



ಹತ್ತನೇ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಎಸ್ಸಿಎಸ್ಟಿ ವಿಧ್ಯಾರ್ಥಿಗಳಿಗೆ ಭಗತ್ಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಧ್ಯಾರ್ಥಿವೇತನ ವಿತರಣೆ
ನನ್ನ ಕೊನೆ ಉಸಿರು ತನಕ ಸಮಾಜ ಸೇವೆ
ಮುಂದು ವರಿಯಲಿದೆ: ಸಂದೀಪ್.ಬಿ ರೆಡ್ಡಿ.
ಚಿಕ್ಕಬಳ್ಳಾಪುರ: ಮಕ್ಕಳೆ ನೀವೇ ಈ ದೇಶದ ಭವಿಷ್ಯ,ಓದಿದ ಕಡೆ ಹೆಚ್ಚಿನ ಗಮನ ಹರಿಸಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ
ಒಳ್ಳೆಯ ಆಲೋಚನೆ,
ಆತ್ಮವಿಶ್ವಾಸದಿಂದ ಮುಂದೆ ಸಾಗಿ ಪೋಷಕರ ಕನಸನ್ನು ಈಡೇರಿಸಿ ಖಂಡಿತವಾಗಿಯೂ ಸಮಾಜ ಹಾಗೂ ಪ್ರಕೃತಿ ನಿಮ್ಮ ಜೊತೆ ಇರಲಿದೆ ಎಂದು ಭಗತ್ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್.ಬಿ ರೆಡ್ಡಿ ತಿಳಿಸಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ
ಭಾನುವಾರ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಎಸ್.ಎಸ್. ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ನಾನು ಪೆರೆಸಂಸ್ರದಲ್ಲಿ ಜನಿಸಿ ಜೀವನ ಕಟ್ಟಿಕೊಳ್ಳಲು ಬೆಂಗಳೂರಿಗೆ ಹೋಗಿದ್ದೆನೆ ನನ್ನ ಸಂಪಾದನೆಯ ಒಂದಿಷ್ಟು ಬಾಗ ಸಮಾಜ ಸೇವೆಗೆ ಮುಡಿಪಿಟ್ಟಿದ್ದೇನೆ ನನಗೆ ಈ ಸದ್ಯ ಕ್ಷೇತ್ರದ ಎಸ್ಸಿ ಎಸ್ಟಿ ಮಕ್ಕಳಿಗೆಲ್ಲಾ ವಿದ್ಯಾರ್ಥಿ ವೇತನ ಕೊಡುವಷ್ಟು ಶಕ್ತಿ ದೇವರು ಕೊಟ್ಟಿದ್ದಾನೆ ಆಗಂತ ಬೇರೆ ಜಾತಿಯ ಮಕ್ಕಳನ್ನ ಕಡೆಗಣಿಸಿಲ್ಲ ಅವರು ತಮ್ಮ ಕಷ್ಟವನ್ನ ಹೇಳಿಕೊಂಡಾಗ ಅವರ ಕಷ್ಟಗಳಿಗೂ ಸ್ಪಂದಿಸುತ್ತಾ ಬಂದಿದ್ದೇನೆ. ನಾನು ಯಾವ ರಾಜಕೀಯ ಲಾಭಕ್ಕಾಗಿ ಈ ಕೆಲಸ ಮಾಡುತ್ತಿಲ್ಲ ದೇಶದಲ್ಲಿ ಹೆಸರುವಾಸಿಯಾಗಿರುವ ಮೇಧಾವಿಗಳೆಲ್ಲಾ ಅಧಿಕಾರದಲ್ಲಿ ಇದ್ದೆ ಸಮಾಜ ಸೇವೆ ಮಾಡಿಲ್ಲ ಹಾಗೆಯೂ ಸೇವೆ ಸಲ್ಲಿಸಿಯೂ ಹೆಸರು ಮಾಡಿದ್ದಾರೆ. ನನ್ನದು ಅದೆ ಹಾದಿ ಎಂದು ವಿರೋದಿಗಳಿಗೂ ಉತ್ತರ ನೀಡುವಂತೆ ಮಾತನಾಡಿದರು.ಇನ್ನು ಸದಾ ಕ್ಷೇತ್ರದ ಜನರ
ಶಿಕ್ಷಣ,ಆರೋಗ್ಯ,ಮನೆ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಉದ್ಯಮಿ ಸಮಾಜ ಸೇವಕ ಸಂದೀಪ್.ಬಿ ರೆಡ್ಡಿ ತನಗೆ ಕ್ಯಾನ್ಸರ್ ಇರಬಹುದು ಎಂದು ವೈದ್ಯರು ಹೇಳಿದ್ದರು. ಆದರೆ ಬೈಯಾಪ್ಸಿ ಚಿಕಿತ್ಸೆಮುಕ್ತಾಯವಾಗುವರ ಗೂ ಎಲ್ಲಿ ಓಡಾಡುವಂತಿಲ್ಲ ಎಂದು ಎಚ್ವರಿಕೆಯೂ ನೀಡಿದ್ದ ವಿಷಯವನ್ನ ಯಾರಿಗೂ ಹೇಳದೆ ಇಂದು ತಮ್ಮ ಭಗತ್ ಸಿಂಗ್ ಚಾರಿಟಬಲ್ ಆಯೋಜಿಸಿದ್ದ ಸ್ಪಂದನಾ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಈ ವಿಚಾರವನ್ನ ನೆನೆದು ಸಂದೀಪ್ ರೆಡ್ಡಿ ಬಾವುಕರಾದರು. ಆ ಮಾತು ಕೇಳಿ ಇಡೀ ಸಭಾಭವನ ಒಂದು ಕ್ಷಣ ಮೌನವಾಗಿತ್ತು,ಆದ್ರೆ ಈ ಕಾರ್ಯಕ್ರಮದ ಹಿಂದಿನ ದಿನ ಕ್ಯಾನ್ಸರ್ ಇಲ್ಲ ಭಯಪಡಬೇಡಿ ಎಂಬ ಮಾಹಿತಿ ವೈದ್ಯರಿಂದ ಬಂದಿರುವುದನ್ನ ಬಹಿರಂಗ ಪಡಿಸಿದ ಸಂದೀಪ್ ರೆಡ್ಡಿ ಎಲ್ಲರೊಟ್ಟಿಗೆ ಖುಷಿ ವಿಷಯವನ್ನ ಹಂಚಿಕೊಂಡು ಎಲ್ಲರಲ್ಲೂ ಮನೆ ಮಾಡಿದ್ದ ಆತಂಕವನ್ನ ದೂರಮಾಡಿದರು. ಅಂತಹ ಗಮನ ಸೆಳೆಯುವ ವಿಷಯವನ್ನ ತಮ್ಮ ಅಧ್ಯಕ್ಷೀಯ ಬಾಷಣದ ವೇಳೆ ಸಂದೀಪ್ ರೆಡ್ಡಿ ಕ್ಷೇತ್ರದ ಜನರ ಮುಂದಿಟ್ಟಿದ್ರು.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪಿ.ರಾಜೀವ್ ಮಾತನಾಡಿ ಸಮಾಜ ಸೇವಕ ಸಂದೀಪ್ ರೆಡ್ಡಿ ತಮ್ಮ ಚಾರಿಟಬಲ್ ಟ್ರಸ್ಟ್ ಗೆ ಇಟ್ಟಿರುವ ಹೆಸರೆ ರೋಮಾಂಚಕ ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ನೇಣಿಗೇರುವ ಕೆಲವು ಕ್ಷಣಗಳ ಹಿಂದೆ ಲೆನಿನ್ ಜೀವನ ಚರಿತ್ರೆ ಒದುತಿರುತ್ತಾರೆ ಅವರಿಗೆ ಮಾಹಿತಿ ನೀಡಲು ಬಂದ ಪೊಲೀಸರನ್ನೂ ಗಮನಿಸದಷ್ಟು ಆಳವಾದ ಅಬ್ಯಾಸದಲ್ಲಿ ತೊಡಗಿರುತ್ತಾರೆ ಆ ರೀತಿಯ ಅಬ್ಯಾಸವನ್ನು ಮಾಡಿಸಿ ನಿಮ್ಮ ಭವಿಷ್ಯ ಕಟ್ಟಿಕೊಡಲು ಮುಂದಾಗಿರುವ ಸಂದೀಪ್ ರೆಡ್ಡಿ ಯವರ ಕಾಳಜಿಗೆ ನೀವೆಲ್ಲಾ ಸ್ಪಂದಿಸಬೇಕು ಚೆನ್ನಾಗಿ ಓದಿ ಮುಂದೊಂದು ದಿನ ನೀವೇ ಈ ರೀತಿಯ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಬೇಕು ಎಂದು ಸ್ಪೂರ್ತಿಯಮಾತುಗಳಾಡಿದರು
ಸ್ಪಂದನಾ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಮತ್ತು ಮಂಚೇನಹಳ್ಳಿ ತಾಲ್ಲೂಕಿನಿಂದ ಆಗಮಿಸಿದ್ದ ಸುಮಾರು ಎಂಟುನೂರು ವಿಧ್ಯಾರ್ಥಿಗಳಿಗೆ ಶೇಕಡಾ 60ರಿಂದ 90 ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ ನಗದು ಶೇಕಡಾ 90 ಕ್ಕೂ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ 10 ಸಾವಿರ ನಗದು ಮತ್ತು ಪ್ರಮಾಣ ಪತ್ರ ವಿತರಿಸಿದರು.
ಸ್ಪಂದನ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯರೆಡ್ಡಿ,ರೈತ ಜನಸೇನಾ ಸಂಘಟನೆ ಅಧ್ಯಕ್ಷೆ ಸುಶ್ಮಾ ಶ್ರೀನಿವಾಸ್,ದಲಿತ ಸಂಘಟನೆಮುಖಂಡರುಗಳಾದ ಸುಧಾವೆಂಕಟೇಶ್,ಕೆ.ಸಿ. ರಾಜಾಕಾಂತ್,ಬಾಲಕುಂಟಹಳ್ಳಿ ಗಂಗಾದರ್,ವೆಂಕಟರಮಣಪ್ಪ ಕರವೇ ರಾಜ್ಯ ಉಪಾದ್ಯಕ್ಷ ತಿಪ್ಪೇನಹಳ್ಳಿ ನಾರಾಯಣ
ಸ್ವಾಮಿ,ತ್ರಿಬಲ್ ಆರ್ ಮೂವಿ ಕನ್ನಡ ತರ್ಜುಮೆ ಬರಹಗಾರ ವರದರಾಜ್,ಹರೀಶ್ ರೆಡ್ಡಿ,ಸುಹಾಸ್,ಬಿ.ವಿ.ಆನಂದ್, ರಘು ಮತ್ತು ಇತರರು ಇದ್ದರು.
ವರದಿ: ಮುಬಷೀರ್ ಅಹಮದ್