ದಿನಾಂಕ : 14.05.2025.   ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ತಯಾರಿ ಪೂರ್ಣ : ಉತ್ಸುಕತೆಯ ಶಿಖರದಲ್ಲಿ !ಗೋವಾದಲ್ಲಿ ಮೊದಲಬಾರಿಗೆ ಭಕ್ತರ ಭವ್ಯ ಕುಂಭಮೇಳ !

• 23 ದೇಶಗಳಿಂದ ಪ್ರತಿನಿಧಿಗಳು • 25 ಸಾವಿರ ಭಕ್ತರು • 15 ಪಾವನ ಸಂತರ ಪಾದುಕೆಗಳು
• ಸೋಮನಾಥ ಜ್ಯೋತಿರ್ಲಿಂಗ ದರ್ಶನ • ಐತಿಹಾಸಿಕ ಶಸ್ತ್ರ ಪ್ರದರ್ಶನ • ದೇವರು, ದೇಶ ಹಾಗೂ ಧರ್ಮ ಜಾಗೃತಿಯ ಸಂದೇಶ !

ಫೊಂಡಾ (ಗೋವಾ) : ಲಕ್ಷಾಂತರ ಭಕ್ತರು ಹಾಗೂ ಸಂತರೊಂದಿಗೆ ನಡೆಯುವ ಕುಂಭಮೇಳದಂತೆ, ಇದೇ ಮೊದಲಬಾರಿಗೆ ಗೋವಾ ರಾಜ್ಯದ ಪುಣ್ಯಭೂಮಿಯಲ್ಲಿ ಮೇ 17ರಿಂದ 19ರವರೆಗೆ ದಿವ್ಯ ಆತ್ಮಶಕ್ತಿಯ ಕುಂಭಮೇಳ – ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಆಯೋಜಿಸಲಾಗುತ್ತಿದೆ ! ಈ ಮಹೋತ್ಸವದಲ್ಲಿ 23 ದೇಶಗಳಿಂದ ಆಗಮಿಸುವ ನಾಗರಿಕರು, ಸಂತರನ್ನು ಸೇರಿದಂತೆ 25 ಸಾವಿರಕ್ಕಿಂತ ಹೆಚ್ಚಿನ ಭಕ್ತರು 4 ರಿಂದ 5 ದಿನಗಳವರೆಗೆ ಪಾಲ್ಗೊಳ್ಳಲಿದ್ದಾರೆ. ಸಂತರ ಜ್ಞಾನಾಮೃತದ ಉಪದೇಶಗಳು, ಒಂದು ಕೋಟಿ ರಾಮನಾಮ ಜಪ ಯಜ್ಞ, ಶಿವಕಾಲೀನ ಐತಿಹಾಸಿಕ ಶಸ್ತ್ರ ಪ್ರದರ್ಶನ, ವಿವಿಧ ಸಂತರ ಪಾವನ ಪಾದುಕೆಗಳು, ಸಾವಿರ ವರ್ಷಗಳ ಹಿಂದಿನ ಸೋರಟಿ ಸೋಮನಾಥ ಜ್ಯೋತಿರ್ಲಿಂಗದ ಅಪರೂಪದ ದರ್ಶನ, ಮಹಾಧನ್ವಂತರಿ ಯಜ್ಞ ಮತ್ತು ಶತಚಂಡಿ ಯಾಗ ಸೇರಿದಂತೆ ಹಲವು ಕಾರ್ಯಕ್ರಮಗಳು ಇದರಲ್ಲಿ ಸೇರಿವೆ. ಮಹೋತ್ಸವದ ಎಲ್ಲಾ ತಯಾರಿಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಭಕ್ತಿ ಮತ್ತು ಶಕ್ತಿಯ ಅದ್ಭುತ ಸಂಗಮ ಗೋವಾದಲ್ಲಿ ಕಾಣಲಿದೆ` ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ ತಿಳಿಸಿದರು. ಅವರು ಫರ್ಮಾಗುಡಿಯ ಫೊಂಡಾದ ಇಂಜಿನಿಯರಿಂಗ್ ಮೈದಾನದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿ ಶ್ರೀ. ಜಯಂತ ಮಿರಿಂಗ್ಕರ್, ಗೋಮಂತಕ ಮಂದಿರ ಮಹಾಸಂಘದ ಕಾರ್ಯದರ್ಶಿ ಶ್ರೀ. ಜಯೇಶ್ ಥಳಿ, ಹಿಂದೂ ಜನಜಾಗೃತಿ ಸಮಿತಿಯ ಗೋವಾ ರಾಜ್ಯ ಸಂಯೋಜಕ ಶ್ರೀ. ಸತ್ಯವಿಜಯ ನಾಯ್ಕ್ ಹಾಗೂ ಶ್ರೀ. ಸುಚೇಂದ್ರ ಅಗ್ನಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ. ವರ್ತಕ್ ಅವರು “ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಲಾಜಿ ಆಠವಲೆಯವರ 83ನೇ ಜನ್ಮದಿನದ ಅಂಗವಾಗಿ ಈ ಮಹೋತ್ಸವವನ್ನು ಆಯೋಜಿಸಲಾಗಿದೆ. ಇದು ರಾಮರಾಜ್ಯದ ದಿಕ್ಕಿನಲ್ಲಿ ಒಂದು ಸಂಯುಕ್ತ ಹೆಜ್ಜೆಯಾಗಿದೆ. ಈ ಮಹೋತ್ಸವದಿಂದ ಸಾಧಕರು ಮತ್ತು ಧರ್ಮಪ್ರೇಮಿ ಹಿಂದೂಗಳು ದೇವರು, ದೇಶ ಹಾಗೂ ಧರ್ಮದ ರಕ್ಷಣೆಗೆ ಹೊಸ ಸಂಕಲ್ಪವನ್ನು ತೆಗೆದುಕೊಳ್ಳಲಿದ್ದಾರೆ.”

