ತಿರಂಗಾ ಯಾತ್ರೆ
“ಜಮ್ಮು ಮತ್ತು ಕಾಶ್ಮೀರ ಭಾರತೆ ಮಾತೆಯ ಸಿಂಧೂರ”

ದಿನಾಂಕ 15.05. 2025. ರಂದು ಬೆಂಗಳೂರಿನಲ್ಲಿ ರಾಷ್ಟ್ರ ರಕ್ಷಣೆಗಾಗಿ ನಾಗರಿಕರ ಸಂಘಟನೆ ವತಿಯಿಂದ “ಆಪರೇಷನ್ ಸಿಂಧೂರ” ಮತ್ತು ದೇಶದ ಸೈನಿಕರಿಗೆ ಬೆಂಬಲಿಸಿ ಬೃಹತ್ “ತಿರಂಗಾ ಯಾತ್ರೆ” ಯಾತ್ರೆಯು ಶೇಷಾದ್ರಿಪುರಂ ಶಿರೂರು ಪಾರ್ಕ್‌ನಿಂದ ಮಲ್ಲೇಶ್ವರಂ 18 ನೇ ಕ್ರಾಸ್ ಆಟದ ಮೈದಾನದವರೆಗೆ ನಡೆಯಿತು.

ಯಾತ್ರೆ ಉದ್ದಕ್ಕೂ ಸೈನಿಕರಿಗೆ, ಪ್ರಧಾನಿಯವರಿಗೆ ಬೆಂಬಲಿಸಿ ಜಯಘೋಷ ಮೊಳಗಿಸಲಾಯಿತು. ನಮ್ಮ ಇಡೀ ದೇಶದ ಜನತೆ ಸದಾ ದೇಶದ ಸೈನ್ಯದ ಪರ ನಿಲ್ಲಲಿದೆ.

ವಿಶೇಷವಾಗಿ ಈ ಸಂದರ್ಭದಲ್ಲಿ 205 ಅಡಿ ಅಗಲ, 630 ಅಡಿ ಉದ್ದದ ತ್ರಿವರ್ಣ ಧ್ವಜ ಪ್ರದರ್ಶನ ಮಾಡಲಾಯಿತು.

ಈ ಸಂದರ್ಭದಲ್ಲಿ ಡಾ. ರಾಧಾ ಮೋಹನ್‌ದಾಸ್ ಅಗರ್ವಾಲ್,‌ ಸಹ ಉಸ್ತುವಾರಿ ಶ್ರೀ ಸುಧಾಕರ ರೆಡ್ಡಿ, ಪ್ರತಿಪಕ್ಷ ನಾಯಕರಾದ ಶ್ರೀ ಆರ್. ಅಶೋಕ್, ಶ್ರೀ ಛಲವಾದಿ ನಾರಾಯಣ ಸ್ವಾಮಿ, ಹಿರಿಯ ನಾಯಕರಾದ ಶ್ರೀ ಸಿ ಟಿ ರವಿ, ಸಂಸದರಾದ ಶ್ರೀ ಪಿ ಸಿ ಮೋಹನ್, ಮಾಜಿ ಉಪಮುಖ್ಯಮಂತ್ರಿಗಳಾದ ಡಾ. ಸಿ. ಎನ್. ಅಶ್ವತ್ಥ್‌ ನಾರಾಯಣ್, ನಿವೃತ್ತ ಏರ್ ಮಾರ್ಷಲ್ ಶ್ರೀ ಎ.ವಿ. ಮುರುಳಿ, ಸಾಮಾಜಿಕ ಸಂಘಟನೆಗಳ ಹಿರಿಯರಾದ ಶ್ರೀ ತಿಪ್ಪೇಸ್ವಾಮಿ, ಶ್ರೀ ಲಕ್ಷ್ಮೀನಾರಾಯಣ್ ಸೇರಿದಂತೆ ಕಾಲೇಜು ವಿದ್ಯಾರ್ಥಿ ನಾಯಕರು ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *