸವಾಗಿದೆ. ನಮ್ಮ ಸಂಸ್ಥೆಯು ಹೆಚ್ಚು ಶಿಕ್ಷಣಕ್ಕೆ ಒತ್ತು ಕೊಟ್ಟು ಮಕ್ಕಳಿಗೆ ಉಚಿತ ಮನೆಪಾಠ, ಹೆಣ್ಣು ಮಕ್ಕಳಿಗೆ ಟೈಲರಿಂಗ್ ಇನ್ನಿತರೆ ಸ್ವಾವಲಂಬಿತ ಬದುಕು ರೂಪಿಸಿಕೊಳ್ಳಲು ನಾನು ಮತ್ತು ನಮ್ಮ ಪದಾಧಿಕಾರಿಗಳು ನಿರಂತರ ಶ್ರಮ ವಹಿಸುವುದಾಗಿ ಹೇಳಿದರು.
ಈ ವೇಳೆ ಶಾಲಾ ಮಕ್ಕಳಿಗೆ ನೂತನ ಅಧ್ಯಕ್ಷರು ಭೋದನ ಪರಿಕರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಕೆ ಸಂಘದ ಸಿಇಒ ಡಾ.ವೈ.ಎಸ್.ಹನುಮಂತರಾಯ, ಡಾ.ಕೆ.ಎಂ.ಪ್ರಭಾಕರ್, ನೂತನ ರೋಟರಿ ಸದಸ್ಯರಾದ ಫಾಸ್ಟಿನ್ ಮೈಕಲ್ ಪ್ರದೀಶ್, ಕಟ್ಟಾ ನರಸಿಂಹಮೂರ್ತಿ, ಗೊರ್ತಿ ನಾಗರಾಜು, ಮೊಹಮ್ಮದ್ ಇಮ್ರಾನ್, ಕಮಲ್ ಬಾಬು, ನಾಗಭೂಷಣ, ಅಶ್ವತ್ಥ, ಈಶ್ವರಪ್ಪ, ಗೋಪಾಲ್, ದಾನ್ ಫೌಂಡೇಶನ್ ವೀರಭದ್ರಪ್ಪ, ಶ್ರೀರಾಮ್, ಗಂಗಾಧರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *