

ನಾಗರಿಕ ಜವಾಬ್ದಾರಿಯನ್ನು ಬೀದಿ ನಾಟಕದೊಂದಿಗೆ ಮುಖ್ಯ ವೇದಿಕೆಗೆ ತಂದು ಸ್ವಾತಂತ್ರ್ಯ ದಿನಾಚರಣೆಯನ್ನುಆಚರಿಸಿದ ನಾಲೆಡ್ಜಿಎಂ ಅಕಾಡೆಮಿ
ಬೆಂಗಳೂರು, 16 ಆಗಸ್ಟ್ 2025: ಪ್ರತಿಷ್ಠಿತ ಜೈನ್ ಗ್ರೂಪ್ನಿಂದ ಬೆಂಬಲಿತವಾದ ಅಧಿಕೃತ ಐಬಿ ವರ್ಲ್ಡ್ ಶಾಲೆಯಾದ ನಾಲೆಡ್ಜಿಎಂ ಅಕಾಡೆಮಿ, 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ‘ಬದಲಾವಣೆಯ ಭಾರತ’ ಎಂಬ ವಿಶಿಷ್ಟ ಮತ್ತು ಚಿಂತನಶೀಲ ಬೀದಿ ನಾಟಕದೊಂದಿಗೆ ಆಚರಿಸಿತು.
ಜಯನಗರ ಆವರಣದಲ್ಲಿ ಧ್ವಜಾರೋಹಣ ಸಮಾರಂಭದ ತದನಂತರ ಜೆಎಸ್ಎಸ್ ವೃತ್ತ ಮತ್ತು ಜಯನಗರ ಪೊಲೀಸ್ ಠಾಣೆ ವೃತ್ತದಲ್ಲಿ ಎರಡು ಸಾರ್ವಜನಿಕ ಪ್ರದರ್ಶನಗಳು ನಡೆದವು. ಪ್ರತಿಯೊಂದು ಸ್ಥಳವು ಸ್ಥಳೀಯ ನಿವಾಸಿಗಳು, ದಾರಿಹೋಕರು ಮತ್ತು ಸಮುದಾಯದ ಸದಸ್ಯರನ್ನು ಆಕರ್ಷಿಸಿತು.
‘ಜವಾಬ್ದಾರಿಯೇ ಸ್ವಾತಂತ್ರ್ಯ’ ಎಂಬ ವಿಷಯವನ್ನು ಕೇಂದ್ರೀಕರಿಸಿ, ಬದಲಾವಣೆಯ ಭಾರತವು ಇಂದಿನ ಸಂದರ್ಭದಲ್ಲಿ ನಿಜವಾದ ಸ್ವಾತಂತ್ರ್ಯ ಎಂದರೆ ಏನು ಎಂದು ಪ್ರತಿಬಿಂಬಿಸಲು ಪ್ರೇಕ್ಷಕರಿಗೆ ಸವಾಲು ಹಾಕಿತು. ಐತಿಹಾಸಿಕ ಸ್ವಾತಂತ್ರ್ಯ ಹೋರಾಟಗಳ ಪರಿಚಿತ ನಿರೂಪಣೆಗಳನ್ನು ಪುನರ್ವಿಮರ್ಶಿಸುವ ಬದಲು, ನಾಟಕವು ತನ್ನ ಗಮನವನ್ನು ಒಳಮುಖವಾಗಿ ಬದಲಾಯಿಸಿತಲ್ಲದೇ, ಆಧುನಿಕ ನಾಗರಿಕರು ಸ್ವಾತಂತ್ರ್ಯದೊಂದಿಗೆ ಬರುವ ಜವಾಬ್ದಾರಿಗಳನ್ನು ಎಷ್ಟರ ಮಟ್ಟಿಗೆ ಪೂರೈಸಿದ್ದಾರೆ ಎಂದು ಪ್ರಶ್ನಿಸಿತು.
ಹಾಸ್ಯ, ವಿಡಂಬನೆ ಮತ್ತು ಶಾಂತ ಪ್ರತಿಬಿಂಬದ ಕ್ಷಣಗಳ ಮೂಲಕ, ನಾಟಕವು ಭಾರತ ಮಾತೆಯನ್ನು ಇನ್ನೂ ವಸಾಹತುಶಾಹಿ ಸರಪಳಿಗಳಿಂದಲ್ಲ, ನಿರಾಸಕ್ತಿ, ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆ ಮತ್ತು ಕ್ಷೀಣಿಸುತ್ತಿರುವ ನಾಗರಿಕ ಕರ್ತವ್ಯ ಪ್ರಜ್ಞೆಯಿಂದ ಬಂಧಿಸಲಾಗಿದೆ ಎಂದು ಚಿತ್ರಿಸಿತು. ಕೇವಲ 10 ನಿಮಿಷಗಳಲ್ಲಿ, ಪ್ರದರ್ಶಕರು ನಿರಂತರ ಡಿಜಿಟಲ್ ಸಂಪರ್ಕದ ವಿರೋಧಾಭಾಸವನ್ನು ಎತ್ತಿ ತೋರಿಸಿದರು. ಅದರ ಜೊತೆಗೆ ಪ್ರೇಕ್ಷಕರು ಸಮುದಾಯದ ಯೋಗಕ್ಷೇಮದ ಕಡೆಗೆ ಸಣ್ಣದಾದರೂ ಸರಿಯೆ, ಆದರೆ ಅರ್ಥಪೂರ್ಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಪ್ರದರ್ಶನದ ಕುರಿತು ಮಾತನಾಡಿದ ಜೈನ್ ಗ್ರೂಪ್ನ ಸ್ಥಾಪಕ ಅಧ್ಯಕ್ಷ ಮತ್ತು ನಾಲೆಡ್ಜಿಎಂ ಅಕಾಡೆಮಿ ಸಂಸ್ಥಾಪಕರಾದ ಡಾ. ಚೆನ್ರಾಜ್ ರಾಯ್ಚಂದ್, “ನಮ್ಮ ಕ್ರಿಯೆಗಳಿಗೆ ನಾವು ಜವಾಬ್ದಾರಿಯನ್ನು ತೆಗೆದುಕೊಂಡಾಗ ನಿಜವಾದ ಸ್ವಾತಂತ್ರ್ಯ ಬರುತ್ತದೆ. ಅದು ನಾವು ಏನನ್ನು ಪಡೆಯುತ್ತೇವೆ ಎಂಬುದರ ಬಗ್ಗೆ ಮಾತ್ರವಲ್ಲ, ನಮ್ಮ ಸಮುದಾಯ ಮತ್ತು ದೇಶಕ್ಕೆ ನಾವು ಏನು ನೀಡುತ್ತೇವೆ ಎಂಬುದರ ಬಗ್ಗೆಯೂ ಅವಲಂಬಿತವಾಗಿರುತ್ತದೆ” ಎಂದು ಹೇಳಿದರು.
