
ಬೆಂಗಳೂರಿನಲ್ಲಿ ಚಾರಿತ್ರಿಕ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಗಾಗಿ ಭಾರತೀಯ ಸಂತ ಮಹಾ ಪರಿಷದ್ (ಬಿ ಎಸ್ ಎಂ ಪಿ) ಉದ್ಘಾಟನೆ
ಪ್ರಪಂಚದಾದ್ಯಂತದ ಭಾರತೀಯ ಸಂಸ್ಕೃತಿಗೆ ಸೇರಿದ ಎಲ್ಲಾ ಸಮಾನ ಮನಸ್ಕ ಪೂಜ್ಯ ಸಂತರ ಸುಸಂಘಟಿತ ಒಕ್ಕೂಟ
ಬೆಂಗಳೂರು, 20ನೇ ಜೂನ್, 2025 – ಬೆಂಗಳೂರಿನಲ್ಲಿ ಇಂದು ಚಾರಿತ್ರಿಕ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಗಾಗಿ ಭಾರತೀಯ ಸಂತ ಮಹಾ ಪರಿಷದ್ (BSMP) ಉದ್ಘಾಟನೆ ಕಾರ್ಯಕ್ರಮ ನೆರವೇರಿತು. ಭಾರತದಾದ್ಯಂತ ಇರುವ ಸಂತರ ಸಮಾಗಮ ಭಾರತೀಯ ಸಂಸ್ಕೃತಿಯನ್ನು ಸಾರುವಂತಿತ್ತು.
ಭಾರತೀಯ ಸಂತ ಮಹಾ ಪರಿಷತ್ (BSMP) ಎಂಬುದು ಭಾರತೀಯ ಸಂಸ್ಕೃತಿಗೆ ಸೇರಿದ ಪ್ರಪಂಚದಾದ್ಯಂತದ ಯಾವುದೇ ನಂಬಿಕೆ, ಪಂಥ, ತತ್ವಶಾಸ್ತ್ರ, ಸಂಪ್ರದಾಯ ಮತ್ತು ಸಮುದಾಯವನ್ನು ಪ್ರತಿನಿಧಿಸುವ ಎಲ್ಲಾ ಸಮಾನ ಮನಸ್ಸಿನ ಪೂಜ್ಯ ಸಂತರ ಸಂಘಟಿತ ಒಕ್ಕೂಟವಾಗಿದೆ.
ಸಾವಿರಾರು ವರ್ಷಗಳ ಭವ್ಯ ಇತಿಹಾಸ ಮತ್ತು ಶ್ರೇಷ್ಠ ಪರಂಪರೆಯನ್ನು ಹೊಂದಿರುವ ನಮ್ಮ ಭಾರತೀಯ ಸಂಸ್ಕೃತಿಯು ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುತ್ತದೆ. ನಮ್ಮ ಭಾರತೀಯ ಸಂಸ್ಕೃತಿಯು ಇಡೀ ಜಗತ್ತಿನಲ್ಲಿ ಧಾರ್ಮಿಕ ವೈವಿಧ್ಯತೆಯನ್ನು ಅತ್ಯಂತ ಸ್ವಾಭಾವಿಕವಾಗಿ ಮತ್ತು ಸಂಪೂರ್ಣವಾಗಿ ಸ್ವೀಕರಿಸುವ ಏಕೈಕ ಸಂಸ್ಕೃತವಾಗಿದೆ. ಹೀಗಾಗಿ, ಅತ್ಯಂತ ವಿಶಾಲ ದೃಷ್ಟಿಕೋನವನ್ನು ಹೊಂದಿರುವ ನಮ್ಮ ಭಾರತೀಯ ಸಂಸ್ಕೃತಿಯು ವಿಶ್ವ ಶಾಂತಿ ಮತ್ತು ಜಾಗತಿಕ ಸಾಮರಸ್ಯದ ಮೂಲ ಅಡಿಪಾಯವಾಗಿದೆ.
