ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 1,613 ಪ್ರಕರಣ ಇತ್ಯರ್ಥ: ಕೆಜಿಎಫ್: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕೆಜಿಎಫ್ ನಗರದ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೋಕ ಅದಾಲತ್ ನಲ್ಲಿ ಒಟ್ಟು 1613 ಪ್ರಕರಣಗಳು ಇತ್ಯರ್ಥಗೊಂಡವು. ಮೋಟಾರ್ ಅಪಘಾತ ಪರಿಹಾರ ನ್ಯಾಯ ಮಂಡಳಿ ಪ್ರಕರಣ, ಹಣಕಾಸು ಸಂಸ್ಥೆಗಳಿಗೆ ಸಂಬಂಧಿತ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನ ಸಂಬಂಧಿಸಿ ಕ್ಲೈಮ್ ಗಳು ವೈವಾಹಿಕ /ಕೌಟುಂಬಿಕ ಪ್ರಕರಣ( ವಿಚ್ಛೇದನ ಹೊರತುಪಡಿಸಿ) ಚೆಕ್ ಬೌನ್ಸ್.ಆಸ್ತಿಯಲ್ಲಿ ಪಾಲು. ದೂರವಾಣಿ ಬಾಕಿ ಬಿಲ್ ಗಳ ಪಾವತಿ. ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣ ಸೇರಿದಂತೆ ರಾಜಿಯಾಗಬಲ್ಲ 7,132 ಪ್ರಕರಣಗಳು ಇನ್ನೂ ಇತ್ಯಾರ್ಥಕ್ಕೆ ಬಾಕಿ ಇದ್ದು, ಶನಿವಾರ ಲೋಕ ಅದಾಲತ್ ಇತ್ಯರ್ಥಕಾಗಿ 1,830 ಪ್ರಕರಣಗಳು ಬಂದಿದ್ದವು. ಅವುಗಳ ಪೈಕಿ 1,613 ಪ್ರಕರಣಗಳು ಇತ್ಯರ್ಥಗೊಂಡು, ಒಟ್ಟು 2.88 ಕೋಟಿ ರೂ ಹಣ ಸಂಗ್ರಹವಾಗಿದೆ. ಈ ಮೆಗಾ ಲೋಕದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಮುಜುಪರ್ ಮಂಜರಿ. ಅಪಾರ ಹಿರಿಯ ಶ್ರೇಣಿ ನ್ಯಾಯಾಧೀಶ .ರಹಿಮ್ ಅಲಿ ಮೌಲ ಸಾಬ್. ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು jmfc ಆರ್ ಮಂಜುನಾಥ್. 1ನೇ ಅಪಾರ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ಎಮ್ ವಿನೋದ್ ಕುಮಾರ್ .ಮಂಜು ಮತ್ತಿತರರಿದ್ದರು.

Sep 11, 2023

Leave a Reply

Your email address will not be published. Required fields are marked *