






ಆರ್.ಸಿ.ಬಿ. ಗೆಲುವಿನ ಸಂಭ್ರಮಾಚರಣೆಯ ಕಾಲ್ತುಳಿತಕ್ಕೆ ಬಲಿಯಾದ ದಿವ್ಯಾಂಶು ಮನೆಗೆ ಶಾಸಕ ವಿಶ್ವನಾಥ್ ಭೇಟಿ :
ಯಲಹಂಕ : ಆರ್.ಸಿ.ಬಿ. ಗೆಲುವಿನ ಸಂಭ್ರಮಾಚರಣೆಯ ಕಾಲ್ತುಳಿತಕ್ಕೆ ಬಲಿಯಾದ ಯಲಹಂಕ ವಾರ್ಡ್ 2ರ ನಿವಾಸಿ ಲಕ್ಷ್ಮೀನಾರಾಯಣ ಅವರ ಮೊಮ್ಮಗಳು ದಿವ್ಯಾಂಶು ಅವರ ಮನೆಗೆ ಶಾಸಕ ಎಸ್ ಆರ್ ವಿಶ್ವನಾಥ್ ಸೋಮವಾರ ಭೇಟಿ ನೀಡಿ, ಮೃತ ದಿವ್ಯಾಂಶು ಪೋ಼ಷಕರಾದ ಅಶ್ವಿನಿ ಯು.ಎಲ್., ಶಿವಕುಮಾರ್ ಬಿ. ಅವರಿಗೆ ಸಾಂತ್ವನ ಹೇಳಿ ಸಂತೈಸಿದರು.
ಇದೇ ಸಂದರ್ಭದಲ್ಲಿ ನೇಕಾರರ ಸಂಘದ ಜಿಲ್ಲಾ ಸಹ ಸಂಚಾಲಕ ಲಕ್ಷ್ಮೀನಾರಾಯಣ ಯು., ತೊಗಟ ವೀರ ಕ್ಷತ್ರಿಯ ಸಂಘದ ಕಾರ್ಯಾಧ್ಯಕ್ಷರು, ಯಲಹಂಕ ನಗರ ಮಂಡಲ ಬಿಜೆಪಿ ಉಪಾಧ್ಯಕ್ಷ ಎ.ಎಸ್.ರಾಜ, ಯಲಹಂಕ ನಗರ ಮಂಡಲ ಬಿಜೆಪಿ ನೇಕಾರರ ಪ್ರಕೋಷ್ಠದ ಸಂಚಾಲಕ ಜಿ.ಈಶ್ವರಪ್ಪ, ಬಿಜೆಪಿ ಮುಖಂಡರಾದ ಬಿ.ಕೇಶವ, ಬಿ.ಹರಿನಾಥ್, ಎ.ಆರ್.ಸುನಿಲ್ ಕುಮಾರ್, ಧನಂಜಯ ಸೇರಿದಂತೆ ಇನ್ನಿತರರಿದ್ದರು.