ಶಂಖನಾದ ಮಹೋತ್ಸವದ ಜಾಗೃತಿ : ಸಂಪೂರ್ಣ ಗೋವಾ ರಾಜ್ಯದಲ್ಲಿ ಈ ಮಹೋತ್ಸವದ ಜಾಗೃತಿಗೆ ನೂರಾರು ಫ್ಲೆಕ್ಸ್-ಹೋರ್ಡಿಂಗ್ಸ್, ವಿವಿಧ ರಸ್ತೆಗಳ ಮಧ್ಯದಲ್ಲಿ ಶಂಖ ಧ್ವನಿ ಮಾಡುತ್ತಿರುವ ಶ್ರೀಕೃಷ್ಣನ ಕಟ್‌ಔಟ್‌ಗಳು, ಸ್ವಾಗತದ್ವಾರಗಳು, ಸಂತರ ಚಿತ್ರಗಳೊಂದಿಗೆ ಭವ್ಯ ಪೋಸ್ಟರ್‌ಗಳು, ಹಾಗೂ ಪ್ರಮುಖ ಪ್ರವೇಶದ್ವಾರದಲ್ಲಿ ದೇವಸ್ಥಾನ ಆಕಾರದ ದುರ್ಗಾ ದ್ವಾರ ನಿರ್ಮಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 38 ಅಡಿ ಎತ್ತರವಿರುವ ಧರ್ಮಧ್ವಜ ಹಾರಿಸಲಾಗುವುದು.

ಮಹೋತ್ಸವದ ಪ್ರಮುಖ ವೈಶಿಷ್ಟ್ಯಗಳು :
ಮಹೋತ್ಸವ 1,26,000 ಚದರ ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ನಡೆಯಲಿದ್ದು, 25 ಸಾವಿರ ಜನರಿಗೆ ಏರ್‌ಕಂಡಿಷನ್‌ ವ್ಯವಸ್ಥೆಯ ಪೆಂಡಾಲ್ ವ್ಯವಸ್ಥೆ ಇರುತ್ತದೆ. 8 ಸಾವಿರ ಜನರಿಗೆ ಒಂದೇ ಸಮಯದಲ್ಲಿ ಭೋಜನ ವ್ಯವಸ್ಥೆ, 17 ಪಾರ್ಕಿಂಗ್ ಜೋನ್, 350 ಶೌಚಾಲಯ, ಭಾರೀ ಧಾರ್ಮಿಕ ಗ್ರಂಥ ಮಾರಾಟ ಕೇಂದ್ರ, ಗೋದಾನ ಕೇಂದ್ರ, ಶ್ರೀ ಅನ್ನಪೂರ್ಣಾ ವಿಭಾಗ, ಗುರು ಮಂದಿರ, 6,000 ಚದರ ಅಡಿ ಶಸ್ತ್ರ ಪ್ರದರ್ಶನ, 15 ಸಂತರ ಪಾದುಕೆಗಳು ಹಾಗೂ 1,000 ವರ್ಷಗಳ ಹಿಂದಿನ ಸೋರಟಿ ಸೋಮನಾಥ ಜ್ಯೋತಿರ್ಲಿಂಗ ದರ್ಶನ ಕಕ್ಷೆ ಇರುತ್ತದೆ. ಅಲ್ಲದೆ, ಭದ್ರತೆಯ ದೃಷ್ಟಿಯಿಂದ ಪೊಲೀಸ್ ಟವರ್, ಸಿಸಿ ಟಿವಿ, ಭದ್ರತಾ ಸಿಬ್ಬಂದಿ, ಆಂಬುಲೆನ್ಸ್, ಬೈಕ್ ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳು, 16 ವೈದ್ಯರೊಂದಿಗೆ ವೈದ್ಯಕೀಯ ಕೇಂದ್ರಗಳು, 25 ಇಲಾಖೆಗಳಿಗೆ ನಿಯೋಜಿಸಲಾದ ಆಡಳಿತಾತ್ಮಕ ಕಚೇರಿ, ಮಾಧ್ಯಮ ಪ್ರತಿನಿಧಿಗಳಿಗೆ ಪ್ರೆಸ್ ರೂಮ್ ಹಾಗೂ ಇತರೆ ಎಲ್ಲಾ ಸೌಲಭ್ಯಗಳು ಲಭ್ಯವಿರುತ್ತವೆ. ಭದ್ರತೆಯ ಕಾರಣದಿಂದ ಪ್ರತಿಯೊಬ್ಬರೂ ಮಾನ್ಯ ಸರಕಾರದಿಂದ ನೀಡಲಾದ ಗುರುತಿನ ಚೀಟಿ ತರಬೇಕಾಗಿ ವಿನಂತಿಸಲಾಗಿದೆ ಮತ್ತು ಯಾವುದೇ ಬ್ಯಾಗ್ ತರಬಾರದು. ಈ ಕಾರ್ಯಕ್ರಮವನ್ನು ನೇರ ಪ್ರಸಾರದಲ್ಲಿ ನೋಡಲು ಮತ್ತು ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು SanatanRashtraShankhnad.in ವೆಬ್‌ಸೈಟ್‌ಗೆ ಭೇಟಿ ನೀಡಿ.

ನಿಮ್ಮ ವಿನಮ್ರ,

ಶ್ರೀ. ಅಭಯ ವರ್ತಕ್
ವಕ್ತಾರರು, ಸನಾತನ ಸಂಸ್ಥೆ
(ಸಂಪರ್ಕ: 9987922222)

Leave a Reply

Your email address will not be published. Required fields are marked *