ಪ್ಲಾಸ್ಟಿಕ್ ತ್ಯಾಜ್ಯ ದೇಶದ ಬಹು ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಇದರ ನಿರ್ಮೂಲನೆಗಾಗಿ ಎಲ್ಲರೂ ಕೈಜೋಡಿಸಬೇಕಾದುದು ಅತ್ಯಗತ್ಯ ಎಂದು ಕೋಗಿಲಿನ ಆಕ್ಸ್ಫರ್ಡ್ ಆಂಗ್ಲ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ರಾಜೇಶ್ ಕರೆನೀಡಿದರು. ಅವರು ಪರಿಸರ ದಿನಾಚರಣೆ ಅಂಗವಾಗಿ ಜೂನ್ 5 ಗುರುವಾರದಂದು ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು .
ಮುಂದುವರೆದ ಅವರು ಪ್ಲಾಸ್ಟಿಕ್ ಪ್ರಾಣಿಗಳ ಪ್ರಾಣಕ್ಕೆ ಹಾನಿಕಾರಕವಾಗಿದ್ದು ಅವುಗಳನ್ನು ನಿರ್ಮೂಲನೆ ಗೊಳಿಸುವಲ್ಲಿ ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಪರಿಸರ ದಿನಾಚರಣೆ ಅಂಗವಾಗಿ ಒಂದು ಕಳೆದ ಐದು ದಿನಗಳಿಂದ ವಿವಿಧ ಕಾರ್ಯಕ್ರಮ ಗಳನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪರಿಸರ ಬಿಂಬವನ್ನು ಮಕ್ಕಳು ತಮ್ಮ ಕುಂಚಗಳಿಂದ ಹರಳಿಸಿದರೆ, ( ಚಿತ್ರಕಲೆ ಸ್ಪರ್ಧೆ,) ಕಲರವ ಮಕ್ಕಳ ಹಾಡಿನಲ್ಲಿ ಹೊರಹೊಮ್ಮಿತು. ನೃತ್ಯ ಮನಸೂರೆ ಗೊಂಡರೆ, ನಾಟಕ ಎಲ್ಲರ ಮೆಚ್ಚುಗೆ ಗಳಿಸಿತು. ಇದೇ ಸಂದರ್ಭದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ
ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ಸಸಿಗಳನ್ನು ವಿತರಿಸಲಾಯಿತು.
ಮಕ್ಕಳು ನಡೆಸಿಕೊಟ್ಟ ಬೀದಿ ನಾಟಕ ಅತ್ಯಂತ ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕರಾದ ಶ್ರೀ ಡಾ. ರಾಜು, ಆಕ್ಸ್ಫರ್ಡ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ರಾಜೇಶ್ ಹಾಗೂ ಶ್ರೀಮತಿ ಶೋಭ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *