(ವರದಿಗಾರರು ವೈ ಜಿ ನರಸಿಂಹ ಮೂರ್ತಿ ಬಯಲು ಸಿಂಹ ಪೀಣ್ಯ ದಾಸರಹಳ್ಳಿ )

ಪೀಣ್ಯ ದಾಸರಹಳ್ಳಿ : ಈಗಿನ ಪರಿಸ್ಥಿತಿ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿ ಗಳು ಸಂವಿಧಾನ ಗಾಳಿ ತೂರಿ ಪ್ರಜಾಪ್ರಭುತ್ವ ಅಧೋಗತಿಗೆ ತೆಗೆದು ಕೊಂಡು ಹೋಗುತ್ತಿ ದ್ದಾರೆ ಎಂದು ಯುವ ನಟ ಚಲನ ಚಿತ್ರ ನಟ ಚೇತನ್ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಪ್ರಜಾ ಶಕ್ತಿ ಸೇವಾ ಸಂಘದ ಸಂಸ್ಥಾಪಕ ಕಾವರನಹಳ್ಳಿ ಬೆಟ್ಟಪ್ಪ ಜಿ. ರಾವಣ್ ನೇತೃತ್ವದಲ್ಲಿ ಪ್ರಜಾ ಶಕ್ತಿ ಸೇವಾ ಸಂಘದ 7ನೇ ವಾರ್ಷಿಕೋತ್ಸವಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಭಾರತ ರತ್ನ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಎಲ್ಲಾ ಪಕ್ಷಗಳ ಸರ್ಕಾರಗಳ ಆಡಳಿತ ವಿರುದ್ಧ ಯುವ ಚಿತ್ರ ನಟ ಚೇತನ್ ಹರಿಹಾಯ್ದರು.
ನಮ್ಮ ಪ್ರಜಾ ಶಕ್ತಿ ಸೇವಾ ಸಂಘದ ಸ್ಥಾಪನೆಗೊಂಡು ತನ್ನದೇಯಾಗ ಪ್ರಾಮಾಣಿಕ ನಿಸ್ವಾರ್ಥ ಮತ್ತು ನಿಷ್ಠೆ ಸೇವೆಯಿಂದ ನಮ್ಮ ಸಂಘದ ಪದಾಧಿಕಾರಿಗಳು ಕಾರ್ಯಕರ್ತರು ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದ ಚಾಮರಾಜನಗರ ಜಿಲ್ಲೆವರೆಗೆ ಕಾರ್ಯ ಚಟುವಟಿಕೆ ಮಾಡುತ್ತಿದ್ದೆ ಪ್ರಜಾ ಶಕ್ತಿ ಸೇವಾ ಸಂಘದ 7ನೇ ವರ್ಷ ವಾರ್ಷಿಕೋತ್ಸವ ಆಚರಣೆ ಮಾಡುತ್ತಿರುವುದು ಖುಷಿ ತಂದಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಕಾರವನಹಳ್ಳಿ ಬೇಟ್ಟಪ್ಪ ಜಿ ರಾವಣ್ ಪ್ರಾಸ್ತಾವಿಕವಾಗಿ ಭಾಷಣದಲ್ಲಿ ಎಳೆ ಎಳೆಯಾಗಿ ಬಿಡಿಸಿ ಮಾತನಾಡಿದರು.
ಪರಮ ಪೂಜ್ಯ ಶ್ರೀ ಸಿದ್ದಲಿಂಗೇಶ್ವರ ಮಹಾ ಸ್ವಾಮೀಜಿ ವಿಜಾಪುರ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬೇಲಬರ್ ಬಿ ಕುನಿ ಬುದ್ಧಮ್ಮ ಅವರು ಬುದ್ದ ಬಸವ ಮತ್ತು ಅಂಬೇಡ್ಕರ್ ಅವರ ಆದರ್ಶಗಳು ಪ್ರತಿಯೊಬ್ಬ ಪ್ರಜೆಯೂ ತಮ್ಮ ತಮ್ಮ ಮಕ್ಕಳಿಗೆ ಕಿರು ಪುಸ್ತಕಗಳನ್ನು ಓದಿ ತಿಳಿದು ಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು.
ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಘದ ರಾಜ್ಯಾಧ್ಯಕ್ಷ ಉಮೇಶ್ ಗೌಡ ಹೆಗ್ಗನಹಳ್ಳಿ ಸರ್ವರಿಗೂ ಸುಸ್ವಾಗತ ಕೋರಿದರು.
ಮಹಿಳಾ ರಾಜ್ಯಾಧ್ಯಕ್ಷೆ ಸೌಭಾಗ್ಯ ಹೆಗ್ಗನಹಳ್ಳಿ ವಂದಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ನಾರಾಯಣ, ಪರಶುರಾಮ್,ಪವನ್, ಕಪ್ಪೇರಾಯ, ಶಿವಪ್ರಸಾದ್, ಹೇಮಂತ್,ವೆಂಕಟೇಶ್,ಶಶಿ ಗುರು,
ಮಹಿಳಾ ಮುಖ್ಯಸ್ಥೆರಾದ ಛಾಯಾ ಶೋಭಾ, ಶಿಲ್ಪಾ,ಕಲ್ಯಾಣಿ, ಮಂಜುಳಾ, ಯಾಸ್ಮಿನ್, ತಾಸಿನಾ ಭಾನು, ಮತ್ತು ವಿವಿಧ ಜಿಲ್ಲಾ, ತಾಲೂಕ ಮತ್ತು ಗ್ರಾಮಗಳ ಪ್ರಜಾ ಶಕ್ತಿ ಸೇವಾ ಸಂಘದ ಪದಾಧಿಕಾರಿಗಳು ಸದಸ್ಯರು ಹಾಗೂ ಕಾರ್ಯಕರ್ತರು ಮುಂತಾದವರು ಇದ್ದರು.

Leave a Reply

Your email address will not be published. Required fields are marked *