ಅಮ್ಮ ಹೆಸರಲ್ಲಿ ಐದು ಆಂಬುಲೇನ್ಸ್ ವಾಹನಗಳ ಲೋಕಾರ್ಪಣೆ
ಚಿಕ್ಕಬಳ್ಳಾಪುರ: ಕಾಂಗ್ರೇಸ್ ಪಕ್ಷ ನನ್ನನ್ನ ಗುರ್ತಿಸಿ ಟಿಕೇಟ್ ನೀಡಿ ಗೆಲ್ಲಿಸಿದೆ ಈ ಜನ್ಮಕ್ಕೆ ಇಷ್ಟು ಸಾಕು ನಮ್ಮ ಅಮ್ಮ ನೆನಪಿಗಾಗಿ ಅಮ್ಮ ಆಂಬುಲೆನ್ಸ್ ಕ್ಷೇತ್ರದ ಜನರಿಗೆ ಸೇವೆ ಮಾಡುತ್ತವೆ ನಾಕುವರೆ ವರ್ಷ ಸುಮ್ಮನಿದ್ದು ಚುನಾವಣೆ ವೇಳೆಗೆ ಸ್ಕೋಪ್ ಕೊಟ್ಟು ಮನೆ ಮನೆಗೂ ಬೆಂಕಿ ಇಡೋ ಕೆಲಸ ಮಾಡೋ ಜಾಯಮಾನ ನನ್ನದಲ್ಲ ನಾನು ಗೆದ್ದರೂ ಸೋತರೂ ಈ ಸೇವೆ ಮುಂದುವರೆಸುತ್ತೇನೆಂದು ಶಾಸಕ ಪ್ರದೀಪ್ ಈಶ್ವರ್ ವಾಗ್ದಾನ ಮಾಡಿದರು.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತಮ್ಮ ತಾಯಿ ಮಂಜುಳ ಹೆಸರಿನಲ್ಲಿ ಅವರ ಹುಟ್ಟು ಹಬ್ಬದ ದಿನದಂದೆ ಕ್ಷೇತ್ರಕ್ಕೆ ಐದು ಆಂಬುಲೆನ್ಸ್ ಗಳನ್ನ ಕೊಡುಗೆಯಾಗಿ ನೀಡಿದರು ಬೋಗನಂದೀಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅನಾಥ ಮಕ್ಕಳ ಕೈಲಿ ಉದ್ಘಾಟನೆ ಮಾಡಿಸಿದರು ದೇವಾಲಯದ ಮುಂಬಾಗವೇ ಸಿದ್ದಪಡಿಸಿದ್ದ ವೇದಿಕೆಯಲ್ಲಿ ಮಾತನಾಡಿದ ಅವರು ಪಕ್ಷ ನನ್ನ ಗುರುತಿಸಿ ಟಿಕೇಟ್ ಕೊಟ್ಟು ಗೆಲ್ಲಿಸಿದೆ ನನ್ನ ಗೆಲ್ಲಿಸಿದ ಜನರ ಋಣ ಈ ಮೂಲಕ ತೀರಿಸಿಕೊಳ್ಳುತಿದ್ದೇನೆ ವಿದ್ಯಾರ್ಥಿಗಳಿಗೆ ನಾಳೆಯಿಂದ ಕಲರ್ ಡ್ರೆಸ್ ಕೊಡೋ ಕೆಲಸ ಮಾಡುತಿದ್ದೇನೆ ಹೆಣ್ಣು ಮಕ್ಕಳಿಗೆ ಸೀರೆ ಅರಶಿಣ ಕುಂಕುಮ ನೀಡಿ ಆಶೀರ್ವಾದ ಬೇಡಿದ್ದೇನೆ ಇಂದು ನಾನು ಲೋಕಾರ್ಪಣೆ ಮಾಡುತ್ತಿರುವ ಆಂಬೂಲೆನ್ಸ್ ಗಳು ಒಂದು ಮಂಚೇನಹಳ್ಳಿ ಹೋಬಳಿ ಮತ್ತೊಂದು ಪೆರೇಸಂದ್ರ ಆಸ್ಪತ್ರೆ ವಿಬಾಗ ಮತ್ತೊಂದು ನಂದಿ ಹೋಬಳಿ ಇನ್ನೆರಡು ನಗರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತವೆ ಇದು ಸಂಪೂರ್ಣ ಪ್ರದೀಪ್ ಈಶ್ಬರ್ ಪೌಂಡೇಶನ್ ನಿರ್ವಹಿಸುತ್ತದೆ ದಿನದ 24 ಗಂಟೆ ಕೆಲಸ ಮಾಡುತ್ತದೆ ರಾತ್ರಿ ಮತ್ತು ಹಗಲು ಪಾಳಿಯಲ್ಲಿ ಹತ್ತು ಜನ ಡ್ರೈವರ್ ಗಳು ಕಾರ್ಯನಿರವಹಿಸುತ್ತಾರೆ ಅವರ ಬಳಿ ಇರೋ ನಂಬರ್ ಗೆ ಕಾಲ್ ಮಾಡಿದ್ರೆ ಬರ್ತಾರೆ ಕಾರು ಇರೋರು ನೆಮ್ಮದಿಯಾಗಿ ಆಸ್ಪತ್ರೆಗೆ ಹೋಗ್ತಾರೆ ಅದೆ ಬಡವರಿಗೇನಾದ್ರು ತೊಂದರೆ ಆದ್ರೆ ಅವರು ಮತ್ತೊಬ್ಬರಿಗೆ ಕಾಲ್ ಮಾಡಿ ಅವರು ಬರೋ ವರ್ಗೂ ಕಾಯೋ ವೇಳೆಗೆ ಜೀವ ಹೋಗುತ್ತೆ ಅಂತವರಿಗೆ ನಮ್ಮ ಆಂಬುಲೆನಸ್ ಸೇವೆ ಲಬ್ಯವಾಗಲಿ ಎಂದರು.
ಪ್ರದೀಪ್ ಈಶ್ವರ್ ಕ್ಷೇತ್ರಕ್ಕೆ ನೀಡುತ್ತಿರುವ ಸೇವೆಯನ್ನ ಶ್ಲಾಘಿಸಿದ ಮಾಜಿ ಸಿಎಂ ಮಾಜಿ ಸಂಸದ ವೀರಪ್ಪಮೊಯಿಲಿ ಜನರ ಆರೋಗ್ಯ ದೃಷ್ಟಿಯಿಂದ ಆಂಬುಲೆನಸ್ ಸೇವೆ ಮಾಡುತ್ತಿರುವುದು ಉತ್ತಮ ಕೆಲಸ ಅವರ ಆರೋಗ್ಯ ಮತ್ತು ಶೈಕ್ಷಣಿಕ ಅಭಿವೃದ್ದಿಯ ಪಣಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ ಅವರ ಆಲೋಚನೆಗಳು ಸಹಾಯ ಜನಮಾನಸದಲ್ಲಿ ಉಳಿಯುವಂತಾಗಿದೆ ಅವರಿಗೆ ಶುಭವಾಗಲಿ ಅಂತಹ ಶಾಸಕರೊಬ್ಬರು ಚಿಕ್ಕಬಳ್ಳಾಪುರ ಕ್ಕೆ ಸಿಕ್ಕಿರುವುದು ಕ್ಷೇತ್ರದ ಅಭಿವೃದ್ದಿಗೆ ಕಾಯಕ ಎಂದರು.
ಕಾಂಗ್ರೇಸ್ ಮುಖಂಡ ಯಲುವಳ್ಳಿ ರಮೇಶ್ ಮಾತನಾಡಿ
ಡಾ.ಕೆ.ಸುಧಾಕರ್ ಸೋಲೋದು ಖಚಿತ ಭವಿಷ್ಯ ಹೇಳಿದ್ದೆ ಪ್ರದೀಪ್ ಈಶ್ವರ್ ಚುನಾವಣಾ ಪ್ರಚಾರವೇ ವಿಬಿನ್ನರೀತಿಗೆ ಪ್ರದೀಪ್ ಈಶ್ವರ್ ಕಾರ್ಯ ಶ್ಲಾಘನೆ. ಶಾಸಕ ಪ್ರದೀಪ್ ಈಶ್ವರ್ ತಮ್ಮ ತಾಯಿ ಹೆಸರಲ್ಲಿ ಕ್ಷೇತ್ರಕ್ಕೆ ಐದು ಆಂಬುಲೆನಸ್ ಕೊಡುವೆ ರಾಜ್ಯದಲ್ಲಿಯೇ ಯಾರು ಈ ರೀತಿಯ ಕೊಡುಗೆ ನೀಡಿಲ್ಲ ಅವರು ನುಡಿದಂತೆ ನಡೆದ ಶಾಸಕ ಎಂದು ಕಾಂಗ್ರೇಸ್ ಹಿರಿಯ ಮುಖಂಡ ಯಲುವಳ್ಳಿ ರಮೇಶ್ ಶ್ಲಾಘನೆ ಮಾಡಿದರು.
ನಂದಿಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆಂಬ್ಯುಲೆನ್ಸ್ ಉದ್ಘಾಟನಾ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಎನ್, ರಮೇಶ್ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಪ್ರದೀಪ್ ಈಶ್ಬರ್ ಐದು ಆಂಬುಲೆನ್ಸ್ ಗಳನ್ನ ಉಚಿತವಾಗಿ ನೀಡಿ ಉತ್ತಮ ಕೆಲಸ ಮಾಡಿದ್ದಾರೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಿರುವ ಅವರು ನುಡಿದಂತೆ ನಡೆದಿದ್ದಾರೆ ಅವರು ಚುನಾವಣೆಗೆ ಸ್ಪರ್ದಿದಾಗಿನಿಂದ ಅವರೊಟ್ಟಿಗೆ ಕೆಲಸ ಮಾಡಿದ್ದೇನೆ ಹಿರಿಯರನ್ನ ಅಪಾರವಾಗಿ ಗೌರವಿಸುವ ವ್ಯಕ್ತಿ ಪ್ರದೀಪ್ ನಮಗೂ ತಂದೆ ಸಮಾನರಾದ ಗೌರವ ಕೊಟ್ಟಿದ್ದಾರೆ ಕ್ಷೇತ್ರಕ್ಕೆ ಇತರದ ನಾಯಕನೊಬ್ಬ ಸಿಕ್ಕಿರುವುದು ಕ್ಷೇತ್ರಕ್ಕೆ ಕ್ಷೋಬೆ ತಂದಿದೆ ಎಂದು ಪ್ರದೀಪ್ ಕಾರ್ಯಚಟುವಟಿಕೆಗಳನ್ನ ಬೆಂಬಲಿಸಿದರು.
ಆಂಬುಲೆನಸ್ ಲೋಕಾರ್ಪಣೆಗೂ ಮುನ್ನ ಕಾರ್ಯಕರ್ತರು ಅಭಿಮಾನಿಗಳು ಪ್ರದೀಪ್ ಈಶ್ಬರ್ ಅವರನ್ನ ನಂದಿ ಕ್ರಾಸ್ ನಿಂದ ನಂದಿವರೆಗೂ ಬೈಕ್ ರಿಯಾಲಿಯಲ್ಲಿ ಕರೆತಂದ್ರು ನಂದಿ ದೇವಾಲಯ ವೃತ್ತದಲ್ಲಿ ಬೃಹತ್ ಹಾರ ಹಾಕಿ ಸ್ವಾಗತಿಸಿದರು ಹೆಣ್ಮಕ್ಕಳ ಕುಂಬ ಕಳಸ ಜಾನಪದ ಕುಣಿತ ಡೊಳ್ಳುಕುಣಿತ ಜನಾಕರ್ಷಣೆಯಾಗಿತ್ತು ಬೋಗನಂದೀಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಆಂಬುಲೆನ್ಸ ವಾಹನಗಳಿಗೆ ಚಾಲನೆ ನೀಡಿದರು ನಂತರ ಚಿಕ್ಕಬಳ್ಳಾಪುರ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿಯೂ ಆಂಬುಲೆನಸ್ ಸೇವೆ ಬಗ್ಗೆ ಪ್ರಚಾರ ಮಾಡಿ ತುರ್ತು ಸಂದರ್ಭ ವಾಹನಗಳ ಬಳಕೆ ಮಾಡಿಕೊಳ್ಳುವಂತೆ ಜನರಿಗೆ ಕರೆ ನೀಡಿದರು.
ಈ ವೇಳೆ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ,ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಯರಾಮ್, ನಂದಿ ಬಾಗದ ಮುಖಂಡರು ಅಶೋಕ್,ಯಲುವಳ್ಳಿ ಜನಾರ್ದನ್, ರಮೇಶ್,ಪೆರೇಸಂದ್ರ ಜೋಳದ ಕಿಟ್ಟಿ,ಯುವ ಮುಖಂಡ ಕುಬೇರ ಅಚ್ಚು,ಮಹಿಳಾ ನಾಯಕಿ ಮಮತಾಮೂರ್ತಿ, ಮಂಗಳ ಪ್ರಕಾಶ್, ನಾರಾಯಣಮ್ಮ ಮತ್ತು ಇತರರು ಇದ್ದರು.



