ಬೆಂಗಳೂರು : ಶಿಕ್ಷಕರ ದಿನಾಚರಣೆ ಪ್ರಯುಕ್ತ ಟೆಲಿಕಾಂ ಎಂಪ್ಲಾಯ್ಸ್ ಅಂಡ್ ಅದರ್ಸ್ ಹೌಸಿಂಗ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನೆಲಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಗುರುವಂದನೆ ಹಾಗೂ ಶಾಲಾ ಮಕ್ಕಳಿಗಾಗಿ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ದೇಶಿಸಿ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಎನ್ ನರಸಿಂಹಮೂರ್ತಿ ಮಾತನಾಡಿ ‘ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ, ಬದುಕು ಕಟ್ಟಿಕೊಂಡಿರುವ ನನಗೆ ಸರ್ಕಾರಿ ಶಾಲಾ ಶಿಕ್ಷಕರು ಮತ್ತು ಮಕ್ಕಳ ಬಗ್ಗೆ ಅಪರಿಮಿತ ಗೌರವ, ಅಭಿಮಾನವಿದೆ. ಈ ಕಾರಣದಿಂದಾಗಿ ಪ್ರತಿವರ್ಷ ಒಂದಿಲ್ಲೊಂದು ಸರ್ಕಾರಿ ಶಾಲೆಯ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸುವುದು, ಮಕ್ಕಳಿಗೆ ಉಚಿತ ಸಮವಸ್ತ್ರ,ನೋಟ್ ಪುಸ್ತಕ, ಲೇಖನ ಪರಿಕರಗಳನ್ನು ವಿತರಿಸುವ ಪರಿಪಾಠವನ್ನು ಕಳೆದ ಹಲವು ವರ್ಷಗಳಿಂದ ಬೆಳೆಸಿಕೊಂಡು ಬಂದಿದ್ದೇನೆ. ನೆಲಮಂಗಲ ಟೌನ್ ನಲ್ಲಿರುವ ಈ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಸಮವಸ್ತ್ರ, ಬ್ಲೇಝರ್, ಶೂ, ನೋಟ್ ಪುಸ್ತಕ, ಲೇಖನ ಪರಿಕರಗಳನ್ನು ವಿತರಿಸಲು ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ವಿತರಸುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಎಚ್ ತಿಮ್ಮಯ್ಯ, ನಗರಸಭೆ ಸದಸ್ಯ ನರಸಿಂಹಮೂರ್ತಿ, ಡಾ.ರಾಜೇಂದ್ರ ಪ್ರಸಾದ್, ಜಯಪ್ರಸಾದ್, ಎಸ್ ಡಿ ಎಂ ಸಿ ಅಧ್ಯಕ್ಷೆ ವಿಜಯಲಕ್ಷ್ಮಿ, ಉಪಾಧ್ಯಕ್ಷೆ ಶ್ವೇತಾ, ಚಿಲುಮೆ ಸಂಸ್ಥೆಯ ಜೋಸೆಫ್, ಹ್ಯಾಂಡ್ ಇನ್ ಹ್ಯಾಂಡ್ ಸಂಸ್ಥೆಯ ಅಂಬಿಕಾ, ಮಂಜುಳ, ಮಂಜುನಾಥ್, ರವಿಕುಮಾರ್, ಗಂಗರಾಜ್, ಮುಖ್ಯಶಿಕ್ಷಕ ಗಂಗಬೈಲಪ್ಪ, ಬಿ.ಆರ್.ಲೋಕೇಶ್, ರತ್ನಮ್ಮ, ವಾಣಿಶ್ರೀ, ಗೀತಾ, ವಿಜಯಲಕ್ಷ್ಮಿ, ಸುಶೀಲಾ, ವೀಣಾ ಸೇರಿದಂತೆ ಇನ್ನಿತರರಿದ್ದರು.
