“ಐ ಲವ್ ಮೊಹಮ್ಮದ್” ನೆಪದಲ್ಲಿ ಕಾನೂನು ಸುವ್ಯವಸ್ಥೆ ಹಾಳುಮಾಡುವ ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು – ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಮನವಿ

          ದಿನಾಂಕ: 10.10.2025 ಬೆಂಗಳೂರು      : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ “ಐ ಲವ್ ಮೊಹಮ್ಮದ್” ಎಂಬ ಹೆಸರಿನಲ್ಲಿ ಕೆಲವು ಮತಾಂಧರು ನಡೆಸುತ್ತಿರುವ ಚಟುವಟಿಕೆಗಳಿಂದ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಮತ್ತು ಹಿಂದೂ ಸಮಾಜದ ಮೇಲೆ ಮಾರಣಾಂತಿಕ ದಾಳಿ ನಡೆಯುತ್ತಿದೆ. ಈ ಕುರಿತು ಇಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ಕರ್ನಾಟಕ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಮೋಹನ್ ಗೌಡ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶ್ರೀ ಸುರೇಶ್ ಆರ್, ಶ್ರೀರಾಮ ಸೇನೆಯ ಶ್ರೀ ಸುಂದ್ರೇಶ ನರ್ಗಲ್, ಆಜಾದ್ ಬ್ರಿಗೇಡ್ನ ಶ್ರೀ ಆನಂದಕುಮಾರ್ ಎಂ.ಪಿ., ವಕೀಲರಾದ ಸೌ. ಶಕುಂತಲಾ ಶೆಟ್ಟಿ, ರಾಷ್ಟ್ರೀಯ ಹಿಂದೂ ಪರಿಷತ್ನ ಶ್ರೀ ಸುರೇಶ್ ಗೌಡ, ಹಿಂದೂ ಹ್ಯೂಮನ್ ರೈಟ್ಸ್ ಸಂಘಟನೆಯ ಶ್ರೀ ಮಲ್ಲಿಕಾರ್ಜುನ ರಾಜು, ದುರ್ಗಾ ಸೇನೆಯ ಶ್ರೀಮತಿ ಸರಸ್ವತಿ ಪ್ರವೀಣ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳ ನಾಯಕರು ಉಪಸ್ಥಿತರಿದ್ದರು.

ಮನವಿಯಲ್ಲಿ, ದಾವಣಗೆರೆ, ಬೆಳಗಾವಿ ಸೇರಿದಂತೆ ಹಲವೆಡೆ “ಐ ಲವ್ ಮೊಹಮ್ಮದ್” ಅಭಿಯಾನ ಹೆಸರಿನಲ್ಲಿ ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ, ಹಲ್ಲೆ ಮತ್ತು ಭಯೋತ್ಪಾದಕ ಕೃತ್ಯಗಳು ನಡೆದಿರುವುದನ್ನು ಉಲ್ಲೇಖಿಸಲಾಗಿದೆ. ಇಂತಹ ಕೃತ್ಯಗಳು ರಾಜ್ಯದ ಶಾಂತಿ ಹಾಗೂ ಸಾಮರಸ್ಯಕ್ಕೆ ದೊಡ್ಡ ಸವಾಲು ಎಸೆದಿವೆ ಎಂದು ಸಮಿತಿಯವರು ತಿಳಿಸಿದ್ದಾರೆ.

ಅವರು ಮುಂದುವರಿಸಿ, ಇಂತಹ ಘಟನೆಗಳು ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಸಹ ಗಲಭೆಗಳಿಗೆ ಕಾರಣವಾಗಿರುವುದರಿಂದ, ಕರ್ನಾಟಕದಲ್ಲಿಯೂ ಕೂಡ ತಕ್ಷಣದ ಕ್ರಮ ಅಗತ್ಯವಿದೆ ಎಂದು ಒತ್ತಾಯಿಸಿದರು.

ಮನವಿಯಲ್ಲಿ ಮಂಡಿಸಲಾದ ಪ್ರಮುಖ ಬೇಡಿಕೆಗಳು ಈ ಕೆಳಗಿನಂತಿವೆ:

  1. “ಐ ಲವ್ ಮೊಹಮ್ಮದ್” ನೆಪದಲ್ಲಿ ಹಿಂದೂಗಳ ಮೇಲೆ ದಾಳಿ ಮಾಡಿದ ಆರೋಪಿಗಳನ್ನು ಹಾಗೂ ಅವರ ಹಿಂಬಾಲಕರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
  2. ದಾಳಿಕೋರರಿಂದಲೇ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಉಂಟಾದ ನಷ್ಟವನ್ನು ವಸೂಲಿ ಮಾಡುವ ನೀತಿ ಅನುಸರಿಸಬೇಕು.
  3. ಹಿಂದೂ ಹಬ್ಬಗಳ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಗಲಭೆ ಉಂಟುಮಾಡುವವರ ವಿರುದ್ಧ NSA ಮತ್ತು UAPA ಕಾಯಿದೆಗಳಡಿ ಕ್ರಮ ಕೈಗೊಳ್ಳಬೇಕು.
  4. ದ್ವೇಷಪೂರಿತ ಬೋಧನೆ ನೀಡುವ ಮಸೀದಿಗಳು, ಮದರಸಾಗಳು ಅಥವಾ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು.
  5. ಮುಂದಿನ ದೀಪಾವಳಿ ಸೇರಿದಂತೆ ಪ್ರಮುಖ ಹಬ್ಬಗಳಲ್ಲಿ ಇಂತಹ ಅಶಾಂತಿ ತಡೆಗಟ್ಟಲು ಪೊಲೀಸ್ ಇಲಾಖೆ ಮುಂಚಿತ ಕ್ರಮ ಕೈಗೊಳ್ಳಬೇಕು.

ಇದಲ್ಲದೆ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇವರುಗಳು ಹಾಗೂ ರಾಷ್ಟ್ರಪುರುಷರ ಚಿತ್ರಗಳಿರುವ ಪಟಾಕಿಗಳನ್ನು ಮಾರಾಟ ಮಾಡುವುದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಸಮಿತಿಯವರು ಹೇಳಿದರು. ಇಂತಹ ಪಟಾಕಿಗಳು ಸಿಡಿಸಿದ ನಂತರ ದೇವತೆಗಳ ಚಿತ್ರಗಳು ರಸ್ತೆಗಳಲ್ಲಿ ಹರಡುವುದು, ತುಳಿಯಲ್ಪಡುವುದು ಅಥವಾ ಕಸದ ಬುಟ್ಟಿಯಲ್ಲಿ ಬೀಳುವುದರಿಂದ ದೇವತೆಗಳ ಅವಮಾನವಾಗುತ್ತದೆ. ಆದ್ದರಿಂದ ಇಂತಹ ಪಟಾಕಿಗಳ ಮಾರಾಟದ ಮೇಲೆ ನಿಷೇಧ ಹೇರಬೇಕೆಂದು ಮತ್ತು ಸಂಬಂಧಿತ ವ್ಯಾಪಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಕೇಳಿಕೊಳ್ಳಲಾಯಿತು.

ಇತಿ ತಮ್ಮ ವಿಶ್ವಾಸಿ,
ಶ್ರೀ ಸುರೇಶ್ ಆರ್
ಹಿಂದೂ ರಾಷ್ಟ್ರ ಸಮನ್ವಯ ಸಮಿತಿ
📞 ಸಂಪರ್ಕ: 9611006100, 7204082609

Leave a Reply

Your email address will not be published. Required fields are marked *