ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಿಶ್ವಯೋಗ ದಿನಾಚರಣೆ

ಜೀವನ ಶೈಲಿ ಬದಲಾವಣೆಗೆ ಯೋಗಾಬ್ಯಾಸ ಮಾಡಿಕೊಳ್ಳಿ:
ನೇರಳೆ ವೀರಭದ್ರಯ್ಯ ಭವಾನಿ

ಚಿಕ್ಕಬಳ್ಳಾಪುರ: ಜೀವನ ದೀರ್ಘಕಾಲ
ಚೆನ್ನಾಗಿರ ಬೇಕೆಂದರೆ ಆರೋಗ್ಯ ಮುಖ್ಯ, ಆರೋಗ್ಯ ಸುಧಾಕರಣೆಗೆ ದಿನನಿತ್ಯ ಯೋಗಾಬ್ಯಾಸ ಮಾಡುವುದನ್ನರೂಡಿಸಿಕೊಳ್ಳಬೇಕಿದೆ. ಒತ್ತಡದ ಜೀವನಕ್ಕೆ ಯೋಗ ಉತ್ತಮಔಷದಿವಾಗಿದೆ ವಕೀಲ ರಾಮಚಂದ್ರರೆಡ್ದಿ ಹೇಳಿಕೊಟ್ಟ ಯೋಗಾಬ್ಯಾಸ ನಮಗೂ ಉಪಯೋಗವಾಗಿದೆ ನ್ಯಾಯಾದೀಶರು ವಕೀಲರು ಮತ್ತು ಸಾರ್ವಜನಿಕರು ನಿತ್ಯ ಯೋಗಾಬ್ಯಾಸ ರೂಡಿಸಿಕೊಳ್ಳಿ ಎಂದು ಜಿಲ್ಲಾ ಸತ್ರ ನ್ಯಾಯಾದೀಶೆ ನೇರಳೆ ವೀರಭದ್ರಯ್ಯ ಭವಾನಿ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಂಗ ಇಲಾಖೆ, ಕಾನೂನು ಸೇವೆಗಳ ಪ್ರಾದಿಕಾರ ಹಾಗೂ ಚಿಕ್ಕಬಳ್ಳಾಪುರ ವಕೀಲರ ಸಂಘದಿಂದ ವಿಶ್ವಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ 7 ಗಂಟೆಗೆ ಯೋಗಗುರು ರಾಮಚಂದ್ರರೆಡ್ಡಿ ಯೋಗಾಸನ ಪ್ರಾರಂಬಿಸಿದರು. ಜಿಲ್ಲಾ ಸತ್ರನ್ಯಾಯಾದೀಶೆ ನೇರಳೆ ವೀರಭದ್ರಯ್ಯ ಭವಾನಿ ಹಾಗೂ ಜಿಲ್ಲಾ ನ್ಯಾಯಾಲಯದ ನ್ಯಾಯಾದೀಶರೊಂದಿಗೆ ಪ್ರಾರಂಬಿಸಿದ ಯೋಗದಲ್ಲಿ ಹಲವು ಆಯಾಮಗಳ ಆಸನಗಳನ್ನ ಪ್ರದರ್ಶಿಸಿದರು. ಯೋಗಾಬ್ಯಾಸದ ನಂತರ ಮಾತನಾಡಿದ ಜಿಲ್ಲಾ ಸತ್ರ ನ್ಯಾಯದೀಶೆ ನೇರಳೆ ವೀರಭದ್ರಯ್ಯ ಭವಾನಿ ಅವರು ಜೀವನ ಸುಖಮಯವಾಗಿ ಸಾಗಬೇಕಾದ್ರೆ ದೇಹಾರೋಗ್ಯ ಚೆನ್ನಾಗಿರಬೇಕು.ದೇಹಾರೋಗ್ಯ ಚೆನ್ನಾಗಿರಬೇಕು ಅಂದರೆ ನಿತ್ಯ ಯೋಗಾಬ್ಯಾಸ ರೂಡಿಸಿಕೊಳ್ಳ
ಬೇಕು ಇದರಿಂದ ಒತ್ತಡಮುಕ್ತ ಜೀವನಕ್ಕೆ‌ಮುಕ್ತಿ ಸಿಗುತ್ತದೆ. ನ್ಯಾಯಾದೀಶರಾಗಲಿ ವಕೀಲರಾಗಲಿ ತಮಗೆ ಶಾಂತಿ ಸಮಾಧಾನಕ್ಕಾಗಿ ಯೋಗ ಮಾಡಿ ಸಾರ್ವಜನಿಕರೂ ಸಹ ಯೋಗವನ್ನ ಜೀವನದ ಬಾಗವಾಗಿ ರೂಡಿಸಿಕೊಳ್ಳಿ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ವಿ. ಅಭಿಲಾಷ್ ಮಾತನಾಡಿ ದೇಶದ ಸಂಸ್ಕೃತಿಯನ್ನು ಉಳಿಸಬೇಕು ಯೋಗವು ನಮ್ಮ ಸಂಸ್ಕೃತಿಯಾಗಿದ್ದು ಪ್ರತಿ ದಿನ ಯೋಗಾಸನ ಮಾಡುವ ಮೂಲಕ ಆರೋಗ್ಯಕರ ಜೀವನ ಸಾಗಿಸಬಹುದಾಗಿದ್ದು ಯೋಗವನ್ನ ಪ್ರತಿ ದಿನ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರಾದ ಕಾಂತರಾಜ್,ಶ್ರೀಧರ್, ಶ್ರೀಮತಿ ಅನಿತಾ,ಪ್ರಧಾನ ಕೌಟುಂಬಿಕ
ನ್ಯಾಯಾಧೀಶರಾದ ಶ್ರೀಮತಿ ಲತಾ ಕುಮಾರಿ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದಉಮೇಶ್,
ಒಂದನೇ ಹೆಚ್ಚುವರಿ ನ್ಯಾಯಾಧೀಶರಾದ ಶ್ರೀಮತಿ ಭಾರತಿ,ಎರಡನೇ ಹೆಚ್ಚುವರಿ ನ್ಯಾಯಾಧೀಶರಾದ ಪ್ರೇಮ್ ಕುಮಾರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಿಲ್ಪಿ.ಬಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಮಾನಸ ಶೇಖರ್, ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಶ್ರುತಿ, ಎರಡನೇ ಹೆಚ್ಚುವರಿ ನ್ಯಾಯಾಧೀಶರಾದ ಶ್ರೀಮತಿ ವರ್ಣಿಕ, ಚಿಕ್ಕಬಳ್ಳಾಪುರ ವಕೀಲರ ಸಂಘದ ಉಪಾಧ್ಯಕ್ಷ ಮುನಿರಾಜ್, ನಿರ್ದೇಶಕರಾದ ರಾಘವೇಂದ್ರ,ನರಸಿಂಹಮೂರ್ತಿ,ಹಿರಿಯ ವಕೀಲರದ ವೆಂಕಟೇಶ್,ಕೇಶವ,ನಾರಾಯಣ ಮೂರ್ತಿ ಹಾಗೂ ಯುವ ವಕೀಲರು ಮತ್ತು ನ್ಯಾಯಾಲಯದ ಎಲ್ಲ ಸಿಬ್ಬಂದಿ ವರ್ಗದವರು ಸೇರಿದಂತೆ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವರದಿ: ಮುಬಷೀರ್ ಅಹಮದ್

Leave a Reply

Your email address will not be published. Required fields are marked *