ಈ ಇಡೀ ಪ್ರಪಂಚದ ಸಂತೋಷ, ಸಾಮರಸ್ಯ, ಶಾಂತಿ ಮತ್ತು ಸಮೃದ್ಧಿಗಾಗಿ ಇಂತಹ ಮಹಾನ್ ಭಾರತೀಯ ಸಂಸ್ಕೃತಿಯನ್ನು ಬಹಳ ವ್ಯವಸ್ಥಿತ ರೀತಿಯಲ್ಲಿ ಬಲಪಡಿಸುವ ಉದಾತ್ತ ಉದ್ದೇಶದಿಂದ, ಪ್ರಪಂಚದಾದ್ಯಂತ ಭಾರತೀಯ ಸಂಸ್ಕೃತಿಗೆ ಸೇರಿದ ಎಲ್ಲಾ ಸಮಾನ ಮನಸ್ಸಿನ ಪೂಜ್ಯ ಸಂತರು ಪೂರ್ಣ ಹೃದಯದಿಂದ ಒಟ್ಟುಗೂಡಿ ಬೆಂಗಳೂರಿನಲ್ಲಿ ಈ “ಭಾರತೀಯ ಸಂತ ಮಹಾ ಪರಿಷತ್” ಅನ್ನು ಪ್ರಾರಂಭಿಸಿರುತ್ತಾರೆ.
ಬಿಎಸ್ಎಂಪಿಯ ಪ್ರಮುಖ ಉದ್ದೇಶಗಳು
ವಿಶ್ವ ಶಾಂತಿ ಮತ್ತು ಜಾಗತಿಕ ಸಾಮರಸ್ಯಕ್ಕಾಗಿ ಭಾರತೀಯ ಸಂಸ್ಕೃತಿಯನ್ನು ಅದರ ಎಲ್ಲಾ ರೂಪಗಳಲ್ಲಿ ಬಹಳ ವ್ಯವಸ್ಥಿತ ರೀತಿಯಲ್ಲಿ ಬಲಪಡಿಸುವುದು.
ಭಾರತೀಯ ಸಂಸ್ಕೃತಿಗೆ ಸೇರಿದ ಎಲ್ಲರೂ ಯಾರ ಭಾವನೆಗಳಿಗೂ ಕಿಂಚಿತ್ತೂ ನೋವುಂಟು ಮಾಡದೆ, ಸಾಮಾನ್ಯ ಚೌಕಟ್ಟಿನಲ್ಲಿ ಪೂರ್ಣ ಹೃದಯದಿಂದ ಒಟ್ಟಿಗೆ ಬದುಕುವಂತೆ ಮಾಡುವುದು.
ಸಾರ್ವತ್ರಿಕ ಶಾಂತಿಗಾಗಿ ಉತ್ತಮ ಸುಸಂಸ್ಕೃತ ಮತ್ತು ಉನ್ನತ ಮೌಲ್ಯಯುತ ಸಮಾಜವನ್ನು ನಿರ್ಮಿಸಲು ಭಾರತೀಯ ಸಂಸ್ಕೃತಿಗೆ ಸೇರಿದ ಪ್ರತಿಯೊಬ್ಬರ ನಂಬಿಕೆ ಮತ್ತು ಭಕ್ತಿಯನ್ನು ಮತ್ತಷ್ಟು ಬಲಪಡಿಸುವುದು.
ಭಾರತೀಯ ಸಂಸ್ಕೃತಿಗೆ ಸೇರಿದ ನಮ್ಮ ಎಲ್ಲಾ ಮಕ್ಕಳಿಗೆ ಆಧ್ಯಾತ್ಮಿಕತೆಯ ಆಧಾರದ ಮೇಲೆ ವೈಜ್ಞಾನಿಕ ಚಿಂತನೆಗಳೊಂದಿಗೆ ‘ಭಾರತೀಯ ಸಂಸ್ಕಾರ ಶಿಕ್ಷಣ’ವನ್ನು ಒದಗಿಸುವುದು.