






ಬ್ಯಾಟರಾಯನಪುರ : ಭಾರತದ ಪ್ರಾಚೀನ ಆರೋಗ್ಯ ವಿಜ್ಞಾನ ಎಂದೇ ಪರಿಗಣಿಸಲ್ಪಡುವ ಯೋಗಕ್ಕೆ ಜಾಗತಿಕ ಮಾನ್ಯತೆ ತಂದುಕೊಟ್ಟ ಕೋರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ ಅಭಿಪ್ರಾಯಪಟ್ಟರು.
ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗ ದೊಂದಿಗೆ ಭಾನುವಾರ ಬೆಟ್ಟಹಲಸೂರು ಗ್ರಾಮದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಯೋಗ ನಮ್ಮ ಪ್ರಾಚೀನ ಋಷಿಮುನಿ ಗಳಿಂದ ಆವಿಷ್ಕಾರಗೊಂಡಿರುವ ಅತ್ಯದ್ಭುತವಾದ ಆರೋಗ್ಯ, ವೈದ್ಯಕೀಯ ಪದ್ದತಿ ಯಾಗಿದೆ. ನಮ್ಮ ನಿತ್ಯದ ಬದುಕಿನಲ್ಲಿ ಯೋಗಾಭ್ಯಾಸ ವನ್ನು ರೂಢಿಸಿಕೊಂಡರೆ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಜೊತೆಗೆ ಮನಃಶಾಂತಿ ಪಡೆಯಬಹುದು. ಇಂತಹ ಅನುಪಮ ಆರೋಗ್ಯ ವಿಜ್ಞಾನಕ್ಕೆ ಜಾಗತಿಕ ಮಾನ್ಯತೆ ತಂದುಕೊಟ್ಟ ಕೀರ್ತಿ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಯೋಗವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ತರವಾದ ಜವಾಬ್ದಾರಿ ಭಾರತೀಯರಾದ ನಮ್ಮೆಲ್ಲರ ಮೇಲಿದೆ ಎಂದರು.
ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಹನುಮಂತುಗೌಡ ಮಾತನಾಡಿ ‘ಜೂನ್ 21 ಅತ್ಯಂತ ಸುದೀರ್ಘವಾದ ದಿನವಾಗಿದ್ದು, ಸಾಮರಸ್ಯ, ಒಗ್ಗಟ್ಟು ಹಾಗೂ ಶಕ್ತಿಯನ್ನು ಸೂಚಿಸುತ್ತದೆ, ಇದರ ದ್ಯೋತಕವಾಗಿ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲಾಗುತ್ತದೆ. ಇತರ ಆಧುನಿಕ ವಿಧಾನಗಳಿಗಿಂತ ದೇಹ ಮತ್ತು ಮನಸ್ಸಿನ ಸಂತುಲತೆಯನ್ನು ಕಾಪಾಡುವಲ್ಲಿ ಯೋಗ ಹೆಚ್ಚು ಪರಿಣಾಮಕಾರಿ ಯಾದ ಸಾಧನವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಬಿ.ನಾಗರಾಜ್ ಬಾಬು, ಬೆಟ್ಟಹಲಸೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಬಿ.ಎಸ್.ಅನಿಲ್ ಕುಮಾರ್, ಬ್ಯಾಟರಾಯನಪುರ ಗ್ರಾ.ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬೇಗೂರು ಮಹೇಶ್, ಬಿ.ಕೆ.ಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಪಿ.ಜನಾರ್ದನ್, ಬಿಜೆಪಿ ಮುಖಂಡರಾದ ರವಿ, ಬಿ.ನಾರಾಯಣ, ಬಿ.ಎಸ್. ಸುರೇಶ್, ಬೆಟ್ಟಹಲಸೂರು ಪ್ರಶಾಂತ್, ಕುದುರಗೆರೆ ಮುನಿರಾಜು, ಶಾಂಭವಿ ರವಿಕುಮಾರ್, ನರೇಂದ್ರ ಬಾಬು, ಬಾಗಲೂರು ನವೀನ್, ಮದನ್, ಪ್ರತಾಪ್ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಹಾಗೂ ಯೋಗಾಭ್ಯಾಸಿಗಳಿದ್ದರು.