ನಾಲೆಡ್ಜಿಎಂ ಅಕಾಡೆಮಿ ಸಹ ಸಂಸ್ಥಾಪಕರಾದ ಅಪರ್ಣಾ ಪ್ರಸಾದ್ ರವರು ಮಾತನಾಡಿ, “ಸ್ವಾತಂತ್ರ್ಯವು ಕೇವಲ ಆಚರಿಸಬೇಕಾದ ಪರಂಪರೆಯಲ್ಲ; ಅದನ್ನು ಎತ್ತಿಹಿಡಿಯಬೇಕಾದುದು ನಮ್ಮ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂದು ನಮ್ಮ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಸಂದೇಶವನ್ನು ವೇದಿಕೆಯಿಂದ ಅಲ್ಲ, ಬೀದಿನಾಟಕಗಳಿಂದ ತಲುಪಿಸಲು ಪ್ರಯತ್ನಿಸಿದ್ದಾರೆ. – ಅದು ಅಲ್ಲಿ ನೆರೆದಿದ್ದ ಪ್ರೇಕ್ಷಕರ ಮನದಲ್ಲಿ ಆತ್ಮಾವಲೋಕನವನ್ನು ಹುಟ್ಟುಹಾಕುವಲ್ಲಿ ಸಫಲವಾಗಿದೆ” ಎಂದರು.
ಬೀದಿ ನಾಟಕದ ತೆರೆದ ವಾತಾವರಣ ಮತ್ತು ಸಂವಾದಾತ್ಮಕ ಶೈಲಿಯು ಪ್ರೇಕ್ಷಕರಿಗೆ ವೈಯಕ್ತಿಕ ಮಟ್ಟದಲ್ಲಿ ಸಂದೇಶದೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಮಾಡಿಕೊಟ್ಟಿತಲ್ಲದೇ, ಸಾರ್ವಜನಿಕರು, ನಾಲೆಡ್ಜಿಎಂ ಅಕಾಡೆಮಿಯ ಈ ವಿಶಿಷ್ಟ ಮನರಂಜನೆ ಮತ್ತು ಸಾಮಾಜಿಕ ವ್ಯಾಖ್ಯಾನದ ಮಿಶ್ರಣಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಶಿಕ್ಷಣವನ್ನು ಸಮಾಜದಲ್ಲಿ ಅರ್ಥಪೂರ್ಣ ಭಾಗವಹಿಸುವಿಕೆಗೆ ಒಂದು ಮಾರ್ಗವಾಗಿ ನೋಡುವ ಚಿಂತನಶೀಲ, ಸಾಮಾಜಿಕ ಪ್ರಜ್ಞೆಯುಳ್ಳ ವ್ಯಕ್ತಿಗಳನ್ನು ಅಭಿವೃದ್ಧಿಪಡಿಸುವ ನಾಲೆಡ್ಜಿಎಂ ಅಕಾಡೆಮಿಯ ಬದ್ಧತೆಯನ್ನು ‘ಬದಲಾವಣೆಯ ಭಾರತ’ ಪುನರುಚ್ಚರಿಸಿಗಿತು. ಜೊತೆಗೆ, ಸ್ವಾತಂತ್ರ್ಯ ದಿನಾಚರಣೆಯು ಕೇವಲ ಭೂತಕಾಲವನ್ನು ಗೌರವಿಸುವುದಲ್ಲ, ಜವಾಬ್ದಾರಿ, ಸಹಾನುಭೂತಿ ಮತ್ತು ಸಕ್ರಿಯ ಪೌರತ್ವವನ್ನು ಆಧರಿಸಿ ವರ್ತಮಾನ ಮತ್ತು ಭವಿಷ್ಯವನ್ನು ರೂಪಿಸುವುದಾಗಿದೆ ಎಂಬುದನ್ನು ನೆನಪಿಸಿತು.
ನಾಲೆಡ್ಜಿಎಂ ಅಕಾಡೆಮಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಭೇಟಿ ನೀಡಿ: www.knowledgeumacademy.in
