


ಬೆಂಗಳೂರು. ದಿನಾಂಕ. 2025 ಜೂನ್ 20 ರಂದು, ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾ ರೆಡ್ಡಿ ಅವರು, ‘ವೇಗದೂತ (Express ಸೇವೆಗಳು), “ಘಾಟಿ ಈಶ ಫೌಂಡೇಷನ್” ಪ್ಯಾಕೇಜ್ ಪ್ರವಾಸದಡಿಯಲ್ಲಿ ಪರಿಚಯಿಸಲಾಗುತ್ತಿರುವ ನೂತನ ಮಾರ್ಗದ ಲೋಕಾರ್ಪಣೆ ಚಾಲನೆ ನೀಡಿ, ಮೃತಾವಲಂಬಿತರಿಗೆ ರೂ. 1.5 ಕೋಟಿ ವಿಮಾ ಪರಿಹಾರ ಮೊತ್ತದ ಚೆಕ್ಗ ವಿತರಿಸಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಮಚಂದ್ರನ್ ಆರ್., ಭಾ.ಆ.ಸೇ; ಶ್ರೀ ಅಕ್ರಂ ಪಾಷ, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಕರಾರಸಾನಿಗಮ, ಶ್ರೀ ಅಬ್ದುಲ್ ಅಹದ್, ಭಾ.ಪೋ.ಸೇ, ನಿರ್ದೇಶಕರು (ಭ&ಜಾ), ಶ್ರೀಮತಿ ಶಿಲ್ಪಾ.ಎಂ, ಭಾ.ಆ.ಸೇ, ನಿರ್ದೇಶಕರು (ಮಾ.ತಂ), ಶ್ರೀ ಕೆ.ಕಾಳಿ, ಉಪ ಮಹಾಪ್ರಬಂಧಕರು, ವೃತ್ತ ಕಚೇರಿ, ಕೆನರಾ ಬ್ಯಾಂಕ್ ಮತ್ತು ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರದಲ್ಲಿ ಭಾಗವಹಿಸಿದ ಎಲ್ಲಾ ಪತ್ರಕರ್ತರಿಗೆ ಮತ್ತು ಮಾಧ್ಯಮ ಮಿತ್ರರಿಗೆ ಧನ್ಯವಾದಗಳು
ವಂದನೆಗಳೊಂದಿಗೆ,
ಸುನೀತಾ.ಜೆ,
ಸಾರ್ವಜನಿಕ ಸಂಪರ್ಕಾಧಿಕಾರಿ.