

371ನೇ(ಜೆ) ಕಲಂ ಅನುಷ್ಠಾನ ಕುರಿತು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಚಿವ ಪ್ರಿಯಾಂಕ್ ಖರ್ಗೆಯವರೊಂದಿಗೆ ಸಮಾಲೋಚನೆ
ಕಲಬುರಗಿ: ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪ್ರಮುಖರಾದ ಬಸವರಾಜ ದೇಶಮುಖ, ಡಾ. ಲಕ್ಷ್ಮಣ ದಸ್ತಿ, ಪ್ರೊ. ಆರ್.ಕೆ. ಹುಡಗಿ ಸೇರಿದಂತೆ, ಸಮಿತಿಯ ಮುಖಂಡರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು 371ನೇ(ಜೆ) ಕಲಂ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ, ಪ್ರಿಯಾಂಕ ಖರ್ಗೆಯವರಿಗೆ ಭೇಟಿ ಮಾಡಿ 371ನೇ(ಜೆ) ಕಲಂ ವಿಶೇಷ ಸ್ಥಾನಮಾನ ಜಾರಿಯಾಗಿ 10 ವರ್ಷ ಗತಿಸಿರುವ ಹಿನ್ನಲೆಯಲ್ಲಿ ಇದರ ಸಾಧನೆ, ಸಮಸ್ಯೆ, ಸವಾಲುಗಳು ಮತ್ತು ಪರಿಹಾರದ ಕುರಿತು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಪಕ್ಷಾತೀತವಾಗಿ ಶುದ್ಧ ರಾಜಕಿಯೇತರ ತಳಹದಿಯ ಮೇಲೆ 371ನೇ(ಜೆ) ಕಲಂ ದಶಮಾನೋತ್ಸವ ಆಚರಣೆಗೆ ಸಂಬಂಧಿಸಿ ಕಳೆದ ಏಪ್ರಿಲ್ 19 ರಂದು ಶಿಕ್ಷಣ ಸಂಸ್ಥೆಗಳ, ವಿಶ್ವವಿದ್ಯಾಲಯಗಳ, ಕಾಲೇಜುಗಳ ಮತ್ತು ಆಯಾ ಕ್ಷೇತ್ರದ ಗಣ್ಯರ ಸಭೆಯಲ್ಲಿ ನಿರ್ಣಯ ಕೈಗೊಂಡಿರುವಂತೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ನಡೆಸುವ ಬಗ್ಗೆ ವಿವರವಾಗಿ ಚರ್ಚಿಸಿ ಕಾರ್ಯಕ್ರಮಗಳಿಗೆ ಸ್ಪಂದಿಸಿ ಭಾಗವಹಿಸಲು ಹೋರಾಟ ಸಮಿತಿ ಸಚಿವರಿಗೆ ಮನವಿ ಮಾಡಿ ಕಾರ್ಯಕ್ರಮದ ರೂಪರೇಷೆಗಳ ಪತ್ರ ಸಲ್ಲಿಸಲಾಯಿತು. ಅದರಂತೆ, ನೆನೆಗುದಿಗೆ ಬಿದ್ದಿರುವ ಪಿ.ಎಸ್.ಐ. ಸೇರಿದಂತೆ ಆಯಾ ಇಲಾಖೆಗಳ ಹುದ್ದೆಗಳಿಗೆ ಆಯ್ಕೆಯಾದ ಕಲ್ಯಾಣ ಕರ್ನಾಟಕ ಪ್ರದೇಶದ ಅರ್ಹ ಅಭ್ಯರ್ಥಿಗಳಿಗೆ ಆದಷ್ಟು ಶೀಘ್ರ ಷರತ್ತುಬದ್ಧ ಆದೇಶ ನೀಡುವ ಬಗ್ಗೆ ಕಾಲಮಿತಿಯ ಕ್ರಮ ಕೈಗೊಳ್ಳಲು ಸಚಿವರಿಗೆ ಮನವರಿಕೆ ಮಾಡಲಾಯಿತು.
371ನೇ(ಜೆ) ಕಲಂ ಅನುಷ್ಠಾನವಾಗಿ 10 ವರ್ಷಗಳು ಗತಿಸಿರುವ ಅವಧಿಯಲ್ಲಿ ಶೈಕ್ಷಣಿಕ ಕ್ಷೇತ್ರ ಮತ್ತು ನೇಮಕಾತಿ ಮುಂಬಡ್ತಿ ಸೇರಿದಂತೆ, ಕಲ್ಯಾಣದ ಅಭಿವೃದ್ಧಿಗೆ ಸಂಬಂಧಿಸಿದ ಸಾಧನೆ, ಸಮಸ್ಯೆಗಳ ಅವಲೋಕನ ನಡೆಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಹೋರಾಟ ಸಮಿತಿ ಸಲ್ಲಿಸಿರುವ ಪ್ರಸ್ತಾವನೆಗೆ ಗಂಭೀರವಾಗಿ ಪರಿಗಣಿಸಿದ್ದ ಸಚಿವರು ಸರಕಾರ 371ನೇ ಜೇ ಕಲಂ ದಶಮಾನೋತ್ಸವ ಅಂಗವಾಗಿ ಏಳು ಜಿಲ್ಲೆಗಳಲ್ಲಿ ವಿಚಾರ ಸಂಕಿರಣಗಳನ್ನು ನಡೆಸಲು ಸರಕಾರದಿಂದ ಸ್ಪಂದನೆ ನೀಡುವುದಲ್ಲದೆ, ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದರು. ನೆನೆಗುದಿಗೆ ಬಿದ್ದಿರುವ ಆಯಾ ಇಲಾಖೆಯ ನೇಮಕಾತಿಯ ಬಗ್ಗೆ ಆದಷ್ಟು ಶೀಘ್ರ ಷರತ್ತುಬದ್ಧ ಆದೇಶ ನೀಡಿ ಸೇವೆಗೆ ಅವಕಾಶ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಆಯಾ ಕ್ಷೇತ್ರದ ಗಣ್ಯರು, ಸಮಿತಿಯ ಪ್ರಮುಖರಾದ ಡಾ.ಬಸವರಾಜ ಕುಮನೂರ, ಡಾ. ಮಾಜಿದ್ ದಾಗಿ, ಶಿವುಕುಮಾರ, ಅಸ್ಲಂ ಚೌಂಗೆ ಶಿವಶರಣ ಬಿರಾದಾರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಸಹಿ/-
(ಬಸವರಾಜ ದೇಶಮುಖ)
ಗೌರವಾಧ್ಯಕ್ಷರು
ಸಹಿ/-
(ಡಾ. ಲಕ್ಷ್ಮಣ ದಸ್ತಿ)
ಸಂಸ್ಥಾಪಕ ಅಧ್ಯಕ್ಷರು
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ,