ಅಬ್ಬಿಗೆರೆ ಸಮುದಾಯ ಭವನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಮಾಜಿ ಪಾಲಿಕೆ ಸದಸ್ಯ ಕೆ ನಾಗಭೂಷಣ್ ಚಾಲನೆ”
(ನರಸಿಂಹಮೂರ್ತಿ ವೈ ಜಿ ವರದಿಗಾರರು ಬಯಲು ಸಿಂಹ ಪೀಣ್ಯ ದಾಸರಹಳ್ಳಿ)
ದಾಸರಹಳ್ಳಿ ಕ್ಷೇತ್ರದ ಮಾಜಿ ಪಾಲಿಕೆ ಸದಸ್ಯ ಕೆ ನಾಗಭೂಷಣ್ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಕೆಪಿಸಿಸಿ ಸದಸ್ಯ ರಾಜಣ್ಣ ಅವರ ನೇತೃತ್ವದಲ್ಲಿ ಸಮುದಾಯ ಭವನದಲ್ಲಿ ಕಾಂಗ್ರೆಸ್ ಸರ್ಕಾರ ಆಯೋಜಿಸಿರುವ ಐದು ಭಾಗ್ಯಗಳಲ್ಲಿ ನಾಲ್ಕನೇ ಭಾಗ್ಯವಾದ ಗೃಹಲಕ್ಷ್ಮಿ ಯೋಜನೆಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಭೂತಪೂರ್ವ ಕಾಗಿ ಚಾಲನೆ ನೀಡುತ್ತಿರುವುದರ ನಿಮಿತ್ತ ಆಯಾಯ ಜಿಲ್ಲೆಗಳು ತಾಲೂಕುಗಳಲ್ಲಿ ಮಹಾನಗರ ಪಾಲಿಕೆ ವಾರ್ಡ್ಗಳಲ್ಲಿ ಹೀಗೆ ಚಾಲನೆ ನೀಡುವುದರ ಪ್ರಯುಕ್ತ ದಾಸರಹಳ್ಳಿ ಕ್ಷೇತ್ರದ ಅಬ್ಬಿಗೆರೆಯಲ್ಲಿ ಕೆ ನಾಗ್ಭೂಷಣ್ ತಮ್ಮ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಬಿಬಿಎಂಪಿ ಅಧಿಕಾರಿಗಳೊಂದಿಗೆ ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಸರ್ಕಾರದ ಮಹತ್ವಕಾಂಕ್ಷಿಯ ಗೃಹಲಕ್ಷ್ಮಿ ಯೋಜನೆಗೆ ದೀಪ ಬೆಳಗಿಸುವುದರ ಮುಖಾಂತರ ಚಾಲನೆ ನೀಡಿ ಮಾತನಾಡುತ್ತಾ ನಮ್ಮ ಸರ್ಕಾರವು ನಮ್ಮ ನಾಡಿನ ಜನತೆಯು ನೆಮ್ಮದಿಯಿಂದ ಜೀವನ ಮಾಡಬೇಕಾದ ಗೃಹಜೋತಿ ಗೃಹಲಕ್ಷ್ಮಿ ಅನ್ನ ಭಾಗ್ಯ ನಿರುದ್ಯೋಗಿಗಳಿಗೆ ತಿಂಗಳ ಮಾಶಾಸನ ಹೀಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಈ ಯೋಜನೆ ಯನ್ನು ನಮ್ಮ ನಾಡಿನ ಜನತೆ ಇದೆಲ್ಲದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕೆ ವಿಶ್ವನಾಥ್. ಎಬಿ ಬಿ ಮಂಜುನಾಥ್, ಸಚಿನ್, ರಾಮಾಂಜಿ, ರಂಗಣ್ಣ, ಹನುಮಂತ ರಾಜು, ಮಹಿಳಾ ಮುಖಂಡರು ಅನುಸೂಯಮ್ಮ, ರಾಜಮ್ಮ, ಅರುಣರಾಜ್, ಸಾವಿತ್ರಿ, ಅನ್ನಪೂರ್ಣ, ಶೆಟ್ಟಳ್ಳಿ ವಾರ್ಡಿನ ಮತ್ತು ಅಬ್ಬಿಗೆರೆಯ ಸಾರ್ವಜನಿಕರು ಇದ್ದರು.